ಕಿನ್ಯ ಬೆಳರಿಂಗೆಯ ಶ್ರೀ ಮಹಾಮ್ಮಾಯಿ ಮಾತೃ ಮಂಡಳಿ ವತಿಯಿಂದ ಆಟಿದ ಕೂಟ ಗೌಜಿಗ ಗಮ್ಮತ್ತ್ ವಿಶೇಷ ಕಾರ್ಯಕ್ರಮ ಕಿನ್ಯಾ ಭಂಡಾರ ಮನೆಯಲ್ಲಿ ನಡೆಯಿತು. ಕಲ್ಲರ ಕೋಡಿ ಸರಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.



ನಾವು ತುಳುನಾಡಿನ ಜನರು, ಪ್ರಕೃತಿಯ ಆರಾಧಕರು, ಪ್ರಕೃತಿಗೂ ತುಳುವರಿಗೂ ಅವಿನಾವಭಾವ ಸಂಬಂಧ ಇದೆ, ಬೆನ್ನಿ, ಬೇಸಾಯ ನಟ್ಟಿಯನ್ನು ನಂಬಿದವರು ತುಳುವರು ಎಂದು ಶ್ರೀಮತಿ ಜಯಲಕ್ಷ್ಮಿ, ಮಹಮ್ಮಾಯಿ ಮಾತೃ ಮಂಡಳಿಯ ಆಟಿದ ಕೂಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಾವು ತುಳುನಾಡಿನಲ್ಲಿ ಹುಟ್ಟಿದ್ದೇವೆ ಎಂಬುದೇ ತುಳುವರಿಗೆ ನಮಗೆ ಹೆಮ್ಮೆಯ ವಿಷಯ. ತುಳುನಾಡಿನ ಭೂತಾರಾಧನೆ ನಾಗಮಂಡಲ ಆಚರಣೆಗಳು ಇದೆಲ್ಲವೂ ತುಳುನಾಡಿನ ವಿಶೇಷತೆಗಳು. ತುಳು ಭಾಷೆ ನಮ್ಮನ್ನು ಒಟ್ಟುಗೂಡಿಸಿದೆ. ನಮ್ಮ ಹಿರಿಯರು ಚಂದ್ರನ ನಡಿಗೆ ಸೂರ್ಯನ ನಡಿಗೆ ಇದನ್ನು ಲೆಕ್ಕ ಹಾಕಿ ಚಾಂದ್ರಮಾನ ಸೌರಮಾನದ ದಿನಗಳ ತಿಂಗಳನ್ನು ರಚಿಸಿದರು. ನಾವು ತುಳುವರು ಸೌರಮಾನ ಲೆಕ್ಕದಲ್ಲಿ ತುಳುವ ತಿಂಗಳುಗಳನ್ನು ಆಚರಿಸುತ್ತೇವೆ. ತುಳು ನಾಡಿನಲ್ಲಿ ಇರುವಷ್ಟು ವಿಶೇಷತೆಗಳು ಸಂಪ್ರದಾಯಗಳು ಅದರಲ್ಲೂ ಆಟಿ ತಿಂಗಳಲ್ಲಿ ನಮ್ಮ ಆಚರಣೆಗಳು ಇದೆಲ್ಲವೂ ತಿಳಿಯುವಂತಹದ್ದು ಎಂದು ಮಿನಾದಿ ದ. ಕ. ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಯಶೋದ ಪಿ. ಆಟಿ ತಿಂಗಳ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿನ್ಯಾ ಬೆಳರಿಂಗೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಬಂಡಾರ ಮನೆ ಇದರ ಆಡಳಿತ ಮೊಕ್ತೇಸರ ಬಾಬು ಶ್ರೀಶಾಸ್ತಾ, ನಾವು ಒಂದೇ ದಿನ ಆಟಿಯ ಎಲ್ಲಾ ತಿನಿಸುಗಳನ್ನು ತಿಂದರೆ ಅದಕ್ಕೆ ಮಹತ್ವ ಇಲ್ಲ, ಇವತ್ತು ಆಟಿಯ ವಿಶೇಷತೆಯನ್ನು ತಿಳಿಸುವಂತಹ ಕಾರ್ಯಕ್ರಮವಾದುದರಿಂದ ಇಲ್ಲಿ ಆಟಿ ತಿಂಗಳಲ್ಲಿ ಸಿಗುವ ಬೇರೆ ಬೇರೆ ತಿಂಡಿ ತಿನಿಸುಗಳನ್ನು ಬೇರೆ ಬೇರೆ ಮನೆಯವರು ಮಾಡಿ ತಂದಿದ್ದಾರೆ. ನಾವೆಲ್ಲ ಒಟ್ಟು ಸೇರಿ ಕಾರ್ಯಕ್ರಮವನ್ನು ಆಚರಿಸುವುದೇ ಇವತ್ತಿನ ವಿಶೇಷ ಎಂದು ಶುಭ ಹಾರೈಸಿದರು
ಕಿನ್ಯ ಬೆಳರಿಂಗೆ ಶ್ರೀ ನಾರಾಯಣ ಗುರು ಯುವ ಸಂಚಲನ ಸ್ಥಾಪಕ ಅಧ್ಯಕ್ಷ ಜಯಂತ್ ಪೂಜಾರಿ ಶ್ರೀ ಮಹಾಮ್ಮಾಯಿ ಮಿತ್ರ ಮಂಡಲದ ಪ್ರಮುಖರು ನಾರಾಯಣ ಪೂಜಾರಿ ಕಿನ್ಯಾ ಬೆಳರಿಂಗೆ, ಅಧ್ಯಕ್ಷರು ಜಗದೀಶ್ ಕಿನ್ಯಾ ಬೆಳರಿಂಗೆ, ಶ್ರೀ ಮಹಾಮ್ಮಾಯಿ ಮಾತೃ ಮಂಡಳಿ ಅಧ್ಯಕ್ಷರು ಶ್ರೀಮತಿ ಆಶಾಲತಾ ಆನಂದ ಸಂಕೇಶ ಕಿನ್ಯ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು
ಶ್ರೀ ಮಹಮ್ಮಾಯಿ ಮಾತ್ರ ಮಂಡಳಿಯ ಸದಸ್ಯೆಯರು ರಕ್ಷಿತಾ ಮಲ್ಲಿಕಾ ಪ್ರಾರ್ಥನೆಗೈದರು. ಸದಸ್ಯೆ ಗೀತಾ ಹರೀಶ್ ಎರುಕಟ್ಟ ಸ್ವಾಗತಿಸಿದರು. ಕೋಶಾಧಿಕಾರಿ ಭವ್ಯ ಜಗದೀಶ್ ವರದಿ ವಾಚಿಸಿದರು. ಸೌಮ್ಯ ಕಮಲಾಕ್ಷ ಎರುಕಟ್ಟ ನಿರೂಪಿಸಿದರು. ರಕ್ಷಿತಾ ಯಶವಂತ ವಂದಿಸಿದರು.
ಈ ಸಂದರ್ಭದಲ್ಲಿ ಪರಿಸರದ ಹಿರಿಯರು ಕಮಲಾ ಪೂಜಾರ್ತಿ ಮತ್ತು ರಮಣಿ ಪೂಜಾರ್ತಿ ಇವರನ್ನು ಸನ್ಮಾನಿಸಲಾಯಿತು. ಆಟಿದ ಕೂಟ ಗೌಜಿಗಮ್ಮತ್ತಿನ ವಿಶೇಷವಾಗಿ ಶ್ರೀ ಮಹಮ್ಮಾಯಿ ಮಾತ್ರ ಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ನೃತ್ಯ ಮತ್ತು ಆರ್ ಬರೆತಿಜೆರ್ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.





