ಮಾಡೂರು ಕಟಿಲೇಶ್ವರಿ ಶಾಮಿಯಾನ ಮತ್ತು ಟ್ರಾನ್ಸ್ ಪೋರ್ಟ್ ಮಾಲಕರಾದ ವೇಣುಗೋಪಾಲ್ ಶೆಟ್ಟಿ (57 ) ಮಂಗಳವಾರ ತಡರಾತ್ರಿ ಹೃದಯಾಪಘಾತದಿಂದ ನಿಧನರಾದರು.

ಕಳೆದ ಎರಡು ದಿವಸಗಳ ಹಿಂದೆ ಆಸ್ಪತ್ರೆ ಗೆ ದಾಖಲಾಗಿದ್ದ ಅವರು ಸೋಮವಾರ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು.
ಆದರೆ ಬುಧವಾರ ಮುಂಜಾನೆ ದೇವರ ಪಾದ ಸೇರಿದ್ದಾರೆ.
ಮೃತರು ಪತ್ನಿ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಇವರು ಉಳ್ಳಾಲ ಬರಿಕೆ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ರಾಗಿದ್ದರು.


