Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
All News

ಮಾದಕ ವಸ್ತುಗಳು ಕಮರ್ಷಿಯಲ್ ಪ್ರಮಾಣದಲ್ಲಿದ್ದರೆ ತಪ್ಪಿತಸ್ಥನ ಮನೆ ಆಸ್ತಿಯನ್ನು ಜಪ್ತಿ ಮಾಡುವ ಕಾನೂನಿದೆ : ಎಸಿಪಿ ಪ್ರಕಾಶ್

UllalaVaniBy UllalaVaniJune 24, 2025Updated:June 24, 2025No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ತೊಕ್ಕೊಟ್ಟು : ಕಾನೂನು ಪ್ರಕಾರ ಮಾದಕ ವ್ಯಸನಗಳ ಸೇವನೆ ಅಪರಾಧ, ಅದರಲ್ಲಿ ಕಮರ್ಷಿಯಲ್ ಪ್ರಮಾಣದಲ್ಲಿದ್ದರೆ 10 ವರ್ಷಗಳಿಗಿಂತ ಅಧಿಕ ಶಿಕ್ಷೆ ಹಾಗೂ ಮನೆ ಆಸ್ತಿ ಎಲ್ಲವನ್ನೂ ಸೀಝ್ ಮಾಡುವ ಆದೇಶವೂ ನ್ಯಾಯಾಲಯದಿಂದ ಬರುವ ಸಾಧ್ಯತೆಗಳು ಹೆಚ್ಚಿದೆ. ಕಮರ್ಷಿಯಲ್ ಪ್ರಮಾಣಕ್ಕಿಂತ ಕಡಿಮೆಯಿದ್ದಲ್ಲಿಯೂ ಶಿಕ್ಷೆ ಖಚಿತ ಆದರೆ ವರ್ಷಗಳಲ್ಲಿ ಬದಲಾವಣೆಗಳಿರಬಹುದು ಎಂದು ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತ ಪ್ರಕಾಶ್ ಹೇಳಿದ್ದಾರೆ.
ನಗರ ಪೊಲೀಸ್ ಎಸಿಪಿ ಮಂಗಳೂರು ದಕ್ಷಿಣ ವಿಭಾಗದ ಆಶ್ರಯದಲ್ಲಿ ತೊಕ್ಕೊಟ್ಟುವಿನ ಯುನಿಟಿ ಸಭಾಂಗಣದಲ್ಲಿ ಆಯೋಜಿಸಲಾದ ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ಕಾರ‍್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.
ಮಾದಕ ವ್ಯಸನಗಳ ಕುರಿತಾಗಿ ಜಾಗೃತಿ ಕಾರ‍್ಯಗಾರಗಳು ನಿರಂತರವಾಗಿ ಆಗಬೇಕಿದೆ. ಮನೋವೈದ್ಯರನ್ನು ಸೇರಿಸಿಕೊಂಡು ಕೌನ್ಸಿಲಿಂಗ್ ಕೂಡಾ ಪರಿಣಾಮಕಾರಿಯಾಗಿ ಜಾರಿಯಾದಾಗ ಒಂದು ಹಂತದಲ್ಲಿ ನಿಯಂತ್ರಣ ಸಾಧ್ಯ ಎಂದರು.
ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ಮಾತನಾಡಿ, ಮಕ್ಕಳ ಮಾನಸಿಕ ಅಸಮತೋಲನ ಸರಿದೂಗಿಸಲು ಶಿಕ್ಷಕ ವರ್ಗವೂ ಕೈಜೋಡಿಸಬೇಕಿದೆ. ವಿದ್ಯಾರ್ಥಿಗಳು ತಪ್ಪು ಎಸಗುತ್ತಾರೆಂದಲ್ಲಿ ಪೊಲೀಸರು ಮತ್ತು ಉಪನ್ಯಾಸಕ ವರ್ಗವೂ ಹೊಣೆಯಾಗಿರುತ್ತಾರೆ. ಶಾಲೆಗಳು, ಕಾಲೇಜುಗಳು, ಹಾಸ್ಟೆಲ್, ಪಿ.ಜಿಗಳು ಎಲ್ಲರೂ ಮಾದಕ ವ್ಯಸನಿಗಳ ಪತ್ತೆಗೆ ಸಹಕಾರ ಮಾಡಬೇಕಿದೆ. ಶೈಕ್ಷಣಿಕ ಹಬ್ ಅನಿಸಿಕೊಂಡಿರುವ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪರಿಣಾಮಕಾರಿ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭ ಮಂಗಳೂರು ಗ್ರಾಮಾಂತರ (ವಾಮಂಜೂರು) ಠಾಣಾಧಿಕಾರಿ ಗವಿರಾಜ್ , ಮಂಗಳೂರು ನಗರ ಠಾಣಾಧಿಕಾರಿ (ಕಂಕನಾಡಿ) ನಾಗರಾಜ್ , ಕೊಣಾಜೆ ಠಾಣಾ ಉಪನಿರೀಕ್ಷಕರಾದ ನಾಗರಾಜ್, ಪುನೀತ್ ಗಾಂವ್ಕರ್ , ಮನೋವೈದ್ಯ ಡಾ. ಮನು ಉಪಸ್ಥಿತರಿದ್ದರು.

ಬಾರ್ ಗಳಲ್ಲಿ ಯುವಕರನ್ನು ನಿಯಂತ್ರಿಸಿ : ಡಾ.ಗೋವಿಂದರಾಜು ಬಿ.ಎಂ

ಬಾರ್ ಗಳಲ್ಲಿ ಯುವಕರನ್ನು ನಿಯಂತ್ರಿಸುವ ಕೆಲಸಗಳಾಗಬೇಕು. ಯುವಸಮುದಾಯವೇ ಹೆಚ್ಚಾಗಿ ಕುಡಿತದ ದಾಸರಾಗಿ ನಂತರ ಅಮಲುಪದಾರ್ಥಗಳತ್ತ ವಾಲುತ್ತಾರೆ. ವ್ಯಸನಗಳನ್ನು ಸಮಾಜದ ನಿಯಂತ್ರಕರು ನಿಯಂತ್ರಿಸದೇ ಇದ್ದಲ್ಲಿ ಬಹಳ ಕಷ್ಟ. ಬೆಳವಣಿಗೆಯ ಸಮಾಜದಲ್ಲಿ ವೈಜ್ಞಾನಿಕ ಅಭಿವೃದ್ಧಿಯೊಂದಿಗೆ ತಾಂತ್ರಿಕತೆಯನ್ನು ಬಳಸಿ ವ್ಯಸನಿಗಳ ಪತ್ತೆಹಚ್ಚುವಿಕೆ ಕಾರ್ಯಗಳಾಗಲಿ. ಗೂಡಂಗಡಿ, ಹೊಟೇಲ್ ಗಳಲ್ಲಿ ಪರಿಶೀಲನೆಗಳಾಗಬೇಕು ಎಂದು ಮಂಗಳೂರು ವಿ.ವಿಯ ಸಮಾಜಶಾಸ್ತç ವಿಭಾಗದ ಸಹಾಯಕ ಪ್ರಧ್ಯಾಪಕ ಡಾ.ಗೋವಿಂದರಾಜು ಬಿ.ಎಂ ಹೇಳಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿ
ಮಾನಿಟರಿಂಗ್ ಸೆಲ್ ಗಳು ಕರ‍್ಯಾಚರಿಸಲಿ: ಡಾ| ಮೋಹನ್ ಎಸ್.ಸಿಂಘೇ


ವ್ಯಸನಿಗಳ ವಿರುದ್ಧದ ಕಾನೂನು ಸಡಿಲಗೊಳಿಸದೇ, ಕಂಟ್ರೋಲಿಂಗ್ ಮೆಕ್ಯಾನಿಸಂ ಸ್ಟ್ರಾಂಗ್ ಆಗಿರಲಿ. ಕಾನೂನು ವ್ಯವಸ್ಥೆ ಹೆಚ್ಚಾದಂತೆ ಅಪರಾಧಗಳು ಗಣನೀಯವಾಗಿ ಏರಿಕೆಯಾಗಿದೆ. ಅಪರಾಧಿಗಳ ಜೊತೆಗೆ ಮಾನವೀಯ ಸಂಬಂಧಗಳನ್ನು ಬೆಳೆಸುವ ಕೆಲಸವಾಗಲಿ. ಬಾಲಾಪರಾಧಿಗಳು ವ್ಯಸನದಲ್ಲಿರುವುದು ಗಮನಾರ್ಹ ಅಂಶ. ನಿಯಂತ್ರಣಕ್ಕೆ ತರಲು ಆಯಾಯ ಶಿಕ್ಷಣ ಸಂಸ್ಥೆಗಳಲ್ಲಿ ಮಾನಿಟರಿಂಗ್ ಸೆಲ್ ಗಳು ಅಗತ್ಯವಾಗಿ ಕಾರ‍್ಯಾಚರಿಸಬೇಕಿದೆ. ಸ್ನಾತಕೋತ್ತರ ಹಾಗೂ ಸಮಾಜಸೇವಾ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ. ಡಾ. ಮೋಹನ್ ಎಸ್. ಸಿಂಘೇ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂಲ್ ಲಿಪ್, ಟ್ಯಾಬ್ಲೇಟ್‌ಗಳಲ್ಲೇ
ನಶೆ ಏರಿಸುತ್ತಿದ್ದಾರೆ : ಡಾ| ಸೈಯ್ಯದ್ ಅಮೀನ್ ಅಹಮ್ಮದ್

ಕಾಲೇಜು ಹಾಸ್ಟೆಲ್ಲುಗಳಲ್ಲಿ ಶುಚಿಗೊಳಿಸುವ ಸಂದರ್ಭ ಮಾರಕ ಕೂಲ್ ಲಿಪ್ ಗಳೇ ಸಿಗುತ್ತಿವೆ. ಇದು ಡ್ರಗ್ಸ್ ಪದಾರ್ಥಗಳಿಗೆ ಸ್ವಾಗತಗೋಪುರವಾಗಿದೆ. ದೇರಳಕಟ್ಟೆ, ನಾಟೆಕಲ್ ಕುತ್ತಾರ್ ಭಾಗದಲ್ಲಿರುವ ಪಿ.ಜಿಗಳು ವ್ಯವಸ್ಥಿತವಾಗಿಯಿಲ್ಲ. ಗರಿಷ್ಠ ವಿದ್ಯಾರ್ಥಿಗಳು ಪಿಜಿಗಳಲ್ಲೇ ನಿಂತು ವ್ಯಸನಿಗಳಾಗುತ್ತಿರುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಭೀತಿ ಹುಟ್ಟಿಸುವ ಸಲುವಾಗಿ ಪಿ.ಜಿಗಳ ಮೇಲೆ ಪರಿಶೀಲನೆ ದಾಳಿಗಳಾಗಬೇಕಿದೆ. ಸದ್ಯ ಗಾಂಜಾ ಬೆಳೆಯುವ ಕಾಲವಲ್ಲ, ಹಾಗಾಗಿ ಮಾನಸಿಕ ವಿಚಾರಕ್ಕೆ ಸಂಬAಧಿಸಿ ಟ್ಯಾಬ್ಲೆಟ್ ಗಳ ಸೇವನೆಗಳಾಗುತ್ತಿವೆ. 2017-16 ರಲ್ಲಿ ಕಪ್ ಸಿರಪ್ ಅಮಲಿಗೆ ಕುಡಿಯುತ್ತಿದ್ದ ವಿದ್ಯಾರ್ಥಿಗಳು ಇದೀಗ ಗೊತ್ತೇ ಆಗದ ಟ್ಯಾಬ್ಲೆಟ್ ಸೇವನೆಯಲ್ಲಿ ನಿರತರಾಗಿದ್ದಾರೆ. ಮೆಡಿಕಲ್ ಶಾಪ್ ಗಳಲ್ಲಿ ದುಬಾರಿ ಬೆಲೆಗೆ ಮಾತ್ರಗಳನ್ನು ಮಾರಾಟ ಮಾಡಲಾಗುತ್ತಿದೆ. ಕೂಲ್ ಲಿಪ್ ಗಳ ಸೇವನೆ ಪರೀಕ್ಷಾ ಸಮಯದಲ್ಲೇ ಹೆಚ್ಚಾಗುತ್ತಿದೆ. ಪಿ.ಜಿಗಳ ನಿಯಂತ್ರಣಕ್ಕೆ ತರುವ ಕೆಲಸ ಪೊಲೀಸರಿಂದ ಆಗಬೇಕಿದೆ ಎಂದು ನಡುಪದವು ಪಿ.ಎ ಎಜ್ಯುಕೇಷನಲ್ ಟ್ರಸ್ಟ್ ಸಂಸ್ಥೆಗಳ ಸ್ಟೂಡೆಂಟ್ ಅಫೇರ್ ಡೀನ್ ಡಾ| ಸೈಯ್ಯದ್ ಅಮೀನ್ ಅಹಮ್ಮದ್ ಹೇಳಿದ್ದಾರೆ.

ಕೊರಿಯರ್ ಮೂಲಕ ಮಾದಕ ವ್ಯಸನ
ಸರಬರಾಜು: ಅಬ್ದುಲ್ ಸತ್ತಾರ್

ಕೊರಿಯರ್ ಮೂಲಕವೇ ಅಮಲು ಪದಾರ್ಥಗಳ ಸರಬರಾಜು ಆಗುತ್ತಿದೆ. ಶೇ.75 ಕೊರಿಯರ್ ಮುಖೇನವೇ ವಿದ್ಯಾರ್ಥಿಗಳ ಕೈತಲುಪುತ್ತಿದೆ. ಪೊಲೀಸರು ತಿಂಗಳಿಗೆ ಒಮ್ಮೆಯಾದರೂ ಹಾಸ್ಟೆಲ್ , ಪಿ.ಜಿಗಳಲ್ಲಿ ಪರಿಶೀಲನೆ ನಡೆಸಬೇಕಿದೆ ಎಂದು ಕಣಚೂರು ಹಾಸ್ಟೆಲ್ ವಾರ್ಡನ್ ಅಬ್ದುಲ್ ಸತ್ತಾರ್ ಹೇಳಿದ್ದಾರೆ.

ವಿದ್ಯಾರ್ಥಿನಿಯರು ನಶೆ ಏರಿಸಲು
ವಿಕ್ಸ್, ಫೆವಿಕಾಲ್ ಇಟ್ಟುಕೊಳ್ಳುತ್ತಾರೆ: ಲೋಹಿತ್ ಗಟ್ಟಿ


ವಿದ್ಯಾರ್ಥಿನಿಯರು ವಿಕ್ಸ್, ಫೆವಿಕಾಲ್ ನಂತಹ ಸೊತ್ತುಗಳನ್ನು ನಶೆ ಏರಿಸಲು ಉಪಯೋಗಿಸುತ್ತಾರೆ. ಬಿಯರ್ ನಲ್ಲಿ ಹೆಚ್ಚು ನಶೆ ತರಿಸಲು ವಾಪಸ್ಸು ಅದಕ್ಕೆ ಟ್ಯಾಬ್ಲೆಟ್ ಹಾಕಿ ನಶೆ ಭರಿಸುತ್ತಿದ್ದಾರೆ. ಕಾಲೇಜು ಶಿಕ್ಷಣ ಸಂಸ್ಥೆಗಳ 200 ಮೀ. ದೂರಗಳಲ್ಲಿ ಯಾವುದೇ ಮಾದಕ ವ್ಯಸನಗಳನ್ನು ಇಡದಂತೆ ಕಡ್ಡಾಯವಾಗಿ ಸೂಚಿಸಬೇಕು. ಗಡಿಭಾಗದ ಮುದುಂಗಾರುಕಟ್ಟೆ, ಕಲ್ಪನೆ, ನರಿಂಗಾನ, ಹೂಹಾಕುವಕಲ್ಲು ಭಾUಗಳಲ್ಲಿ ಪೊಲೀಸರು ನಿತ್ಯ ತಪಾಸಣೆ ಕೈಗೊಳ್ಳಬೇಕಿದೆ. ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಸಿಬ್ಬಂದಿ ಇದ್ದರೂ ತಪಾಣಸೆಗಳು ಮಾತ್ರ ನಡೆಯುತ್ತಿಲ್ಲ ಎಂದು ಪಿಎ ಕಾಲೇಜು ಸಹಪ್ರಾಧ್ಯಾಪಕ ಲೋಹಿತ್ ಗಟ್ಟಿ ಹೇಳಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದ ಮುಕ್ಕಚ್ಚೇರಿ ನಿವಾಸಿ 14 ವರ್ಷಗಳ ಬಳಿಕ  ಸೆರೆ

February 4, 2026

ಸೌಹಾರ್ದಕ್ಕೆ ಸಾಕ್ಷಿಯಾದ ಪಿಲಾರು ನಾಗಬ್ರಹ್ಮ ಕ್ಷೇತ್ರ ವಾರ್ಷಿಕೋತ್ಸವ

February 3, 2026

Comments are closed.

Advertise
ಸಂಪರ್ಕಿಸಿ

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025

ಕ್ಯಾನ್ಸರ್ ಹಾಗೂ ಸ್ತ್ರೀ ರೋಗ ಜಾಗ್ರತಿ ಅರಿವು

November 11, 2025
suddi

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

By UllalaVaniFebruary 5, 20260

ಉಳ್ಳಾಲ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಹೊಂದಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೈಕೋ ರೋಡ್‌ ಸುಭಾಷನಗರ ನಿವಾಸಿ ಅನ್ವರ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

February 4, 2026
1 2 3 … 1,793 Next
Automatic YouTube Gallery

|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ

ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ಚಾಲನೆ

ಆರೋಗ್ಯಭರಿತ `ಕಲ್ಪರಸ' ಇಲ್ಲಿನ ಫೇಮಸ್ ಡ್ರಿಂಕ್
#ullalavani #news #ullala #kalparasa #udupinatural
|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ
Now Playing
|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ
ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ...
ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ಚಾಲನೆ

ಆರೋಗ್ಯಭರಿತ `ಕಲ್ಪರಸ' ಇಲ್ಲಿನ ಫೇಮಸ್ ಡ್ರಿಂಕ್
#ullalavani #news #ullala #kalparasa #udupinatural
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
Now Playing
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ...
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d