ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟಿನ ಅಧೀನದ ದೇರಳಕಟ್ಟೆಯ ಮಸ್ಜಿದ್ ಉಮರ್ ಬಿನ್ ಖುತ್ತುಬ್ನಲ್ಲಿ ಸಂಭ್ರಮದಲ್ಲಿ ಈದ್-ಉಲ್- ಫಿತ್ರ್ ಆಚರಿಸಲಾಯಿತು. ಯುವ ಪಂಡಿತ ನವಲ್ ರಹ್ಮಾನ್ ಈದ್ ನಮಾಜಿನ ನೇತೃತ್ವ ವಹಿಸಿ ಕುತುಬ್ ನೆರವೇರಿಸಿದರು.
ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ನ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ, ಮಸೀದಿ ಅಧ್ಯಕ್ಷ ಮಹಮ್ಮದ್ ಯಾಸೀನ್ ಮತ್ತು ಕಾರ್ಯದರ್ಶಿ ಅಹ್ಮದ್ ಮಾಸ್ತರ್ ಮೊದಲಾದವರು ಭಾಗವಹಿಸಿದ್ದರು.
ಮಹಿಳೆಯರ ಸಹಿತ ನೂರಾರು ಮಂದಿ ಈದ್ ನಮಾಜಿನಲ್ಲಿ ಭಾಗವಹಿಸಿದ್ದರು.









