Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ದಿ|ಲಲಿತಾ ಡಿ ಸುಂದರ್‌ರವರ ಶ್ರದ್ಧಾಂಜಲಿ ಸಭೆ

UllalaVaniBy UllalaVaniNovember 25, 2025No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕೊಲ್ಯ; ತೊಕ್ಕೊಟ್ಟುವಿನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದ ಬಿಜೆಪಿ ಮುಖಂಡೆ, ಸಾಮಾಜಿಕ ಕಾರ್ಯಕರ್ತೆ ಎಂದೇ ಖ್ಯಾತಿ ಗಳಿಸಿದ್ದ ಲಲಿತಾ ಡಿ ಸುಂದರ್ ಅವರಿಗೆ ಗೌರವ ನುಡಿ-ನಮನವನ್ನು ಸಲ್ಲಿಸುವ ಸಲುವಾಗಿ ಬಿಜೆಪಿ ವಿಧಾನಸಭಾ ಕ್ಷೇತ್ರ ಮಂಗಳೂರು ವತಿಯಿಂದ ಕೊಲ್ಯದ ಶ್ರೀ ಶಾರದ ಸಭಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಈ ವೇಳೆ ಸಭೆಗೆ ಆಗಮಿಸಿದ್ದ ಎಲ್ಲರೂ ಲಲಿತಾ ಡಿ ಸುಂದರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ.

ಬಳಿಕ ಉಳ್ಳಾಲ ವಿಧಾನ ಸಭಾದ ಮಾಜಿ ಶಾಸಕರಾದ ಜಯರಾಮ್ ಶೆಟ್ಟಿ ನುಡಿನಮನ ಸಲ್ಲಿಸಿ, “ಯಥಾಸ್ಯಂ ಮರಣಂ ಧ್ರುವಂ” ಎಂದರೆ “ಹುಟ್ಟಿದ ಪ್ರತಿ ಜೀವಕ್ಕೂ ಮರಣವು ನಿಶ್ಚಿತ”. ಇದು ಜೀವನದ ಅನಿವಾರ್ಯ ಸತ್ಯವನ್ನು ಹೇಳುತ್ತದೆ, ಹುಟ್ಟಿದ ಎಲ್ಲರೂ ಅಂತಿಮವಾಗಿ ಮರಣಹೊಂದುತ್ತಾರೆ. ಆದರೆ ಲಲಿತಾ ಅವರದ್ದು, ಸಾಯುವ ವಯಸ್ಸಲ್ಲ. ಬಿಜೆಪಿ ಪಕ್ಷ ಬಲಿಷ್ಠಗೊಳಿಸಲು ದಿ.ಲಲಿತಾ ಡಿ ಸುಂದರ್ ಅವರ ಕೊಡುಗೆ ಮಹತ್ವದ್ದಾಗಿದೆ ಎನ್ನುತ್ತಾ ಅವರ ಕಾರ್ಯವೈಖರಿಯನ್ನು ನೆನಪಿಸಿಕೊಂಡರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ದಿ|ಲಲಿತಾ ಅವರು ಎಲ್ಲರಿಗೂ ಮಾದರಿಯಾಗುವಂತಹ ದಿಟ್ಟ ಮಹಿಳೆ. ನಾನು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಲಲಿತಾ ಅವರ ಅಂಗಡಿಗೆ ಹೋಗುತ್ತಿದ್ದೆ ಎಂದು ತಮ್ಮ ಹಳೆನೆನಪನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಅವರ ಇಡೀ ಕುಟುಂಬವೇ ಬಿಜೆಪಿ ಪಕ್ಷಕ್ಕಾಗಿ ದುಡಿದಿದೆ. ಕೆಲ ವ್ಯಕ್ತಿಗಳ ನೆನಪು ಯಾವತ್ತೂ ಮನದಿಂದ ದೂರವಾಗುವುದಿಲ್ಲ. ಅವರ ಗುಣ, ಕಾರ್ಯ, ಕೊಡುಗೆ ಎಲ್ಲವೂ ಮನದಲ್ಲಿ ಅಚ್ಚಳಿಯಂತೆ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಬ್ರಿಜೇಶ್ ಚೌಟ ಮಾತನಾಡಿ, ಕಳೆದ ಬಾರಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಆಭ್ಯರ್ಥಿಯಾಗಿದ್ದಾಗ ಸ್ವತಃ ಲಲಿತಾ ಸುಂದರ್ ಅವರು ಕರೆ ಮಾಡಿ ವಿಚಾರಿಸಿದ್ದರು. ತಾಯಿಯಂತೆ ಮಮತೆಯನ್ನು ತೋರುತ್ತಿದ್ದ ಲಲಿತಾ ಸುಂದರ್ ಅವರು ಒಬ್ಬ ರಾಜಕೀಯದ ದಿಟ್ಟ ಮಹಿಳೆ. ಅವರ ಮಾತೃ ಹೃದಯಕ್ಕೆ ಸೋಲದವರಿಲ್ಲ. ಉಳ್ಳಾಲ ಕ್ಷೇತ್ರಕ್ಕೆ ಲಲಿತಾ ಸುಂದರ್ ಅವರು ವಿಶೇಷವಾದ ಕೊಡುಗೆ ನೀಡಿದ್ದಾರೆ ಎಂದರು.

ಹಿರಿಯ ನಾಯಕರಾದ ಸೀತಾರಾವi ಬಂಗೇರ ಅವರು ಮಾತನಾಡಿ, ಬಿಜೆಪಿಗಾಗಿ ನಿಷ್ಠೆಯಿಂದ ದುಡಿದ ಹಣ್ಣುಮಗಳು ಲಲಿತಾ ಅವರು. ಬಿಜೆಪಿ ಕಚೇರಿಯನ್ನು ಉಚಿತವಾಗಿ ದಿ.ಲಲಿತಾ ಡಿ ಸುಂದರ್ ಅವರು ನೀಡಿದ್ದಾರೆ. ಅವರ ಕೊಡುಗೆಯನ್ನು ಎಂದಿಗೂ ಮರೆಯಬಾರದು. ಪಾರ್ಟಿಗಾಗಿ ದುಡಿದ ವ್ಯಕ್ತಿಗಳನ್ನು ಸದಾ ನೆನಪಿನಲ್ಲಿರಿಸುವಂತಹ ಪ್ರಯತ್ನವಾಗಲಿದೆ ಎಂದರು.

ಬಿಜೆಪಿ ನಾಯಕರಾದ ಚಂದ್ರಶೇಕರ್ ಉಚ್ಚಿಲ್ ಮಾತನಾಡಿ, 1983 ಉಳ್ಳಾಲ ಸಭಾಕ್ಷೇತ್ರದ ಬಿಜೆಪಿ ಕಚೇರಿಯಾಗುವ ಸಂದರ್ಭದಲ್ಲಿ ಲಲಿತಾ ಸುಂದರ್ ಅವರ ಜೊತೆಗೆ ಸೀತಾರಾಮ ಬಂಗೇರ ಅವರ ಕೊಡುಗೆ ಅಪಾರ. ಆ ಸಂದರ್ಭದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಹಾಗಿರುವಾಗ ಅಧ್ಯಕ್ಷತೆಯ ಜವಾಬ್ದಾರಿಯನ್ನು ಲಲಿತಾ ಅವರು ವಹಿಸಿಕೊಂಡು, ಕಾರ್ಯಕರ್ತರ ವಿಶ್ವಾಸವನ್ನು ಗಳಿಸಿಕೊಂಡಿದ್ದರು ಎಂದರು.

ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಭೇಟಿ ನೀಡಿ ಅವರ ಜೊತೆ ಒಂದಿಷ್ಟು ಹಾಸ್ಯವನ್ನು ಮಾಡಿದ್ದೆ. ಇಂದು ಅವರು ದೈವಧೀನರಾಗಿದ್ದಾರೆ. ಲಲಿತಾ ಅವರು ಕೊನೆಗಾದಲ್ಲೂ ತನ್ನ ಸೊಸೆಯನ್ನು ಹೊಗಳುತ್ತಿದ್ದರು. ಅವರ ಅಂತಿವiಯಾತ್ರೆಯಲ್ಲಿ ಸೇರಿದ ಜನದಿಂದಲೇ ಅವರ ಸಾಮಾಜಿಕ ಕೊಡುಗೆ ಎಂತದ್ದು ಎಂಬುವುದು ತಿಳಿಯುತ್ತದೆ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಅಮ್ಟೂರು ಮಾತನಾಡಿ, ಉಳ್ಳಾಲದ ಹೆಸರನ್ನು ರಾಜ್ಯದಲ್ಲಿ ಪಸರಿಸಿದಂತಹ ಉಕ್ಕಿನ ಮಹಿಳೆ ಲಲಿತಾ ಡಿ ಸುಂದರ್ ಎಂದರೆ ತಪ್ಪಗಲಾರದು. ಇಂದು ಅವರ ನೆನಪಿಗಾಗಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಗಿದೆ ಎಂದಿದ್ದಾರೆ.

ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷರಾದ ಯಶವಂತ್ ಅಮೀನ್ ಮಾತನಾಡಿ, ಒಂದು ಹೂವಿನ ಗಿಡದಲ್ಲಿ ಸಾಮಾನ್ಯವಾಗಿ ಹೂ ಅರಳುತ್ತದೆ ಬಳಿಕ ಬಾಡಿಹೋಗುತ್ತದೆ. ಆದರೆ ಲಲಿತಾ ಸುಂದರ್ ಅವರು ಈ ಮಾತಿಗೆ ವ್ಯತಿರಿಕ್ತರಾಗಿದ್ದಾರೆ. ಅವರು ತಮ್ಮ ಜೀವನವನ್ನು ರಾಷ್ಟçಕ್ಕಾಗಿ, ಬಿಜೆಪಿ ಪಕ್ಷಕ್ಕಾಗಿ ಅರ್ಪಿಸಿದವರು. ಅವರು ಪುನರ್‌ಜನ್ಮ ಪಡೆದು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಾಗಲಿ ಎಂದು ಆಶಿಸಿದರು.

ಸಭೆಯನ್ನು ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದ ಉಳ್ಳಾಲ ಬಿಜೆಪಿ ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು ಅವರು, ಕಾಂಗ್ರೆಸ್, ಕಮ್ಯೂನಿಸ್ಟ್ ಅಬ್ಬರದ ಸಂದರ್ಭದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಮುನ್ನಡೆಸಿಕೊಂಡು ಬಂದ ನಾಯಕರ ಪೈಕಿ ಲಲಿತಾ ಡಿ ಸುಂದರ್ ಅವರು ಕೂಡ ಒಬ್ಬರು. ಕಾರ್ಯಕರ್ತರನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಮಾತೃ ಹೃದಯಿ ಲಲಿತಾ ಡಿ ಸುಂದರ್ ಎನ್ನುತ್ತಾ ಭಾವನಾತ್ಮಕ ಕ್ಷಣಗಳನ್ನು ಸ್ಮರಿಸಿಕೊಂಡÀರು.

ದುರ್ಗಾವಾಹಿನಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ, ಬಿಜೆಪಿ ಮುಖಂಡೆ ಧನಲಕ್ಷಿö್ಮÃ ಗಟ್ಟಿ ಮಾತನಾಡಿ, ಲಲಿತಾ ಡಿ ಸುಂದರ್ ಅವರು ನನ್ನ ರಾಜಕೀಯಕ್ಕೆ ವೈಯಕ್ತಿಕವಾಗಿ ಪ್ರೇರಣೆಯಾದವರು. ಕರ್ನಾಟಕದಲ್ಲಿ ಮಹಿಳಾ ಮೋರ್ಛಾ ಸ್ಥಾಪನೆಯಾಗಬೇಕು ಎಂಬ ಸಂದರ್ಭದಲ್ಲಿ ಮಹಿಳಾ ಮೋರ್ಛಾದ ಮೊದಲ ಅಧ್ಯಕ್ಷರಾಗಿ ಪಕ್ಷವನ್ನು ಬಲಿಷ್ಠಗೊಳಿಸಿದರುವ ಲಲಿತಾ ಡಿ ಸುಂದರ್ ಎಂದರು.

ಶ್ರದ್ಧಾಂಜಲಿ ಸಭೆಯಲ್ಲಿ ದಿ| ಲಲಿತಾ ಸುಂದರ್ ಅವರ ಸೊಸೆಯಾದ ಮೀರಾ, ವಕೀಲರಾದ ಮೋಹನ್ ರಾಜ್ ಕೆ ಆರ್ ಉಳ್ಳಾಲ, ದಾಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಾಧ್ಯಕ್ಷರಾದ ಅನಿಲ್ ದಾಸ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮಂಡಲದ ಪ್ರಧಾನ ಕಾರ್ಯದರ್ಶಿಗಳು, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜನಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದ ಕುತ್ತಾರು ದೇವಪ್ಪ ಕಂಪ ನಿಧನ…!!

May 7, 2026

ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂಬ ಉದ್ದೇಶದೊಂದಿಗೆ ವಿಜಯ ರೂರಲ್‌ ಡೆವಲಪ್ಮೆಂಟ್‌ ಫೌಂಡೇಶನ್‌ ಕಾರ್ಯಾಚರಣೆ : ರಾಜೇಶ್‌ ಖನ್ನಾ

May 7, 2026

ಮೇ 8ರಂದು ಕೆ ಸಿ ನಗರದಲ್ಲಿ ಸುನ್ನೀ ಆದರ್ಶ ಸಂಗಮ

May 7, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ಜನಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದ ಕುತ್ತಾರು ದೇವಪ್ಪ ಕಂಪ ನಿಧನ…!!

By UllalaVaniMay 7, 20260

ಕುತ್ತಾರು ಮೇ 7: ಮುನ್ನೂರು ಗ್ರಾಮದ ಕುತ್ತಾರು ಪ್ರದೇಶದ ಕಂಪ ಮನೆತನದ ದೇವಪ್ಪ ಕಂಪ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸರಳ…

ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂಬ ಉದ್ದೇಶದೊಂದಿಗೆ ವಿಜಯ ರೂರಲ್‌ ಡೆವಲಪ್ಮೆಂಟ್‌ ಫೌಂಡೇಶನ್‌ ಕಾರ್ಯಾಚರಣೆ : ರಾಜೇಶ್‌ ಖನ್ನಾ

May 7, 2026

ಮೇ 8ರಂದು ಕೆ ಸಿ ನಗರದಲ್ಲಿ ಸುನ್ನೀ ಆದರ್ಶ ಸಂಗಮ

May 7, 2026

ʻಆಪರೇಷನ್‌ ಸಿಂಧೂರʼ ಸಮರಕ್ಕೆ 1 ವರ್ಷ..!

May 7, 2026
1 2 3 … 1,900 Next
Automatic YouTube Gallery

ಪ್ರಯಾಣಿಕರು ದುಡ್ಡು ನೀಡಿ ಟಿಕೆಟ್ ಬುಕ್ ಮಾಡಿದರೂ,ಜೀವದ ಜೊತೆ ಚೆಲ್ಲಾಟ..!

ಆನಂದ್ ಟ್ರಾವೆಲ್ಸ್ ವಿರುದ್ಧ ಆರೋಪ | ಖಾಸಗಿ ಬಸ್‌ಗಳ ನಿರ್ಲಕ್ಷ್ಯಕ್ಕೆ ಆಕ್ರೋಶ | ಪ್ರಯಾಣಿಕರ ಸುರಕ್ಷತೆ ಪ್ರಶ್ನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪ್ರಯಾಣಿಕರು ದುಡ್ಡು ನೀಡಿ ಟಿಕೆಟ್ ಬುಕ್ ಮಾಡಿದರೂ,ಜೀವದ ಜೊತೆ ಚೆಲ್ಲಾಟ..!
Now Playing
ಪ್ರಯಾಣಿಕರು ದುಡ್ಡು ನೀಡಿ ಟಿಕೆಟ್ ಬುಕ್ ಮಾಡಿದರೂ,ಜೀವದ ಜೊತೆ ಚೆಲ್ಲಾಟ..!
ಆನಂದ್ ಟ್ರಾವೆಲ್ಸ್ ವಿರುದ್ಧ ಆರೋಪ | ಖಾಸಗಿ ಬಸ್‌ಗಳ ನಿರ್ಲಕ್ಷ್ಯಕ್ಕೆ ಆಕ್ರೋಶ | ...
ಆನಂದ್ ಟ್ರಾವೆಲ್ಸ್ ವಿರುದ್ಧ ಆರೋಪ | ಖಾಸಗಿ ಬಸ್‌ಗಳ ನಿರ್ಲಕ್ಷ್ಯಕ್ಕೆ ಆಕ್ರೋಶ | ಪ್ರಯಾಣಿಕರ ಸುರಕ್ಷತೆ ಪ್ರಶ್ನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮೇ.9-ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ; ಭಾಗಿಯಾಗುವಂತೆ ಬಿಜೆಪಿ ಕರೆ
Now Playing
ಮೇ.9-ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ; ಭಾಗಿಯಾಗುವಂತೆ ಬಿಜೆಪಿ ಕರೆ
ಮೇ.9ರಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿಎಸ್‌ವೈ ಅಭಿಮಾನೋತ್ಸವ;ಬಿಜೆಪಿ ಮಂಗಳೂರು ...
ಮೇ.9ರಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿಎಸ್‌ವೈ ಅಭಿಮಾನೋತ್ಸವ;ಬಿಜೆಪಿ ಮಂಗಳೂರು ಮಂಡಲದಿoದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳಲು ಕರೆ

ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್ ಸುದ್ದಿಗೋಷ್ಠಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version