UN networks
ಹರೇಕಳ: ಹರೇಕಳದಲ್ಲಿ ಯೆನೆಪೋಯ ಸಂಸ್ಥೆ ಆರಂಭಿಸಿರುವ ಬೃಹತ್ ತ್ಯಾಜ್ಯ ನಿರ್ವಹಣೆ ಘಟಕ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಮಾದರಿ. ನಗರದಲ್ಲಿಯೂ ಇಂತಹ ನಿರ್ವಹಣೆ ಘಟಕವನ್ನು ಯಾವ ರೀತಿಯಾಗಿ ಸ್ಥಾಪಿಸಬಹುದಾದ ಚಿಂತನೆ ನಡೆಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಕಮೀಷನರ್ ಅಕ್ಷಿ ಶ್ರೀಧರ್ ಐಎಎಸ್ ಅಭಿಪ್ರಾಯಪಟ್ಟರು.
ಅವರು ಹರೇಕಳ ಗ್ರಾಮದ ಎಲಿಯಾರುಪದವು ಮಲೆಕೆದು ಪರಿಸರದಲ್ಲಿ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯ ಸ್ಥಾಪಿಸಿದ ಬೃಹತ್ ತ್ಯಾಜ್ಯ ನಿರ್ವಹಣಾ ಘಟಕ `ಉವ್ರ್ವಿ’ ಯನ್ನು ಉದ್ಘಾಟಿಸಿ ಮಾತನಾಡಿದರು.
ದಿನಕ್ಕೆ 10 ಟನ್ ನಷ್ಟು ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ತಯಾರಿಸುವ ಘಟಕ ಜಿಲ್ಲೆಯಲ್ಲೇ ಪ್ರಥಮ . ಖಾಸಗಿಯವರು ಮುತುವರ್ಜಿ ವಹಿಸಿ ನಡೆಸಿದಂತಹ ಯೋಜನೆ ಸಮಾಜಕ್ಕೆ ಪೂರಕವಾಗಲಿ. ನಗರದಲ್ಲಿಯೂ ಇಂತಹ ತ್ಯಾಜ್ಯ ಸಂಸ್ಕರಣಾ ಘಟಕದ ಅಗತ್ಯತೆ ಇದ್ದು, ಅದನ್ನು ಸ್ಥಾಪಿಸುವ ಚಿಂತನೆ ನಡೆಸುತ್ತೇವೆ ಎಂದರು.
ಪರಿಸರವಾದಿ ಜೀತ್ ಮಿಲನ್ ರೋಚ್ ಮಾತನಾಡಿ , ಖಾಸಗಿಯವರು ಇಷ್ಟು ದೊಡ್ಡ ತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಿರುವುದು ಶ್ಲಾಘನೀಯ. ತಾನು ರೂಪಿಸಿದ ಯೋಜನೆ ರೂಪುರೇಷೆಗೆ ಯೆನೆಪೋಯ ಸಂಸ್ಥೆ ಗೌರವ ನೀಡಿದೆ. 10 ಟನ್ ದಿನಕ್ಕೆ ತ್ಯಾಜ್ಯ ಸಂಸ್ಕರಣಾ ಸಾಮಥ್ರ್ಯವನ್ನು ಹೊಂದಿರುವ ಘಟಕದಲ್ಲಿ ಗ್ರಾಮದ ತ್ಯಾಜ್ಯವನ್ನು ಸಂಗ್ರಹಿಸಲಾಗುವುದು. ಘಟಕ ಸೂಕ್ಷ್ಮಜೀವಿಗಳನ್ನು ಬಳಸಿ ಗೊಬ್ಬರವನ್ನು ತಯಾರಿಸಲಿದೆ ಎಂದರು.
ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಮಾತನಾಡಿ, ಗ್ರಾಮಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಘಟಕ ಕಾರ್ಯಾಚರಿಸಲಿ. ಹರೇಕಳವನ್ನು ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ಖಾಸಗಿ ಸಂಸ್ಥೆ ಕೈ ಕೈಜೋಡಿಸಿದೆ. ಸುತ್ತಲಿನ ಹಾಗೂ ಸಂಸ್ಥೆಯ ತ್ಯಾಜ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸ್ಥಾಪಿಸಿ ಕಾರ್ಯಾಚರಿಸುವ ಮೂಲಕ ಯಶಸ್ವಿಯಾಗಲಿ ಎಂದರು.
ಈ ಸಂದರ್ಭ ಯೆನೆಪೋಯ ವಿ.ವಿ ಸಹಕುಲಾಧಿಪತಿ ಫರ್ಹಾದ್ ಯೆನೆಪೋಯ, ಉವ್ರ್ವಿ ನಿರ್ದೇಶಕಿ ಸುರ್ಮೀ ಪರ್ಹಾದ್, ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರಾಯಪ್ಪ, ಕುಲಸಚಿವ ಡಾ| ಗಂಗಾಧರ್ ಸೋಮಯಾಜಿ, ಉದ್ಯಮಿ ಅಶೋಕ್ ಪೂಂಜಾ, ಝೋನಲ್ ಕಮೀಷನರ್ ,ಎಕ್ಸಿಕ್ಯುಟಿವ್ ಇಂಜಿನಿಯರ್ ಶಬರೀನಾಥ್ ರೈ, ಹಾಗೂ ಹರೇಕಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುಡ್ತಡ್ಕ ಉಪಸ್ಥಿತರಿದ್ದರು.
`ತ್ಯಾಜ್ಯ ವಿಚಾರಕ್ಕೆ ಪರಿಹಾರ ಕಂಡುಕೊಳ್ಳುವುದು ದೊಡ್ಡ ಸಮಸ್ಯೆ. 3.5 ರಿಂದ 4 ಟನ್ ಕಸ ಯೆನೆಪೋಯ ಸಂಸ್ಥೆಯಿಂದ ಬಂದಲ್ಲಿ ಉಳಿದ ತ್ಯಾಜ್ಯ ಗ್ರಾಮಸ್ಥರಿಂದ ಸಂಗ್ರಹಿಸಿ ಸಂಸ್ಕರಿಸಲಾಗುವುದು’
ಗಂಗಾಧರ ಸೋಮಯಾಜಿ
ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯ
ಚಿತ್ರ: 2ಯುಎಲ್ 1: ಹರೇಕಳದಲ್ಲಿ ಬೃಹತ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮನಪಾ ಕಮೀಷನರ್ ಅಕ್ಷಿ ಶ್ರೀಧರ್ ಚಾಲನೆ ನೀಡಿದರು.


