ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಔಷಧಿ ಗಿಡಗಳ ವನವನ್ನು ನಿರ್ಮಿಸಲು ಸರಕಾರ ಚಿಂತನೆ ನಡೆಸಿದ್ದು, ಇದು ಆಯುರ್ವೇದದಲ್ಲಿ ನಾಟಿ ವೈದ್ಯರ ಅನುಕೂಲಕ್ಕಾಗಿ ನಡೆಸುತ್ತಿರುವ ಪ್ರಕ್ರಿಯೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಕ್ಯಾಂಪಸ್ನಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಕೃತಿಯಿಂದ ಸಿಗುವ ಔಷಧ ಹಲವು ರೋಗಗಳಿಗೆ ರಾವiಬಾಣ. ಹಿರಿಯರು ನಾಟಿ ಮದ್ದು ತಯಾರಿಸಿ ಹಲವು ರೋಗಗಳನ್ನು ಗುಣಪಡಿಸುತ್ತಿದ್ದರು. ಇಂತಹ ಔಷಧೀಯ ಗಿಡಗಳನ್ನು ಅನುವಂಶಿಕವಾಗಿ ಉಳಿಸುವ ಪ್ರಯತ್ನ ಕಿರಿಯರಿಂದ ಆಗಬೇಕಿದೆ. ಆಯುರ್ವೇದ ಔಷಧಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ಕೋಟಿ ಚೆನ್ನಯ್ಯರ ಜನ್ಮಭೂಮಿ ಪಡುಮಲೆಯಲ್ಲಿ ದೇವಿ ಬೈದೇವಿ ಹೆಸರಿನ ಹಾಗೂ ಪಿಲಿಕುಳದಲ್ಲಿ ಔಷಧಿ ವನವನ್ನು ಸ್ಥಾಪಿಸಲಾಗಿದೆ. ಔಷಧಿ ಗಿಡಗಳ ಪರಿಚಯ ಹೊಸ ಪೀಳಿಗೆಗೆ ಆಗಬೇಕಿದೆ. ಈ ನಿಟ್ಟಿನಲ್ಲಿ ಆಲೋಪತಿ ಔಷಧಿ ಕೊಡುವ ಕೇಂದ್ರ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಆಯುರ್ವೇದ ಗಿಡಗಳನ್ನು ನೆಟ್ಟು ಜನರಿಗೆ ಪರಿಚಯ ಮಾಡುವುದು ಶ್ಲಾಘನೀಯ ಎಂದರು.
ನಿಟ್ಟೆ ವಿ.ವಿ ಯ ಉಪಕುಲಪತಿ ಡಾ.ಎಸ್. ರಮಾನಂದ ಶೆಟ್ಟಿ , ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ. ಸತೀಶ್ ರಾವ್, ಡಾ.ಜಯಪ್ರಕಾಶ್ ಶೆಟ್ಟಿ , ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್, ಎ.ಬಿ. ಶೆಟ್ಟಿ ಸ್ಮಾರಕ ದಂತ ವಿe್ಞÁನ ಮಹಾ ವಿದ್ಯಾಲಯದ ಪೆÇ್ರಫೆಸರ್ ಡಾ.ಮುರಳೀ ಮೋಹನ್ ಚೂಂತಾರು , ಡಾ.ಸುಮಲತಾ ಶೆಟ್ಟಿ , ಡಾ.ಪಿ,ಎಸ್ ಪ್ರಕಾಶ್ , ಡಾ.ಅಮೃತ್ ಮಿರಾಜ್ಕರ್, ಡಾ. ನಿತಾಶ, ರಚನಾ ಚಂಗಪ್ಪ ಹಾಗೂ ನಿಟ್ಟೆ ವಿವಿಯ ಸಾರ್ವಜನಿಕ ಸಂಪರ್ಕಾ„ಕಾರಿ ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.





