ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ಸದಾ ಶಾಂತಿಯನ್ನೇ ಬಯಸುವ ಹಿಂದೂ ಬಾಂಧವರು ಮಕ್ಕಳನ್ನಾದರೂ ಹುಟ್ಟಿಸಿ ಎಂದು ಕರೆ ನೀಡಿದವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಕರೆ ನೀಡಿದ್ದಾರೆ.
ಅವರು ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿ ವಿನಾಯಕ ಮಂದಿರದ ವಠಾರದಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷತ್, ಮಾತೃಮಂಡಳಿ, ದುರ್ಗಾವಾಹಿನಿ ಉಳ್ಳಾಲ ಪ್ರಖಂಡ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ನ ಸುವರ್ಣ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ಹಿಂದೂಗಳ ನಂಬಿಕೆ, ಶ್ರದ್ಧೆಗಳಿಗೆ ಅನ್ಯಾಯವಾಗುತ್ತಿದ್ದು, ಹಿಂದೂ ಸಂಸ್ಕøತಿ ನಮ್ಮ ಆಚಾರ ವಿಚಾರಗಳು ಮುಂದಿನ ಪೀಳಿಗೆಗೆ ಉಳಿಯ ಬೇಕಾದರೆ ಹಿಂದೂ ಸಮಾಜ ರಕ್ಷಣೆಗೆ ಸಂಕಲ್ಪ ತೊಡಲು ಸಿದ್ಧರಾಗಬೇಕು. ಜಾನುವಾರು, ಹಿಂದೂ ಹುಡುಗಿಯರು ಓಡುವಾಗ ವಿರೋಧಿಸುವ ಹಿಂದೂಗಗಳು ಕನಿಷ್ಟ ಪಕ್ಷ ಹೆಚ್ಚುಮಕ್ಕಳನ್ನಾದರೂ ಸೃಷ್ಟಿಸಿ. ಇದರಿಂದ ಕರಾವಳಿ ಜಿಲ್ಲೆಯಲ್ಲಿ ಮುಸ್ಲಿಮರ ಸಂಖ್ಯಾಬಲವನ್ನು ಕಡಿಮೆಗೊಳಿಸಬಹುದು. ಹುಟ್ಟಿದ ಮಕ್ಕಳ ಆರೈಕೆ ಕೆಲ ತಿಂಗಳವರೆಗೆ ಮಾತ್ರ. ಮತ್ತೆ ಎಲ್ಲಾ ಸರಿಯಿದ್ದರೆ ಅವರೇ ದುಡಿದು ಬಾಳುತ್ತಾರೆ ಎಂದ ಅವರು ಕಳೆದ 68 ವರ್ಷಗಳಲ್ಲಿ ಭಾರತವನ್ನಾಳಿದ ರಾಜಕೀಯ ಮುಖಂಡರು ತಮ್ಮ ಸೀಟಿಗಾಗಿ, ಮುಸ್ಲಿಂರ ಓಟಿಗಾಗಿ ಮುಸ್ಲಿಂರನ್ನು ತುಷ್ಠೀಕರಣ ಮಾಡುತ್ತಾ ಬಂದಿದ್ದಾರೆ. ಆದರೆ ಇದನ್ನೆಲ್ಲ ಹಿಂದೂಗಳು ಸಹಿಸುತ್ತ ಬಂದಿದ್ದು, ಈವರೆಗೆ ಯಾರಿಗೂ ಹಿಂದೂ ಸಮಾಜ ಅನ್ಯಾಯ ಮಾಡಿಲ್ಲ.ಆದರೆ ಪ್ಟೆಟು ತಿಂದು ಕೂರುವ ಸಮಾಜವೂ ಅಲ್ಲ, ಅಧರ್ಮ ಮಾಡುವವರ ವಿರುದ್ಧ ಹಿಂದೂ ಸಮಾಜ ಸೆಟೆದು ನಿಲ್ಲಲು ಸಿದ್ಧವಿದೆ. ಈಗಿರುವ ಮುಸ್ಲಿಮರು ಮತ್ತು ಕ್ರೈಸ್ತರು ಈ ಹಿಂದೆ ಹಿಂದೂಗಳಾಗಿದ್ದವರೇ. ಅವರ ಪೂರ್ವಜರು ಹೇಡಿತನದಿಂದ ಮತಾಂತರಗೊಂಡಿದ್ದರು. ಆದರಿಂದ ಅವರ ವಂಶಸ್ಥರು ಎಲ್ಲರೂ ಹೇಡಿಗಳಾಗಿದ್ದಾರೆ. ಹಿಂದೂ ಸಮಾಜದ ವಿರುದ್ಧ ನಾವು ಪೂಜಿಸುವ ಗೋವಿನ ಮೇಲೆ ನಮ್ಮ ಹೆಣ್ಣು ಮಕ್ಕಳ ವಿರುದ್ಧ ಅಕ್ರಮಣವಾದಾಗ ನಾವು ಅದನ್ನು ದಿಟ್ಟತನದಿಂದ ಎದುರಿಸುವ ಅಗತ್ಯವಿದ್ದು, ಇದಕ್ಕೆ ಹೋರಾಟ ಅತೀ ಅಗತ್ಯ ಎಂದರು.
ಹಿಂದೂಗಳು ರಾಮ ಜನ್ಮಭೂಮಿಗಾಗಿ ಹೋರಾಟ ನಡೆಸುವ ಸ್ಥಿತಿ ಒದಗಿದೆ. ರಾಮನ ಜನ್ಮ ಸ್ಥಾನದ ಕುರಿತು ನ್ಯಾಯಾಲಯ ಹಿಂದೂಗಳ ಪರವಾಗಿ ತೀರ್ಪು ನೀಡಿದೆ. ಇದೀಗ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿಯೂ ತೀರ್ಪು ನಮ್ಮ ಪರವಾಗಿ ಬರಲಿದ್ದು, ಆವರೆಗೆ ನಾವು ಕಾಯಬೇಕಾಗಿದೆ ಎಂದ ಅವರು ಮುಸ್ಲಿಮರು ರಾಮ ಜನ್ಮಬೂಮಿ ಮಾತ್ರವಲ್ಲದೆ, ಮಥುರಾ, ಕಾಶಿಯ ಮೇಲೂ ಆಕ್ರಮಣ ಮಾಡಿದೆ ಎಂದರು.
ಭಾರತದಲ್ಲಿ ಮತಾಂತರ ಒಂದು ದೊಡ್ಡ ಗಂಡಾಂತರವಾಗಿದ್ದು, ಇದು ರಾಷ್ಟ್ರಾಂತರಕ್ಕೆ ಕಾರಣವಾಗುತ್ತಿದೆ. ಈಶಾನ್ಯ ರಾಜ್ಯಗಳು ಕ್ರೈಸ್ತೀಕರಣವಾಗಿದೆ. ಕ್ರೈಸ್ತ ಭೂಮಿ ಎನ್ನುವ ಈಶಾನ್ಯ ರಾಜ್ಯಗಳು ನಿಜವಾಗಿ ಕೃಷ್ಣನ ನಾಡಾಗಬೇಕು ಎಂದ ಅವರು ಕ್ರೈಸ್ತೀಕರಣ, ಇಸ್ಲಾಂ ಭಾರತೀಕರಣವಾಗಿರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉದ್ಯಮಿ ಸುರೇಶ್ ಶೆಟ್ಟಿ ಗುರುಮೆ ಕಾಪು ಮಾತನಾಡಿ ಆಧುನಿಕತೆಯನ್ನು ಅರ್ಥಮಾಡಲು ಬಹಳ ಗೊಂದಲಗಳಿವೆ. ಇದರಿಂದ ಯುವ ಶಕ್ತಿ ಹಾದಿ ತಪ್ಪುತ್ತಿದೆ. ಈ ನಡುವೆ ಸಾಮಾಜಿಕ ಜಾಲ ತಾಣಗಳು ಕಾಲಘಟ್ಟದ ದುರ್ದೈವವಾಗಿದೆ. ಹುಟ್ಟು ಆಕಸ್ಮಿಕವಾದರೆ ಸಾವು ಅನಿವಾರ್ಯ. ಈ ನಡುವೆ ಬಾಳುವ ಜೀವನ ಧಾರ್ಮಿಕ ನಡೆಗಳಿಂದ ಕೂಡಿದ್ದಲ್ಲಿ ಜೀವನದ ಯಶಸ್ಸು ಸಾಧ್ಯ ಎಂದರು.
ಬಜರಂಗದಳದ ರಾಜ್ಯ ಸಂಯೋಜಕ ಶರಣ್ ಪಂಪ್ವೆಲ್ ಮಾತನಾಡಿ ಲವ್ ಜಿಹಾದಿಗೆ ಇತ್ತೀಚೆಗೆ ನಡೆದ ಅತ್ತಾವರದ ಘಟನೆ ಸ್ಪಷ್ಟ ಉದಾಹರಣೆ. ಘಟನೆಯಲ್ಲಿ ಹಿಂದೂ ಯುವತಿಯನ್ನು ಅಪಹರಿಸಲು ಯತ್ನಿಸಿದಾತನ್ನು ಹಿಡಿದ ಹಿಂದೂ ಸಮಾಜದ 14 ಕಾರ್ಯಕರ್ತರನ್ನು ಬಳ್ಳಾರಿ ಜೈಲಿಗೆ ಹಾಕಿರುವುದು ಸರ್ಕಾರದ ಇಬ್ಬಗೆ ನೀತಿ. ಈ ಮೂಲಕ ಸರ್ಕಾರ ಹಿಂದೂಗಳ ಮೇಲೆ ಇಟ್ಟಿರುವ ಕಾಳಜಿಯನ್ನು ಪ್ರಶ್ನಿಸುವಂತಾಗಿದೆ. ದೇಶದಾದ್ಯಂತ 65 ಸಾವಿರ ಗ್ರಾಮಗಳಲ್ಲಿ ರಾಷ್ಟ್ರ ಪ್ರೇಮ ಹಾಗೂ ರಾಷ್ಟ್ರ ಶಕ್ತಿಯನ್ನು ಬೆಳೆಸುವ ಕೆಲಸ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ದುರ್ಗಾವಾಹಿನಿ ಮಹಿಳಾ ಶಕ್ತಿಯಿಂದ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ ಎಂದರು.
ಬಿಲ್ಲವ ಏಕೀಕರಣ ಸಮಿತಿ ಮಂಗಳೂರು ಇದರ ಅಧ್ಯಕ್ಷ ರವಿ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಉಳ್ಳಾಲ ವಲಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಚಂದನ್ ಗುರಿಕಾರ, ಕುತ್ತಾರು ಪಂಜಂದಾಯ ಬಂಟ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜಾ, ಉಳ್ಳಾಲ ಶ್ರೀ ನರಸಿಂಹ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀಕರ ಕಿಣಿ, ಉಳ್ಳಾಲ ಉಳಿಯ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಯು.ಎಸ್. ಪ್ರಕಾಶ್, ಮಂಗಳೂರು ಆರ್ಯ ಮರಾಠ ಸಮಾಜ ಸಂಘ ಕೋಶಾಧಿಕಾರಿ ಶ್ರೀಧರ್ ರಾವ್ ಕುಂಪಲ, ಕೊಲ್ಯ ಕುಲಾಲ ಸಂಘ ಅಧ್ಯಕ್ಷ ದೇವಪ್ಪ ಎಂ. ಪಿಲಾರ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರು, ಕೊಲ್ಯ ಶ್ರೀ ನಾಗಬ್ರಹ್ಮ ಕ್ಷೇತ್ರ ಧರ್ಮದರ್ಶಿ ಭಾಸ್ಕರ್ ಐತಾಳ್, ಉಳ್ಳಾಲ ರಾಮರಾಜ ಕ್ಷತ್ರೀಯ ಸೇವಾ ಸಂಘ ಅಧ್ಯಕ್ಷ ಬಿ. ಕೆ. ಮೂರ್ತಿ ಪಾರೆಮನೆ, ಕುತ್ತಾರು ರಾಜರಾಜೇಶ್ವರೀ ಸಿದ್ಧಿ ವಿನಾಯಕ ದೇವಸ್ಥಾನ ಅಧ್ಯಕ್ಷ ಚಂದ್ರಹಾಸ್ ಕೊಟ್ಟಾರಿ, ಬಂಟ್ವಾಳ ವಿಶ್ವಕರ್ಮ ಸೇವಾ ಸಂಘ ಗೌರವಾಧ್ಯಕ್ಷ ಮನೋಜ್ ಆಚಾರ್ಯ, ಉಳ್ಳಾಲ ಬಾಲಗೋಕುಲ ಸಮಿತಿ ಮಾಜಿ ಕಾರ್ಯದರ್ಶಿ ರಾಜೀವ ದೇವಾಡಿಗ ತಲಪಾಡಿ, ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾೈಕ್, ಉಳ್ಳಾಲ ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಐತಪ್ಪ ಶೆಟ್ಟಿಗಾರ್, ಉಳ್ಳಾಲ ಗಾಂಧಿನಗರ ನಿವೃತ್ತ ಅಧ್ಯಾಪಕ ಶ್ರೀಧರ ಉಳ್ಳಾಲ್, ಸೋಮೇಶ್ವರ ಉಚ್ಚಿಲ ಮೂರೂರ ಬೋವಿ ಸಮಾಜ ಅಧ್ಯಕ್ಷ ಪ್ರಕಾಶ್ ಎನ್. ಎ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಬಜರಂಗದಳದ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಕಾರ್ಯದರ್ಶಿ ಗೋಪಾಲ ಕುತ್ತಾರ್, ಪ್ರಾಂತ ಗೋರಕ್ಷಾ ಪ್ರಮುಖ್ ದಿನೇಶ್ ಪೈ ಕಟೀಲು, ವಿಶ್ವ ಹಿಂದೂ ಪರಿಷತ್ ಉಳ್ಳಾಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಮರ್ಕೆದು, ಭಾಗವಹಿಸಲಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ಸುವರ್ಣ ವರ್ಷಾಚರಣೆಯ ಸಮಾರೋಪ ಸಮಾರಂಭದ ಅಂಗವಾಗಿ ನಡೆದ ಕುಣಿತ ಭಜನಾ ಸ್ಪರ್ಧೆಯಲ್ಲಿ ಆಸಕ್ತ 10 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಶ್ರೀ ಕೃಷ್ಣ ಬಾಲಗೋಕುಲ ಕೊಲ್ಯ ತಂಡ ಪ್ರಥಮ ಮತ್ತು ಸೀತಾರಾಮ ಭಜನಾ ಮಂದಿರ ಅಣ್ಣೆರೆಪಾಲು ಕೊಣಾಜೆ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮದ ಪೂರ್ವಬಾವಿಯಾಗಿ ಕುಂಪಲ ಬೈಪಾಸ್ನಿಂದ ಬೈಕ್ ರ್ಯಾಲಿ ಹೊರಟು ಬಗಂಬಿಲ ನಿತ್ಯಾನಂದ ನಗರ ಮಾರ್ಗವಾಗಿ ಕುತ್ತಾರು ಶ್ರೀ ರಾಜರಾಜೇಶ್ವರಿ ಮಂದಿರದಲ್ಲಿ ಸಮಾಪನೆಗೊಂಡಿತು.
ವಿಶ್ವ ಹಿಂದೂ ಪರಿಷತ್ ಉಳ್ಳಾಲ ಪ್ರಖಂಡ ಕಾರ್ಯದರ್ಶಿ ಬಿ. ನಾರಾಯಣ ಕುಂಪಲ ಸ್ವಾಗತಿಸಿದರು. ಆಶಿಕ್ ಮಾಡೂರು ಮತ್ತು ಸಾಗರ್ ಕೆ.ಪಿ. ಮಾಡೂರು ಕಾರ್ಯಕ್ರಮ ನಿರ್ವಹಿಸಿದರು. ಗುರುಪ್ರಸಾದ್ ಉಳ್ಳಾಲ್ ವಂದಿಸಿದರು.


















