
ಸಲಹೆ ಮತ್ತು ಆಕ್ಷೇಪಗಳಿದ್ದರೆ 30 ದಿನಗಳ ಅವಕಾಶ: ಸೋಮೇಶ್ವರ ಪುರಸಭೆ
ಉಳ್ಳಾಲ: ಜಾನಪದ ವಿದ್ವಾಂಸರು, ಸಾಹಿತಿ, ಯಕ್ಷಗಾನ ವಿಮರ್ಶಕ ದಿ.ಅಮೃತ ಸೋಮೇಶ್ವರ ಅವರ ಹೆಸರನ್ನು sಸೋಮೇಶ್ವರ-ಬಟ್ಟಪ್ಪಾಡಿ ರಸ್ತೆಗೆ ಇಡಲು ಸಾಮಾನ್ಯ ಸಭೆಯಲ್ಲಿ ಪಡೆದುಕೊಂಡ ನಿರ್ಣಯದಂತೆ ಸೋಮೇಶ್ವರ ಪುರಸಭೆ ನಿರ್ಧರಿಸಿದೆ. ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಗಳಿದ್ದರೆ ಜು.2ರಿಂದ 30 ದಿನಗಳೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಶಿವಶಕ್ತಿನಗರದಲ್ಲಿ ವಾಸಿಸುತ್ತಿದ್ದ ದಿ.ಅಮೃತ ಸೋಮೇಶ್ವರರವರು ಜಾನಪದ ವಿದ್ವಾಂಸರು, ಸಾಹಿತಿಗಳು, ಯಕ್ಷಗಾನ ವಿಮರ್ಶರಾಗಿ ವಿಶೇಷ ಸಾಧನೆ ಮಾಡಿದವರಾಗಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ತಂದು ಈ ನಾಡಿಗೆ ಹಿರಿಮೆ ತಂದು ಕೊಟ್ಟವರು. ಈ ಗ್ರಾಮದ ಹೆಸರನ್ನು ರಾಷ್ಟಾçದ್ಯಂತ ಪಸರಿಸಿದ್ದು ಇಡೀ ಊರಿಗೆ ಗೌರವ ಸಲ್ಲುತ್ತದೆ. ಸನ್ಮಾನ್ಯರ ಸೇವೆಯನ್ನು ಜನಮನಗಳಲ್ಲಿ ಉಳಿಸುವ ನೆಲೆಯಲ್ಲಿ ಸೋಮೇಶ್ವರ ಪುರಸಭೆಯ ಜೂ.13ರಂದು ಸಾಮಾನ್ಯ ಸಭೆಯ ನಡವಳಿ ಸಂಖ್ಯೆ: 115/2025-26 ರಲ್ಲಿ ನಿರ್ಣಯಿಸಿದಂತೆ ಸೋಮೇಶ್ವರದಿಂದ ಬಟ್ಟಪಾಡಿ ರಸ್ತೆಗೆ “ಅಮೃತ ಸೋಮೇಶ್ವರ ರಸ್ತೆ”ಯೆಂದು ನಾಮಕರಣ ಮಾಡುವ ಬಗ್ಗೆ ನಿರ್ಣಯಿಸಲಾಗಿದೆ. ಅದರಂತೆ ಸೋಮೇಶ್ವರ ಬಟ್ಟಪಾಡಿ ರಸ್ತೆಗೆ ಅಮೃತ ಸೋಮೇಶ್ವರ ರಸ್ತೆ ಎಂದು ನಾಮಕರಣ ಮಾಡಲು ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಗಳಿದ್ದರೆ ಜು.2ರಿಂದ 30 ದಿನಗಳೊಳಗೆ ಸಲ್ಲಿಸಲು ಕೋರಲಾಗಿದೆ.

