Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
All News

ಪಜೀರು ಅಪಾಯಕಾರಿ ಕ್ವಾರೆ ಮನೆಗಳಲ್ಲಿ ಬಿರುಕು ಅನುಮತಿ ರದ್ದುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ದೂರು

UllalaVaniBy UllalaVaniSeptember 13, 2024Updated:September 13, 2024No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ತೊಕ್ಕೊಟ್ಟು : ಪಜೀರು ಅಕ್ರಮ ಕಲ್ಲು ಕ್ವಾರೆಯಿಂದಾಗಿ ಸ್ಥಳೀಯ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನೀರಿನ ಒರತೆ ಕಡಿಮೆಯಾಗಿ, ಕೃಷಿಕರು ವಲಸೆ ಹೋಗುವ ಸ್ಥಿತಿ ನಿರ್ಮಾಣಗೊಂಡಿದ್ದು, ಸಾರ್ವಜನಿಕರು ನಡೆದಾಡದಂತಹ ಸ್ಥಿತಿಯನ್ನು ನಿರ್ಮಿಸಿದ ಕ್ವಾರೆ ಎಲ್ಲಾ ಅನುಮತಿಗಳನ್ನು ಸ್ಥಳ ಪರಿಶೀಲನೆ ನಡೆಸಿ ರದ್ದುಗೊಳಿಸಬೇಕು ಹಾಗೂ ಈವರೆಗೆ ಸಾಗಾಟ ನಡೆಸಿದ ರಾಜಸ್ವವನ್ನು ಇಲಾಖೆ ವಸೂಲಿ ಮಾಡಬೇಕು ಎಂದು ಕ್ವಾರೆ ಸಂತ್ರಸ್ತರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಿದೆ.
ಉಳ್ಳಾಲ ತಾಲೂಕು ಪಜೀರು ಗ್ರಾಮದ ನಾಗಬನ ಎಂಬಲ್ಲಿ ಸರ್ವೆ ನಂಬರ್ 139/C ರಲ್ಲಿ ಪಜೀರು ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಭರತ್ ಶೆಟ್ಟಿ ಯಾನೆ ಬಂಟಪ್ಪ ಶೆಟ್ಟಿ ಎಂಬವರು ಕಾನೂನು ಬಾಹಿರವಾಗಿ ಪರಿಸರ, ಸಾರ್ವಜನಿಕರ, ಜಾನುವಾರುಗಳ ಪ್ರಾಣಕ್ಕೆ ಮತ್ತು ಸ್ಥಳೀಯ ಮನೆಗಳ, ಹಟ್ಟಿ, ಕೊಟ್ಟಿಗೆ ಕೃಷಿ ಚಟುವಟಿಕೆಗಳಿಗೆ ಅಪಾಯಕಾರಿಯಾಗಿ ಕಲ್ಲು ಕ್ವಾರಿ ಗಣಿಗಾರಿಕೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
ನಿಯಮ ಮೀರಿ ಬಹಳಷ್ಟು ಆಳವಾಗಿ ಮತ್ತು ನಿಗದಿತ ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸಿ ಅಪಾರವಾದ ಪ್ರಾಕೃತಿಕ ಸಂಪತ್ತು ಕೊಳ್ಳೆ ಹೊಡೆದಿದ್ದಾರೆ. ಇದರಿಂದ ಪರಿಸರದಲ್ಲಿನ ನಾಗಬನ, ಧಾರ್ಮಿಕ ನಂಬಿಕೆಯ ಸ್ಥಳಗಳಿಗೆ ಗೇಲ್ ಗ್ಯಾಸ್ ಪೈಪ್ ಲೈನ್ ಗೂ ಅಪಾಯ ಉಂಟಾಗಿದೆ. ನಿತ್ಯ ಇದೇ ರಸ್ತೆಗಳಲ್ಲಿ ನೂರಾರು ಜನ ವಾಹನಗಳು, ಶಾಲೆ, ಕಾಲೇಜು, ಉದ್ಯೋಗ ವ್ಯವಹಾರಗಳ ನಿಮಿತ್ತವೂ ಸಂಚಾರ ಮಾಡುತ್ತಿರುತ್ತಾರೆ.
ನಿರಂತರ ಕಲ್ಲು ಗಣಿಗಾರಿಕೆಯಿಂದಾಗಿ ಭೂಮಿಯ ನಿರಂತರ ಅದುರುವಿಕೆಯಿಂದ ಮನೆಗಳು, ಕಟ್ಟಡಗಳು ಎಲ್ಲವೂ ಬಿರುಕು ಬಿಟ್ಟಿವೆ. ಸಾರ್ವಜನಿಕರು ¥ ಹಾನಿಗೊಳಗಾದ ಮನೆಗಳನ್ನು ದುರಸ್ತಿಗೊಳಿಸಲಾಗದ ಸ್ಥಿತಿಯಲ್ಲಿದ್ದು, ಪ್ರತಿ ಕ್ಷಣವನ್ನು ಜೀವ ಕೈಯಲ್ಲಿಟ್ಟುಕೊಂಡು ಭಯದಿಂದ ಕಾಲ ಕಳೆಯಬೇಕಿದೆ.
ಕೃಷಿ ಜಮೀನುಗಳಿಗೂ ನೀರಾವರಿ ಆಶ್ರಯದ ತೋಡು, ಬಾವಿ, ಕೆರೆ ನೀರು ಒರತೆಗಳು ಬತ್ತಿ ತೋಟಗಳು ಒಣಗಿವೆ. ಕೃಷಿಕರು ನೀರಿನ ಕೊರತೆಯಿಂದ ವಲಸೆ ಹೋಗುವ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ. ಪರಿಸರದ ಬಡ ದುರ್ಬಲ, ಅಮಾಯಕ ನಿವಾಸಿಗಳ ವಿರುದ್ಧ ನಿರಂತರ ದಬ್ಬಾಳಿಕೆ, ಹಣ ಬಲದಿಂದ ಭಯ ಹುಟ್ಟಿಸಿ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪರಿಸರವನ್ನು ಸರ್ವೆ ನಡೆಸದೆ, ಸ್ಥಳೀಯರಿಗೆ ನೋಟೀಸು ಸಹ ನೀಡದೆ ಗಣಿಗಾರಿಕೆ ಗುತ್ತಿಗೆ , ಪರವಾನಿಗೆಯನ್ನು ಇಲಾಖೆ ನೀಡಿದೆ. ತಕ್ಷಣವೇ ಪರಿಸರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ಪರಿಶೀಲನೆ ನಡೆಸಿ ನೀಡಿರುವ ಎಲ್ಲಾ ರೀತಿಯ ಅನುಮತಿಗಳನ್ನು ರದ್ದುಗೊಳಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸರಕಾರಿ ವೆಬ್ ಸೈಟ್ ನಲ್ಲಿ ಉಳ್ಳಾಲ ತಾಲ್ಲೂಕು ಫಜೀರು ಗ್ರಾಮದಲ್ಲಿ ಯಾವುದೇ ಕಪ್ಪು ಕಲ್ಲಿನ ಕೋರೆ ಬಗ್ಗೆ ಉಲ್ಲೇಖ ಇಲ್ಲ. ಆದರೂ ಅಕ್ರಮವಾಗಿ ಬ್ರಹತ್ ಕೋರೆಗಳು ಕಾರ್ಯ ನಿರ್ವಹಿಸುತಿರುವುದು ಹಾಸ್ಯಾಸ್ಪದವಾಗಿದೆ ಅನ್ನುವ ಆರೋಪವನ್ನು ಮಾಡಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

February 20, 2026

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

February 19, 2026

ಅಲ್ ಬದ್ರಿಯತುಲ್ ತಿಭಿಯಾನ್ ಪ್ರೀ ಶಾಲೆಯಲ್ಲಿ ನಡೆಯಿತು `ಕಿಡ್ ಕೈಟ್ ಎಕ್ಸೋ’

February 19, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

By UllalaVaniFebruary 20, 20260

ಉಳ್ಳಾಲ: ಬಿಜೆಪಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ಸುಜೀತ್ ಮಾಡೂರು ಅವರನ್ನು ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

February 19, 2026

ಶಕ್ತಿನಗರದ ಮನೆಯೊಂದರ ಬಳಿ ಚಿರತೆ….! ಆತಂಕ

February 19, 2026

ಅಲ್ ಬದ್ರಿಯತುಲ್ ತಿಭಿಯಾನ್ ಪ್ರೀ ಶಾಲೆಯಲ್ಲಿ ನಡೆಯಿತು `ಕಿಡ್ ಕೈಟ್ ಎಕ್ಸೋ’

February 19, 2026
1 2 3 … 1,807 Next
Automatic YouTube Gallery

ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!

ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್

ಘಟನೆಯನ್ನು ಖಂಡಿಸಿದ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ
#ullalavani #Mudipu #news #package #bus #Bhavani #ira #Manchi #privatebus #privatebuscondecuter
ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!
Now Playing
ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!
ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ...
ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್

ಘಟನೆಯನ್ನು ಖಂಡಿಸಿದ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ
#ullalavani #Mudipu #news #package #bus #Bhavani #ira #Manchi #privatebus #privatebuscondecuter
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
Now Playing
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ...
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ಸಾರ್ವಜನಿಕರಿಗೆ ತೊಂದರೆ

ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಈ ಚರಂಡಿ ನೀರಿಗೆ ವ್ಯವಸ್ಥೆ ಕಲ್ಪಿಸುವವರು ಯಾರು ಸ್ವಾಮಿ....!

#ullalavani #News #Package #Thokkottu #Junction
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d