UN networks
ಮಂಗಳೂರು: ದೇಶ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಫ್ರೀಡಂ ಕಮ್ಯುನಿಟಿ ಹಾಲ್ ರೈಡ್ ಮಾಡಿ ಬೀಗಮುದ್ರೆ ಹಾಕಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪಿಎಫ್ ಐ, ಸಿಎಫ್ ಐನ ಹಲವಾರು ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ವಿಟ್ಲ ಉಪ ತಹಶಿಲ್ದಾರ್ ಗೆ ಸೀಜ್ ಮಾಡಲು ಸೂಚನೆ ನೀಡಿದ್ದಾರೆ.
ಈ ಹಿನ್ನಲೆ ಆರೋಪಿ ಅಯುಬ್ ಅಗ್ನಾಡಿ ಜೊತೆ ಸ್ಥಳ ಮಹಜರು ಮಾಡಿದ್ದು ವಿಟ್ಲ ಡೆಪ್ಯುಟಿ ತಹಶಿಲ್ದಾರ್ ವಿಜಯ್ ವಿಕ್ರಮ, ವಿಟ್ಲ ಪೊಲೀಸರು ಡಿಸಿ ಆದೇಶದ ಹಿನ್ನಲೆ ಬೀಗಮುದ್ರೆ ಹಾಕಲಾಗಿದೆ.


