ತಲಪಾಡಿ: ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶತ ಚಂಡಿಕಾಯಾಗ ಸಮಿತಿ ಆಶ್ರಯದಲ್ಲಿ ಡಿ. 23ರಿಂದ ಡಿ.30 ರವರೆಗೆ ಬ್ರಹ್ಮಕಲಶ ಸಹಿತ ಶತ ಚಂಡಿಕಾಯಾಗ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಮೋಹನ್ ದಾಸ್ ರೈ, ಸಾಂತ್ಯಗುತ್ತು ಹೇಳಿದರು.
ತಲಪಾಡಿ ದೇವಸ್ಥಾನದ ವಠಾರದಲ್ಲಿ ಕರೆಯಲಾದ ಸುದ್ಧಿಗೋಷ್ಠಿಯಲ್ಲಿ ಏಳು ದಿನಗಳ ಕಾರ್ಯಕ್ರಮಗಳ ಮಾಹಿತಿ ನೀಡಿದ ಅವರು ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ತಲಪಾಡಿ ಶ್ರೀ ಗಣೇಶ್ ಭಟ್ ರವರ ಉಪಸ್ಥಿತಿಯಲ್ಲಿ ಹಾಗೂ ರಾಜಪುರೋಹಿತ ವಿದ್ವಾನ್ ಶ್ರೀ ವಿಷ್ಣುಮೂರ್ತಿ ಭಟ್ ರವರ ಪೌರೋಹಿತ್ಯದಲ್ಲಿ ನವೀಕೃತ ಧ್ವಜಸ್ತಂಭ ಕಲಶಾಭಿಷೇಕ, ಶತ ನಾರೀಕೇಳ ಗಣಯಾಗ, ಮೂಡಪ್ಪ ಸೇವೆ, ರುದ್ರಯಾಗ, ವಡೆ ಸೇವೆ, ಶತ ಚಂಡಿಕಾಯಾಗ, ಚಿನ್ನದ ಪೀಠ ಪ್ರಭಾವಳಿ, ಅಟ್ಟೆಕನ್ನಟಿ ಸಮರ್ಪಣೆ, ಶ್ರೀ ರಂಗಪೂಜೆ ಉತ್ಸವ ಜರಗಲಿದೆ.
ಡಿ.23 ರಂದು ವೈದಿಕ ಕಾರ್ಯಕ್ರಮಗಳೊಂದಿಗೆ ಮುಹೂರ್ತ , ದ್ವಾದಶ ನಾರಿಕೇಳ ಯಾಗ ರುದ್ರಪಾರಾಯಣ ಆರಂಭ , ರಾತ್ರಿ 7.30ಕ್ಕೆ ಮಹಾಪೂಜೆ , ಡಿ.24 ರಂದು ಸಂಜೆ: 6.00ಕ್ಕೆ ಧ್ವಜ ಕಲಶಾಧಿವಾಸ, ಪ್ರಧಾನ ಹೋಮ , ಡಿ.25 ರಂದು ಬೆಳಿಗ್ಗೆ 7.30ಕ್ಕೆ ಬ್ರಹ್ಮಕಲಶಾಭಿಷೇಕ , 9.10ರ ಮಕರ ಲಗ್ನದಲ್ಲಿ ಧ್ವಜ ಕಲಶಾಭಿಷೇಕ , ಸಂಜೆ 4.00 ರಿಂದ 6.30 ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ಶ್ರೀ ಗಣೇಶ ಮಂದಿರ ಬೀರಿ ವಠಾರದಿಂದ ನಡೆಯಲಿದ್ದು ಶ್ರೀ ಸೋಮನಾಥ ದೇವಸ್ಥಾನ, ಸೋಮೇಶ್ವರದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ, ಚಾಲನೆ ನೀಡಲಿದ್ದಾರೆ.
ಸಂಜೆ 7 ರಿಂದ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಾಕ್ರಬೈಲು ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರವೀಂದ್ರನಾಥ ಆಳ್ವ ಮಲಾರುಬೀಡು ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶೀಯ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಭಾಧ್ಯಕ್ಷ ಯು.ಟಿ.ಖಾದರ್ , ಶಾಸಕ ಅಶೋಕ್ ರೈ
ವಿಧಾನಪರಿಷತ್ ಸದಸ್ಯರಾದ ಶ್ರೀ ಮಂಜುನಾಥ ಭಂಡಾರಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಕಲಾಶ್ರೀ ವಿದುಷಿ ಸ್ವಾತಿ ಭಟ್ ಪಿ. ಹಾಗೂ ಶಿಷ್ಯ ವೃಂದದವರಿಂದ ಮತ್ತು ಶ್ರೀ ದುರ್ಗಾಸ್ವಾತಿ ನೃತ್ಯಾಲಯ ಅಸೈಗೋಳಿ, ಕೊಣಾಜೆ ಇವರಿಂದ ನೃತ್ಯಾರಾಧನ ಭರತನಾಟ್ಯ ಶಾಸ್ತ್ರಿಯ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಡಿ. 26 ರಂದು ಶ್ರೀದೇವಿ ಸಪ್ತಶತಿ ಪಾರಾಯಣ ಆರಂಭ, ಶ್ರೀ ರುದ್ರಪಾರಾಯಣ , ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಜರಗಿ,
ರಾತ್ರಿ 8.00ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಅಧ್ಯಕ್ಷ ಶಾಂತರಾಮ ಶೆಟ್ಟಿ ಸಿ.ಎ ಅಧ್ಯಕ್ಷತೆ ವಹಿಸಲಿದ್ದು, ಎಂ.ಆರ್.ಜೆ ಗ್ರೂಪ್ ಬೆಂಗಳೂರು ಇಲ್ಲಿನ ಅಧ್ಯಕ್ಷರಾಗಿರುವ ಪ್ರಕಾಶ್ ಶೆಟ್ಟಿ, ಉದ್ಘಾಟಿಸಲಿದ್ದಾರೆ. ಡಾ| ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಯಾಗಿ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ,ಶಾಸಕ ವೇದವ್ಯಾಸ ಕಾಮತ್ , ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ , ಕ್ರೆಡೈ ಮಂಗಳೂರಿನ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಸಲ್ದ ಗೌಜಿ, ಪ್ರಥಮ ಪ್ರಶಸ್ತಿ ವಿಜೇತ, ಸಿ.ಪಿ.ಎಲ್ ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ವೈಷ್ಣವಿ ಕಲಾವಿದೆರ್ , ಕೊಯಿಲ
ಹಾಗೂ ರಾತ್ರಿ 9 ಕ್ಕೆ ಸಾರ್ಲಪಟ್ಟದ ಸತ್ಯ-ಸ್ವಾಮಿ ಕೊರಗಜ್ಜ ಯಕ್ಷಗಾನ ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಲಿದೆ.
ಡಿ.27 ರಂದು ಅಷ್ಟೋತ್ತರ ಶತ ನಾರೀಕಳ ಗಣಯಾಗ, ಕಲಶಾಭಿಷೇಕ, ಶ್ರೀ ರುದ್ರಪಾರಾಯಣ ಬೆಳಿಗ್ಗೆ ಗಂಟೆ 10.30ಕ್ಕೆ : ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ , ಮಹಾಪೂಜೆ, ಅನ್ನಸಂತರ್ಪಣೆ, ಶ್ರೀ ಚಕ್ರಪೂಜೆ, ಮೂಡಪ್ಪ ಸೇವೆ, ಮಹಾಪೂಜೆ
ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ವಿವೇಕ್ ಶೆಟ್ಟಿ ಬೊಲ್ಯಗುತ್ತು ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಕೂಳೂರು ಮುಖ್ಯ ಅತಿಥಿಯಾಗಲಿದ್ದು,
ಡಾ| ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೆರವೇರಿಸಲಿದ್ದಾರೆ. ರಾತ್ರಿ ಗಂಟೆ 9.00 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೀತಾ ಸಾಹಿತ್ಯ ಸಂಭ್ರಮ-ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗ ನಡೆಯಲಿದೆ.
ಡಿ.28 ರಂದು ರಂದು ಬೆಳಿಗ್ಗೆ 7.30ಕ್ಕೆ ಶ್ರೀ ರುದ್ರಯಾಗ, ರುದ್ರಾಭಿಷೇಕ, ಶ್ರೀ ವೀರಭದ್ರ ದೇವರಿಗೆ ವಡೆಸೇವೆ ಮಹಾಪೂಜೆ, ಅಷ್ಟಾವಧಾನ ಸೇವೆ , ಶ್ರೀ ಗಣಪತಿ ರಂಗಪೂಜೆ, ಉತ್ಸವ ಬಲಿ ನಡೆಯಲಿದೆ.
ನಿಟ್ಟೆ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷರಾದ ವಿನಯ ಹೆಗ್ಡೆ, ಅಧ್ಯಕ್ಷತೆಯಲ್ಲಿ ಎ.ಜೆ.ಶೆಟ್ಟಿ, ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹರು, ಪ್ರಕಾಶ್ ಪಿ.ಎಸ್ ನೆರವೇರಿಸಲಿದ್ದಾರೆ.
ಡಿ. 29 ಕ್ಕೆ ಬೆಳಿಗ್ಗೆ 7.30ಕ್ಕೆ : ಶತ ಚಂಡಿಕಾಯಾಗ 11.30ಕ್ಕೆ ಪುರ್ಣಾಹುತಿ ನಡೆಯಲಿದ್ದು, ಮಧ್ಯಾಹ್ನ 12.00ಕ್ಕೆ ಚಿನ್ನದ ಪೀಠ ಪ್ರಭಾವಳಿ, ಚಿನ್ನದ ಅಟ್ಟೆಕನ್ನಟಿ ಸಮರ್ಪಣೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ,ಶ್ರೀ ರಂಗಪೂಜೆ ,ಮಹೋತ್ಸವ ಬಲಿ, ಅಷ್ಟಾವಧಾನ ಸೇವೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಕ್ತಿ ರಸಮಂಜರಿ- ಕಲಸ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ನಡೆಯಲಿದೆ. ಡಿ.30 ರಂದು ನವಕಪ್ರಧಾನ, ಕಲಶಾಭಿಷೇಕ, ಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆಯಿಂದ ಮುಕ್ತಾಯಗೊಳ್ಳಲಿದೆ.
ಸುದ್ಧಿಗೋಷ್ಠಿಯಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಗಣೇಶ್ ಭಟ್, ಪಂಜಾಳ, ಸಮಿತಿ ಸದ್ಯರುಗಳಾದ ನಾರಾಯಣ ಕಜೆ, ಮೋಹನ್ ದಾಸ್ ಶೆಟ್ಟಿ ನೆತ್ತಿಲಬಾಳಿಕೆ, ಧರ್ಮಪಾಲ ಭಂಡಾರಿ ದೇವಿಪುರ, ಯುವರಾಜ ದೇವಿನಗರ , ವರುಣ್ ರಾಜ್ ತಲಪಾಡಿ, ನಯನ ಪಾರ್ಥಸಾರಥಿ ಕಿನ್ಯ, ಆಶಾ ಪದ್ಮನಾಭ ಶೆಟ್ಟಿ ಬಾವ ಉಪಸ್ಥಿತರಿದ್ದರು.
`ದೇವಸ್ಥಾನಕ್ಕೇ ಸೇರಿದ ಬಾಕಿಮಾರು ಗದ್ದೆ ಅನ್ಯರ ಕೈಯಲ್ಲಿರುವುದರಿಂದ ಅದನ್ನು ಮತ್ತೆ ದೇವಸ್ಥಾನದ ಆಸ್ತಿಯನ್ನಾಗಿ ಮಾಡಲು ಯಾಗವನ್ನು ಕೈಗೊಳ್ಳಲಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಕೆರೆ , ಅತಿಥಿ ಗೃಹ ಅನ್ನಛತ್ರ, ಗೋಶಾಲೆ, ಸಭಾಂಗಣ ಸೇರಿದಂತೆ ಹಲವಾರು ಅಭಿವೃದ್ಧಿ ಪರ ಯೋಜನೆಗಳನ್ನು ದೃಷ್ಟಿಯಲ್ಲಿಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲದೆ ದೇವಿಯ ಹೆಸರಿನಲ್ಲಿ ಸ್ಥಳೀಯ ಮಕ್ಕಳು ಉಚಿತ ಶಿಕ್ಷಣ ಪಡೆಯಬೇಕು ಅನ್ನುವ ಕಲ್ಪನೆಯೊಂದಿಗೆ ಉಚಿತ ಶಿಕ್ಷಣದ ಶಾಲೆಯನ್ನು ಸ್ಥಾಪಿಸುವ ಗುರಿಯನ್ನು ದೇವಸ್ಥಾನ ಹೊಂದಿದೆ’
ಗಣೇಶ್ ಭಟ್
ಪ್ರಧಾನ ಅರ್ಚಕರು




