UN networks
ಕೊಂಡಾಣ: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ ಮುಂಡತ್ತಾಯ ದೈವಸ್ಥಾನದಲ್ಲಿ ಜೋರ್ತಿ ವಿದ್ವಾನ್ ಕುಂಬ್ಳೆ ಶೃಜೇಶ್ ಪೊದುವಾಳ್ ಮತ್ತು ಸತೀಶ್ ಪಣಿಕ್ಕರ್ ಊರ ಪರವೂರ ಭಕ್ತಾಧಿಗಳ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಅಷ್ಠಮಂಗಲ ಪ್ರಶ್ನೆ ಚಿಂತನೆ ಇತ್ತೀಚೆಗೆ ನಡೆಯಿತು.
ವೈಷ್ಣವಿ ಎಸ್. ಆಚಾರ್ಯ ಸ್ವರ್ಣರಾಶಿ ಇಡುವ ಮೂಲಕ ಪ್ರಶ್ನೆ ಚಿಂತನೆ ಆರಂಭಿಸಲಾಯಿತು.
ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಲ್ಲಿ ಆರಂಭಗೊಂಡ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮಾರ್ಗದರ್ಶಕ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಸದಸ್ಯರಾದ ಗಿರಿಪ್ರಕಾಶ್ ತಂತ್ರಿ ಪೊಳಲಿ, ಸಂಜೀವ ಸೂಟರ್ಪೇಟೆ, ಗೋಪಾಲ್ ಕುತ್ತಾರ್, ಶೃಂಗೇರಿ ಶಂಕರ ಮಠ ಕೋಟೆಕಾರು ಇದರ ಧರ್ಮದರ್ಶಿ ಸತ್ಯಶಂಕರ ಬೊಳ್ಳಾವ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಸ್ತೂರಿ ಪಂಜ, ಈಶ್ವರ್ ಕಟೀಲ್, ಹಿರಿಯರಾದ ಸೀತಾರಾಮ ಬಂಗೇರ, ಲಕ್ಷ್ಮಣ ಅಬ್ಬಕ್ಕನಗರ, ಬಾಬು ಬಂಗೇರ ಉಳ್ಳಾಲ, ಗೋಪಾಲ ಶೆಟ್ಟಿ ಇನೋಳಿ, ಗಡಿಕಾರರಾದ ದೇವು ಶೆಟ್ಟಿ, ಮೋಹನ್ ದಾಸ್ ಭಂಡಾರಿ, ಗಡದಗುತ್ತು ರಘುನಾಥ್ ಶೆಟ್ಟಿ, ಭಗವತೀಶ ಉಚ್ಚಿಲ, ಪವಿತ್ರ ಗಟ್ಟಿ ಕುತ್ತಾರು, ರಾಮದಾಸ್ ಸೋಮೇಶ್ವರ, ಶ್ರೀಧರ್ ಪೂಜಾರಿ ಕನೀರುತೋಟ, ಪೊಳಲಿ ಸುಬ್ರಾಯ ಮಾರ್ಲ, ಸಂತೋಷ್ ಶೆಟ್ಟಿ ಅಸೈಗೋಳಿ, ಸುಧಾಕರ ಭಂಡಾರಿ, ರಮೇಶ್ ಕುಲಾಲ್ ಪಿಲಿಕೂರು, ಉದಯ ಕುಮಾರ್ ಶೆಟ್ಟಿ ಶಕ್ತಿನಗರ, ಶೇಖರ ಕೊಲ್ಯ, ವಿಠಲ ಶೆಟ್ಟಿ ತಾಮಾರ್, ರವಿರಾಜ ಶೆಟ್ಟಿ ತಾಮಾರ್, ಜಿತೇಂದ್ರ ಶೆಟ್ಟಿ ತಲಪಾಡಿ, ನಾರಾಯಣ ಕಜೆ ಕಿನ್ಯಾ, ಸುಧಾಕರ್ ಆಳ್ವ ಕಿನ್ಯಾ, ಮಾಜಿ ಅಧ್ಯಕ್ಷರುಗಳಾದ ಕೃಷ್ಣ ಶೆಟ್ಟಿ ಕೋಟೆಕಾರುಗುತ್ತು, ರಾಜೇಶ್ ರೈ ಕೋಟೆಕಾರು ಅಲ್ಲದೆ ವಿವಿಧ ದೇವಸ್ಥಾನಗಳ, ದೈವಸ್ಥಾನಗಳ ಸದಸ್ಯರುಗಳ ಅರ್ಚಕರು, ಆಚಾರಪಟ್ಟವರು, ಶ್ರೀ ಕ್ಷೇತ್ರ ಕೊಂಡಾಣದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಗುರಿಕಾರರು, ಪರಿಚಾರಕರು, ಭಕ್ತರು ಉಪಸ್ಥಿತರಿದ್ದರು.
ದೈವಿಕ, ಲೌಕಿಕ, ಬೌತಿಕ ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಪ್ರಶ್ನಾಚಿಂತನೆಯ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ದೋಷ ಪರಿಹಾರಕ್ಕಾಗಿ ಅಷ್ಟಮಂಗಲ ಪ್ರಶ್ನೆಯನ್ನು ಇಡಲಾಗಿದೆ , ಭಕ್ತರು , ಗಣ್ಯರು ಮುಂದಿನ ದಿನಗಳಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕಿದೆ. ಮುಂದಿನ ಪ್ರಶ್ನಾ ಚಿಂತನೆ ಸಂದರ್ಭ ಕದ್ರಿಯ ಶ್ರೀರಂಗ ಐತಾಳ್ ಹಾಗೂ ಕ್ಷೇತ್ರದ ತಂತ್ರಿ ನೀಲೇಶ್ವರ ಪದ್ಮನಾಭ ತಂತ್ರಿ ಉಪಸ್ಥಿತರಿರುವರು ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.




