Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರ ಶೀಘ್ರದಲ್ಲೇ ಲೋಕಾರ್ಪಣೆ : ಮಾಜಿ ಸಚಿವ ಯು.ಟಿ.ಖಾದರ್

UllalaVaniBy UllalaVaniJuly 29, 2019No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ : ಗ್ರಾಮಮಟ್ಟದಲ್ಲಿ ವಿಶೇಷ ಅನುಮತಿ ಪಡೆದುಕೊಂಡು ,  ಗುಲಾಂ ನಬಿ ಆಝಾದ್ ಕೇಂದ್ರ ಸಚಿವರಾಗಿದ್ದ ಸಂದರ್ಭ ಪಡೆದುಕೊಂಡ ಅನುಮತಿಯಡಿ ನಗರದಿಂದ ಕೇವಲ ಆರು ಕಿ.ಮೀ ದೂರದ ಉಳ್ಳಾಲದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರ ಜನರ ಸೇವೆಗೆ ಸಿದ್ಧಗೊಂಡಿದೆ. ಶೀಘ್ರದಲ್ಲೇ  ಲೋಕಾರ್ಪಣೆಗೊಳ್ಳಲಿದೆ ಎಂದು  ಮಾಜಿ ಸಚಿವ ಹಾಗೂ ಉಳ್ಳಾಲ ಶಾಸಕ ಯು.ಟಿ.ಖಾದರ್ ಹೇಳಿದರು.

ಅವರು ಉಳ್ಳಾಲದಲ್ಲಿ  ನೂತನವಾಗಿ ನಿರ್ಮಾಣಗೊಂಡಿರುವ ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸವಲತ್ತುಗಳನ್ನು, ಉಪಕರಣಗಳನ್ನು ವೀಕ್ಷಿಸಿ ಬಳಿಕ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದೆ ಉಳ್ಳಾಲ ಗ್ರಾಮವಾಗಿದ್ದ ಸಂದರ್ಭ ವಿಶೇಷ ಅನುಮತಿಯನ್ನು ಪಡೆಯಲಾಗಿತ್ತು.  ಇದೀಗ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ ಶವಾಗಾರ, ಪೋಸ್ಟ್ ಮಾರ್ಟಂ ವ್ಯವಸ್ಥೆ, ವೈದ್ಯರ ಕ್ವಾಟ್ರರ್ಸ್ , ಅತ್ಯಾಧುನಿಕ ಉಪಕರಣಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.  ಸಿಬ್ಬಂದಿ , ವೈದ್ಯರು ಹಾಗೂ ಉಪಕರಣಗಳ ಕೊರತೆಯಿಂದಾಗಿ ಉದ್ಘಾಟನೆ ವಿಳಂಬವಾಗಿದೆ.  ಸದ್ಯ ಕಿರು ಆಸ್ಪತ್ರೆಯಲ್ಲಿರುವ ಎಲ್ಲಾ ರೀತಿಯ ಉಪಕರಣಗಳು  ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.  ಮೂವರು ಎಂಬಿಬಿಎಸ್ ವೈದ್ಯರು, ಸ್ತ್ರೀರೋಗತಜ್ಞ, ಮಕ್ಕಳ ತಜ್ಞ, ಫಿಸಿಷಿಯನ್,  ದಂತ ವೈದ್ಯರು ,ಅನಸ್ತೇಷಿಯಾ ತಜ್ಞರನ್ನು  ನೇಮಿಸಲಾಗಿದೆ. ಜನಸಾಮಾನ್ಯರು  ಇರುವ ವ್ಯವಸ್ಥೆಯಲ್ಲೇ ಸದ್ಯದಿಂದಲೇ ಸೇವೆಯನ್ನು ಪಡೆದುಕೊಳ್ಳಬಹುದು. ಆಸ್ಪತ್ರೆ  ಊರಿನವರ ಆಸ್ತಿ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿಗಾಗಿ  ಸಮಿತಿಯನ್ನು ರಚಿಸಲಾಗುವುದು. ಸಮಿತಿಯಲ್ಲಿ ಸ್ಥಳೀಯ ನಗರಸಭೆ ಸದಸ್ಯರು,  ಹಾಗೂ ಹಿಂದಿನಿಂದ ಆಸ್ಪತ್ರೆಯ ಜತೆಗೆ ಒಡನಾಟದಲ್ಲಿದ್ದ ಹಿರಿಯ ಕುಂಞÂಮೋನು, ಕಲಾವತಿ ಹಾಗೂ ಮೋಂತಿ ಡಿಸೋಜ ಅವರು ಇರಲಿದ್ದಾರೆ. ಆರಂಭದಲ್ಲಿ ಸಿಬ್ಬಂದಿ ಕೊರತೆ ಎದುರಾದರೂ , ಅವರನ್ನು ನೇಮಿಸುವ ಪ್ರಕ್ರಿಯೆನ್ನು ನಡೆಸಲಾಗುವುದು. ಆಸ್ಪತ್ರೆಯಲ್ಲಿ ಹಿರಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯುರ್ವೇದ ಚಿಕಿತ್ಸೆಯೂ ಉಚಿತವಾಗಿ  ನೀಡಲಾಗುವುದು ಎಂದರು. 

ಉಳ್ಳಾಲದಾದ್ಯಂತ ಅಭಿವೃದ್ಧಿ ಕಾರ್ಯಗಳು : ಅಬ್ಬಕ್ಕ ವೃತ್ತದಿಂದ ಸೋಮೇಶ್ವರ ಆಗಿ ಕೋಟೆಕಾರು ಬೀರಿ  ಸಂಪರ್ಕಿಸುವ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರೀಟಿಕರಣಕ್ಕಾಗಿ 6.6 ಕೋಟಿ  ರೂ. ಅನುದಾನ ಬಿಡುಗಡೆಯಾಗಿದೆ. ಕೆಲಸ ಶೀಘ್ರದಲ್ಲೇ ಆರಂಭವಾಗಲಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ  ಅಬ್ಬಕ್ಕ ವೃತ್ತದವರೆಗೆ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು  ಸುಂದರೀಕರಣಗೊಳಿಸಲು ಮತ್ತೆ 9.5 ಕೋಟಿ ರೂ. ಬಿಡುಗಡೆ ಮಾಡಿ ಟೆಂಡರ್ ಕರೆಯಲಾಗಿದೆ. ಅಬ್ಬಕ್ಕ ವೃತ್ತದಿಂದ ಕೋಡಿವರೆಗೆ ಕನಿಷ್ಟ ಎರಡು ಬಸ್ಸುಗಳಿಗೆ ಹೋಗಲು 7 ಮೀ. ಅಗಲದ ರಸ್ತೆ ನಿರ್ಮಾಣಕ್ಕೆ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.  ಕುಡಿಯುವ ನೀರಿಗೆ 220 ಕೋಟಿ ರೂ. ಅನುದಾಣ ಬಿಡುಗಡೆಯಾಗಿದೆ. ಕೊಣಾಜೆಯ ಕಂಬಳಪದವಿನಲ್ಲಿ ವಾಟರ್ ಟ್ರೀಟ್‍ಮೆಂಟ್ ಪ್ಲಾಂಟ್ ರಚನೆ, ಈ ಮೂಲಕ ತುಂಬೆಯಿಂದ ನೇರ ನೀರು ಕ್ಷೇತ್ರಕ್ಕೆ ಬರುವಂತಹ ವ್ಯವಸ್ಥೆ ಹಾಗೂ  ಯುಜಿಡಿಗೆ 32 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.  ಧಾರ್ಮಿಕ ಕೇಂದ್ರಗಳಿಗೆ ಯಾತ್ರಿ ನಿವಾಸ, ಪ್ರವಾಸಿ ಕೇಂದ್ರಗಳ ನಿರ್ಮಾಣ, ಯುಜಿಡಿ, ಕುಡಿಯುವ ನೀರು ರಸ್ತೆ ಪ್ರದೇಶದ ಅಭಿವೃದ್ಧಿಯ ಸಂಕೇತ ಆಗಿರುವುದರಿಂದ ಹೆಚ್ಚಿನ ಒತ್ತು ನೀಡಲಾಗಿದೆ. ಉಳ್ಳಾಲವನ್ನು ಸ್ವಚ್ಛ ಹಾಗೂ ಆರೋಗ್ಯವಂತ ನಗರವನ್ನಾಗಿ ರೂಪಿಸಲು ಶೈಕ್ಷಣಿಕ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳ ಸಹಕಾರವನ್ನು ಪಡೆಯಲಾಗುವುದು. ಘನತ್ಯಾಜ್ಯದ  ಜನಜಾಗೃತಿ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. 

`ಯಾರೇ ಬಂದರೂ ಅನುದಾನ ತರುವ ಶಕ್ತಿ ನನ್ನಲ್ಲಿದೆ’ : ನೂತನ ಬಿಜೆಪಿ ಸರಕಾರ ಶಾಶ್ವತವಲ್ಲ. ಸಾಂವಿಧಾನಿಕವಾಗಿ ಬಹುಮತವನ್ನು ಸಾಬೀತುಪಡಿಸದೆ  ಸರಕಾರವನ್ನು ರಚಿಸಲಾಗಿದೆ. ಯಾವ ಹಂತದಲ್ಲಾದರೂ ಉರುಳುವುದು ಖಚಿತ.  ಹೊಸ ಸರಕಾರದಿಂದ ನನ್ನ ಕ್ಷೇತ್ರದ ಅಭಿವೃದ್ಧಿಯ ಅನುದಾನಗಳಿಗೆ ಕೊರತೆ ಎದುರಾದಲ್ಲಿ ಅದನ್ನು ತರುವ  ಶಕ್ತಿ ನನ್ನಲ್ಲಿದೆ ಅನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರನ್ ನಡೆಯನ್ನು ಶ್ಲಾಘಿಸಿದ ಮಾಜಿ ಸಚಿವ ಖಾದರ್,  ಸ್ವಾರ್ಥಕ್ಕಾಗಿ  ಕೆಲಸ ಮಾಡುವವರನ್ನು ಪಕ್ಷಾಂತರ ಕಾಯಿದೆ ಮೂಲಕ ಅನರ್ಹಗೊಳಿಸಿರುವುದು ಸ್ವಾಗತಾರ್ಹ.  ಎಲ್ಲಾ ಪಕ್ಷಾಂತರ ಶಾಸಕರಿಗೆ  ಕಾಯಿದೆ ಅನ್ವಯವಾಗುವಂತೆ ಸಮರ್ಪಕವಾಗಿ ಜಾರಿಯಾಗುವ ವಿಶ್ವಾಸವಿದೆ. ಅತೃಪ್ತ ಶಾಸಕರೆಲ್ಲರೂ  ಈಗ ಮುಂಬೈನಲ್ಲಿದ್ದಾರೆ, ಮುಂದೆ ಅನರ್ಹವನ್ನು ಪ್ರಶ್ನಿಸಿ  ಸುಪ್ರೀಂ  ಮೆಟ್ಟಿಲೇರುತ್ತಾರೆ. ಅವರು ಖಾಯಂ ಆಗಿ ಮುಂಬೈ ಟು ದೆಲ್ಲಿ ಸುತ್ತಾಡುತ್ತಲೇ  ಇರುವುದರಲ್ಲಿ ಸಂಶಯವಿಲ್ಲ.  ಈ ಮೂಲಕ ದೇಶಕ್ಕೆ ಉತ್ತಮ ಸಂದೇಶ ಹೋಗಬೇಕು. ಖಚಿತ 112 ಶಾಸಕರು ಇದ್ದಲ್ಲಿ ಮಾತ್ರ ಸರಕಾರ ರಚಿಸುವುದು ಸಂವಿಧಾನಾತ್ಮಕ ಎಂದರು. 

ಉಳ್ಳಾಲ ತೊಕ್ಕೊಟ್ಟು ವ್ಯಾಪ್ತಿಯಲ್ಲೂ ವ್ಯಾಪಕ ಡೆಂಗ್ಯು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ  ಎಲ್ಲರೂ ಕಾಯಿಲೆ ನಿರ್ಮೂಲನೆ ಸಹಕರಿಸಬೇಕಿದೆ. ಆಶಾ ಕಾರ್ಯಕರ್ತೆಯರು,  ಪಂಚಾಯಿತಿ ಸದಸ್ಯರು ಎಲ್ಲರೂ  ಜನಜಾಗೃತಿ  ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.  ಮೊಗವೀರಪಟ್ನ ತೀರದಲ್ಲಿ ಉಳ್ಳಾಲದ ತ್ಯಾಜ್ಯ ನೀರು ಹರಿಯುವುದರ ಕುರಿತು ಮಾತನಾಡಿದ ಶಾಸಕ ಖಾದರ್, ಸಮುದ್ರ ತೀರ ತಗ್ಗು ಪ್ರದೇಶವಾಗಿದೆ.  ಸಮುದ್ರ ತೀರದಲ್ಲೇ ಮನೆ ನಿರ್ಮಿಸಿರುವುದು ತಪ್ಪು. ಆದರೆ ಮಾನವೀಯತೆ ದೃಷ್ಟಿಯಿಂದ ಬಿಡಲಾಗಿದೆ.  ತ್ಯಾಜ್ಯ ನೀರು ಶೇಖರೆಯಾಗುವುದುನ್ನು ನಿಲ್ಲಿಸಲು ಅಸಾಧ್ಯ.  ಯುಜಿಡಿ ಬರುವವರೆಗೆ ಸಮಸ್ಯೆ  ಮುಂದುವರಿಯುತ್ತಲೇ ಇರುತ್ತದೆ ಎಂದರು. 

ಸುದ್ಧಿಗೋಷ್ಠಿಯಲ್ಲಿ ಮುಖಂಡರುಗಳಾದ ಈಶ್ವರ್ ಉಳ್ಳಾಲ್, ನಗರಸಭೆ ಮಾಜಿ ಅಧ್ಯಕ್ಷ ಹುಸೈನ್ ಕುಂಞಮೋನು ಮುಂತಾದವರು ಉಪಸ್ಥಿತರಿದ್ದರು. 

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕಿನ್ಯದಲ್ಲಿ ಮಾ 30ರಿಂದ ಎ.9ವರೆಗೆ ಕೂಟು ಝಿಯಾರತ್ ಕಾರ್ಯಕ್ರಮ

March 28, 2026

ರಾಮನವಮಿ ಉತ್ಸವ; ದಕ್ಷ ಯುವ ಬಳಗ ವತಿಯಿಂದ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

March 28, 2026

ತೊಕ್ಕೊಟ್ಟುವಿನಲ್ಲಿ ಹತ್ಯೆ ನಡೆಸಿ ಬೆಂಗಳೂರಿಗೆ ತೆರಳಿದ್ರಾ ಹಂತಕರು…?!

March 27, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಕಿನ್ಯದಲ್ಲಿ ಮಾ 30ರಿಂದ ಎ.9ವರೆಗೆ ಕೂಟು ಝಿಯಾರತ್ ಕಾರ್ಯಕ್ರಮ

By UllalaVaniMarch 28, 20260

ಉಳ್ಳಾಲ: ಕೇರಳ, ಕರ್ನಾಟಕ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಹಝ್ರತ್ ವಲಿಯುಲ್ಲಾಹಿ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ರಾಮನವಮಿ ಉತ್ಸವ; ದಕ್ಷ ಯುವ ಬಳಗ ವತಿಯಿಂದ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

March 28, 2026

ಹಿಟ್ ಅಂಡ್ ರನ್; ಪಾದಚಾರಿಗೆ ಗಂಭೀರ ಗಾಯ, ಕಾರು ವಶಕ್ಕೆ

March 28, 2026

ಮಣ್ಣು ತುಂಬಿದ ಕಬ್ಬಿಣದ ಬಕೆಟ್ ಬಿದ್ದು, ಕಾರ್ಮಿಕ ಮೃತ್ಯು..!

March 28, 2026
1 2 3 … 1,850 Next
Automatic YouTube Gallery

|KUTTARU || 30 ಅಡಿ ಎತ್ತರದಿಂದ ಕಾರ್ಮಿಕರೋರ್ವರ ತಲೆ ಮೇಲೆ ಬಿದ್ದ ಮಣ್ಣು ತುಂಬಿದ ಕಬ್ಬಿಣದ ಬಕೆಟ್!

ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ;ಮೂವತ್ತು ಅಡಿ ಎತ್ತರದಿಂದ ಬಿದ್ದ ಮಣ್ಣು ತುಂಬಿದ ಕಬ್ಬಿಣದ ಬಕೆಟ್!

ಕುತ್ತಾರು ಸಲಾತ್ ನಗರದಲ್ಲಿ ಘಟನೆ ; ಶಿವಮೊಗ್ಗ ಜಿಲ್ಲೆಯ ಶಿವಕುಮಾರ ಜಿ.ಕೆ (30)ಮೃ$*ತ್ಯು

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|KUTTARU || 30 ಅಡಿ ಎತ್ತರದಿಂದ ಕಾರ್ಮಿಕರೋರ್ವರ ತಲೆ ಮೇಲೆ ಬಿದ್ದ ಮಣ್ಣು ತುಂಬಿದ ಕಬ್ಬಿಣದ ಬಕೆಟ್!
Now Playing
|KUTTARU || 30 ಅಡಿ ಎತ್ತರದಿಂದ ಕಾರ್ಮಿಕರೋರ್ವರ ತಲೆ ಮೇಲೆ ಬಿದ್ದ ಮಣ್ಣು ತುಂಬಿದ ಕಬ್ಬಿಣದ ಬಕೆಟ್!
ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ;ಮೂವತ್ತು ಅಡಿ ಎತ್ತರದಿಂದ ಬಿದ್ದ ಮಣ್ಣು ...
ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ;ಮೂವತ್ತು ಅಡಿ ಎತ್ತರದಿಂದ ಬಿದ್ದ ಮಣ್ಣು ತುಂಬಿದ ಕಬ್ಬಿಣದ ಬಕೆಟ್!

ಕುತ್ತಾರು ಸಲಾತ್ ನಗರದಲ್ಲಿ ಘಟನೆ ; ಶಿವಮೊಗ್ಗ ಜಿಲ್ಲೆಯ ಶಿವಕುಮಾರ ಜಿ.ಕೆ (30)ಮೃ$*ತ್ಯು

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅಸೈಗೋಳಿ ಜಂಕ್ಷನ್‌ನಲ್ಲಿ ರಸ್ತೆ ಹಂಪ್ಸ್ ಅಳವಡಿಕೆ..!
Now Playing
ಅಸೈಗೋಳಿ ಜಂಕ್ಷನ್‌ನಲ್ಲಿ ರಸ್ತೆ ಹಂಪ್ಸ್ ಅಳವಡಿಕೆ..!
ಅಸೈಗೋಳಿ ಪ್ರತಿಭಟನೆ; ಪ್ರತಿಭಟನಾಕಾರರ ಒಂದು ಬೇಡಿಕೆ ಈಡೇರಿಕೆ ಉಳ್ಳಾಲವಾಣಿ ಸುದ್ದಿ ...
ಅಸೈಗೋಳಿ ಪ್ರತಿಭಟನೆ; ಪ್ರತಿಭಟನಾಕಾರರ ಒಂದು ಬೇಡಿಕೆ ಈಡೇರಿಕೆ

ಉಳ್ಳಾಲವಾಣಿ ಸುದ್ದಿ ಬಿತ್ತರಿಸಿದ 3ದಿನಗಳೊಳಗೆ ರಸ್ತೆ ಹಂಪ್ಸ್ ಅಳವಡಿಕೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d