Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಮಂಗಳೂರು : ಬಾವಿ ನೀರಲ್ಲಿ ಡೀಸೆಲ್‌ – ನಿವಾಸಿಗಳು ಕಂಗಾಲು…!

UllalaVaniBy UllalaVaniMay 18, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು, ಮೇ. 18 : ಈ ಭಾಗದಲ್ಲಿ ಇರೋದು ಬಾವಿಗಳಾ ಅಥವಾ ಡೀಸೆಲ್ ಗುಂಡಿಗಳಾ ಅನ್ನೋ ಅನುಮಾನ ಈಗ ಶುರುವಾಗಿದೆ. ಯಾಕಂದ್ರೆ ಬಾವಿಯಿಂದ ನೀರು ಸೇದಿದರೆ ನೀರಿನ ಬದಲು ಡೀಸೆಲ್ ವಾಸನೆ ಮೂಗಿಗೆ ಅಪ್ಪಳಿಸುತ್ತದೆ. ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಕುಳಿತಿದ್ದಾರೆ. ಇಂತಹ ಸಮಸ್ಯೆ ಎದುರಾಗಿರೋದು ಎಲ್ಲಿ ಅಂತಿರಾ ಇಲ್ಲಿದೆ ಈ ಬಗ್ಗೆ ವರದಿ.

ಇದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಬಲಿಪಗುರಿ ರಸ್ತೆಯ ನಿವಾಸಿಗಳಿಗೆ ಈಗ ಕುಡಿಯುವ ನೀರಿನದ್ದೇ ದೊಡ್ಡ ಚಿಂತೆಯಾಗಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ಇಲ್ಲಿನ ಕೆಲವು ಮನೆಗಳ ಬಾವಿ ನೀರಲ್ಲಿ ಮೊದಲ ಬಾರಿಗೆ ಡೀಸೆಲ್ ನಂತಹ ಅಂಶ ಪತ್ತೆಯಾಗಿತ್ತು. ಆದರೆ ಆರಂಭದಲ್ಲಿ ನಿವಾಸಿಗಳು ಬಾವಿಗಳನ್ನು ಸ್ವಚ್ಛಗೊಳಿಸಿ ಸಮಸ್ಯೆ ಪರಿಹರಿಸಲು ಯತ್ನಿಸಿದ್ದರು. ದಿನ ಕಳೆದಂತೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತ , ಸದ್ಯ ಮೂರರಿಂದ ನಾಲ್ಕು ಬಾವಿಗಳ ನೀರು ಸಂಪೂರ್ಣ ಡೀಸೆಲ್ ನಂತಹ ದ್ರವ ಮಿಶ್ರಣಗೊಂಡು ಕಲುಷಿತಗೊಂಡಿದೆ. ಇದೀಗ ನೀರು ಕಲುಷಿತ ಗೊಂಡಿದ್ದು ಸ್ಥಳೀಯ ಹತ್ತಾರು ಕುಟುಂಬಗಳು ನೀರಿನ ಆಶ್ರಯ ಕಳೆದುಕೊಂಡಂತಾಗಿದ್ದು ಈ ನೀರು ಬಳಕೆ ಮಾಡಿ ಮನೆ ಮಂದಿ ಆರೋಗ್ಯ ಸಮಸ್ಯೆ ಎದುರಿಸಿದ್ದರು ಎನ್ನುವ ಗಂಭೀರ ಆರೋಪವನ್ನು ಸ್ಥಳೀಯ ನಿವಾಸಿ ದಿವಾಕರ್ ಮಾಡಿದ್ದಾರೆ.ಹೌದು ಇದು ಕೇವಲ ನಿವಾಸಿಗಳ ಆರೋಪ ಮಾತ್ರ ಅಲ್ಲ ನೀರಿನ ವಾಸನೆಯಿಂದ ಆತಂಕಗೊಂಡ ನಿವಾಸಿಗಳು, ನೀರಿನ ಸ್ಯಾಂಪಲ್ ಅನ್ನು ಸುರತ್ಕಲ್ ನ NITK ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದರು. ಬಂದಿರುವ ಪರೀಕ್ಷಾ ವರದಿಯಲ್ಲಿ ಕಳವಳಕಾರಿ ಅಂಶಗಳು ಬಹಿರಂಗವಾಗಿವೆ. ನೀರಿನಲ್ಲಿ ಅತಿ ಹೆಚ್ಚು ತೈಲ ಮತ್ತು ಗ್ರೀಸ್ (Oil and Grease) ಅಂಶ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ, ನೀರಿನ pH ಮಟ್ಟ ಕುಸಿದಿದ್ದು, ಅಪಾಯಕಾರಿ ಕೊಲಿಫಾರ್ಮ್ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ. ಇದು ಅಂತರ್ಜಲಕ್ಕೆ ಯಾವುದೋ ಮೂಲದಿಂದ ತೈಲ ಸೋರಿಕೆಯಾಗುತ್ತಿರುವುದರ ಸ್ಪಷ್ಟ ಮುನ್ಸೂಚನೆಯಾಗಿದೆ ಎಂದು ವರದಿಯಲ್ಲಿ ಸೂಚಿಸಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಯಶ್ರೀ.ಇನ್ನು ಸ್ಥಳೀಯ ನಿವಾಸಿಗಳ ಮನೆಯ ಬಾವಿ ನೀರು ಕಲುಷಿತವಾಗಿರುವುದರ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಹೇಳಿದರೆ ನಮ್ಮ ಇಲಾಖೆಯದ್ದಲ್ಲಾ, ಬದಲಾಗಿ ಬೇರೆ ಇಲಾಖೆ ಅವರಿಗೆ ಹೇಳಿ, ಸರಿ ಆಗದೆ ಇದ್ದಲ್ಲಿ ಬಾವಿ ಮುಚ್ಚಿ ಬಿಡಿ ಎನ್ನುವ ಉಡಾಫೆ ಉತ್ತರ ನೀಡ್ತಾರೆ ಎನ್ನಲಾಗಿದೆ. ಇದು ಕೇವಲ ಕೆಲ ಮನೆಗಳ ಸಮಸ್ಯೆಯಲ್ಲ. ಇದೇ ರೀತಿ ಮುಂದುವರಿದರೆ ಸುತ್ತಮುತ್ತಲಿನ ಪ್ರದೇಶದ ಬಾವಿಗಳಿಗೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುವ ಭೀತಿ ಇದೆ ಇದ್ದಕ್ಕೆ ಸೂಕ್ತ ಪರಿಹಾರ ಸಂಬಂಧ ಪಟ್ಟವರು ಮಾಡಲಿ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.ಒಟ್ಟಿನಲ್ಲಿ ಅಂತರ್ಜಲದಲ್ಲಿ ತೈಲ ಪದಾರ್ಥ ಪತ್ತೆಯಾಗಿರುವುದು ಕೇವಲ ಈ ಮನೆಗಳಿಗೆ ಮಾತ್ರವಲ್ಲ, ಇಡೀ ಪರಿಸರದ ಆರೋಗ್ಯಕ್ಕೆ ಮಾರಕವಾಗಿದೆ. ಇದೊಂದು ಗಂಭೀರ ಸಾರ್ವಜನಿಕ ಸಮಸ್ಯೆಯಾಗಿದ್ದು, ಜಿಲ್ಲಾಡಳಿತ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಮಾರಾಮಾರಿ..!

May 18, 2026

ಮಂಗಳೂರು: ಮೇ 29ರಿಂದ 31ರವರೆಗೆ ತಣ್ಣೀರುಭಾವಿ ಬೀಚ್‌ನಲ್ಲಿ ಸರ್ಫಿಂಗ್ ಸ್ಪರ್ಧೆ

May 18, 2026

ಸಿ.ಎಚ್. ಮಹಮ್ಮದ್ ಅವರಿಗೆ ಗೌರವ ಸನ್ಮಾನ

May 18, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಮಾರಾಮಾರಿ..!

By UllalaVaniMay 18, 20260

ಬೆಂಗಳೂರು, ಮೇ 18: ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಮಾರಾಮಾರಿ ನಡೆದಿರುವ ಘಟನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದಿದೆ. ರಾಷ್ಟ್ರೀಯ ಯುವ…

ಮಂಗಳೂರು: ಮೇ 29ರಿಂದ 31ರವರೆಗೆ ತಣ್ಣೀರುಭಾವಿ ಬೀಚ್‌ನಲ್ಲಿ ಸರ್ಫಿಂಗ್ ಸ್ಪರ್ಧೆ

May 18, 2026

ಏರ್ ಶೋ ವೇಳೆ ಭೀಕರ ವೈಮಾನಿಕ ಅವಘಡ – ಯುದ್ಧ ವಿಮಾನಗಳು ಪತನ

May 18, 2026

ಮಂಗಳೂರು : ಬಾವಿ ನೀರಲ್ಲಿ ಡೀಸೆಲ್‌ – ನಿವಾಸಿಗಳು ಕಂಗಾಲು…!

May 18, 2026
1 2 3 … 1,924 Next
Automatic YouTube Gallery

ಕೇಕ್, ಗೋಬಿ ಮಂಚೂರಿ ವಿಷವಾಗುತ್ತಿದೆಯೇ? ಉಳ್ಳಾಲದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ

ಉಳ್ಳಾಲದಲ್ಲಿ ಕೃತಕ ಬಣ್ಣದ ಆಹಾರಕ್ಕೆ ಬ್ರೇಕ್ ಹಾಕಲು ಸಾರ್ವಜನಿಕರ ಒತ್ತಾಯ;ಜನರ ಆರೋಗ್ಯದ ಜೊತೆ ಚೆಲ್ಲಾಟ ಬೇಡ: ಹೋಟೆಲ್,ಬೇಕರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಉಳ್ಳಾಲ ತಾಲೂಕಿನಲ್ಲಿ ಆಹಾರ ಸುರಕ್ಷತೆ ಪ್ರಶ್ನಾರ್ಥಕ..?!!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೇಕ್, ಗೋಬಿ ಮಂಚೂರಿ ವಿಷವಾಗುತ್ತಿದೆಯೇ? ಉಳ್ಳಾಲದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ
Now Playing
ಕೇಕ್, ಗೋಬಿ ಮಂಚೂರಿ ವಿಷವಾಗುತ್ತಿದೆಯೇ? ಉಳ್ಳಾಲದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ
ಉಳ್ಳಾಲದಲ್ಲಿ ಕೃತಕ ಬಣ್ಣದ ಆಹಾರಕ್ಕೆ ಬ್ರೇಕ್ ಹಾಕಲು ಸಾರ್ವಜನಿಕರ ಒತ್ತಾಯ;ಜನರ ...
ಉಳ್ಳಾಲದಲ್ಲಿ ಕೃತಕ ಬಣ್ಣದ ಆಹಾರಕ್ಕೆ ಬ್ರೇಕ್ ಹಾಕಲು ಸಾರ್ವಜನಿಕರ ಒತ್ತಾಯ;ಜನರ ಆರೋಗ್ಯದ ಜೊತೆ ಚೆಲ್ಲಾಟ ಬೇಡ: ಹೋಟೆಲ್,ಬೇಕರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಉಳ್ಳಾಲ ತಾಲೂಕಿನಲ್ಲಿ ಆಹಾರ ಸುರಕ್ಷತೆ ಪ್ರಶ್ನಾರ್ಥಕ..?!!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಳ್ಳಾಲದಲ್ಲಿ ಮಳೆಗಾಲದ ಭೀತಿ: ಮಂಜನಾಡಿ ದುರಂತ ಮರುಕಳಿಸದಿರಲಿ
Now Playing
ಉಳ್ಳಾಲದಲ್ಲಿ ಮಳೆಗಾಲದ ಭೀತಿ: ಮಂಜನಾಡಿ ದುರಂತ ಮರುಕಳಿಸದಿರಲಿ
ಭೂಕುಸಿತ ಆತಂಕ: ಉಳ್ಳಾಲ ಆಡಳಿತಕ್ಕೆ ಮುನ್ನೆಚ್ಚರಿಕೆಯ ಸವಾಲು; ಅಕ್ರಮ ಮಣ್ಣು ...
ಭೂಕುಸಿತ ಆತಂಕ: ಉಳ್ಳಾಲ ಆಡಳಿತಕ್ಕೆ ಮುನ್ನೆಚ್ಚರಿಕೆಯ ಸವಾಲು; ಅಕ್ರಮ ಮಣ್ಣು ಸಾಗಾಟಕ್ಕೆ ಕಡಿವಾಣ ಹಾಕಲು ಸಾರ್ವಜನಿಕರ ಒತ್ತಾಯ

ಮಳೆಗಾಲಕ್ಕೂ ಮುನ್ನ ಅಪಾಯ ಪ್ರದೇಶಗಳ ಸಮೀಕ್ಷೆಗೆ ಆಗ್ರಹ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version