ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಇಲ್ಲಿನ ನಗರಸಭಾ ವ್ಯಾಪ್ತಿಗೆ ಒಳಪಟ್ಟ ಸೇವಂತಿಗುಡ್ಡೆ ರಾಜೇಶ್ ಪಾಯಸ್ ಎಂಬವರಿಗೆ ಸೇರಿದ ಮನೆ ಸಂಪೂರ್ಣ ಕುಸಿದುಬಿದ್ದಿದೆ.
ಘಟನೆ ವೇಳೆ ಮನೆಯೊಳಗೆ ರಾಜೇಶ್, ಪತ್ನಿ ಪೆಟ್ರೋಲಿಯಾ ಹಾಗೂ ಎರಡು ವರ್ಷದ ಮಗುವಿದ್ದು, ಸದ್ದು ಕೇಳಿ ಹೊರಬಂದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ರಾಜೇಶ್ ಅವರಿಗೆ ಘಟನೆಯಿಂದ ಲಕ್ಷಾಂತರ ನಷ್ಟ ಉಂಟಾಗಿದೆ. ಸ್ಥಳಕ್ಕೆ ಗ್ರಾಮಕರಣಿಕ ಮನು, ಪೆರ್ಮನ್ನೂರು ಸಂತ ಸಬೆಸ್ತಿಯನ್ನರ ಚರ್ಚಿನ ಧರ್ಮಗುರು ರೂಪೇಶ್ ಮಾಡ್ತಾ, ನಗರಸಭೆ ಸದಸ್ಯ ಉಸ್ಮಾನ್ ಕಲ್ಲಾಪು ಭೇಟಿ ನೀಡಿ ಪರಿಹಾರ ಒದಗಿಸುವ ಬಗ್ಗೆ ವಿಶ್ವಾಸ ನೀಡಿದರು.




