Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಅರ್ಥವಿಲ್ಲದ ಮಾತಿಗೆ ಮೌನವೇ ಉತ್ತರವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್

UllalaVaniBy UllalaVaniApril 11, 2019No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಮುಂಬಯಿ: ಸಂಘಸಂಸ್ಥೆಗಳಲ್ಲಿ ವೈಮನಸ್ಸು ಸ್ವಾಭಾವಿಕವಾದುದು. ಆದರೆ ಗೌಪ್ಯತೆ ಪದಾಧಿಕಾರಿಗಳೇ ಬಹಿರಂಗ ಪಡಿಸುವುದರಿಂದ ವ್ಯಕ್ತಿಯವಲ್ಲ ಸಂಸ್ಥೆಯ ಹಿತಕ್ಕೆ ಮಾರಕವಾಗಿರುತ್ತದೆ. ನಾವು ಸದಾ ತಜಾ ಅಲೋಚನೆ ಮಾಡಿ ಮುನ್ನಡೆಯಬೇಕು. ಅದನ್ನು ತಮ್ಮೊಳಗೆ ಪರಿಹಾರ ಮಾಡಿಕೊಳ್ಳಬೇಕು. ಸಂಸ್ಥೆಯೊಳಗಿನ ವೈಮನಸ್ಸನ್ನು ಬುದ್ಧಿಜೀವಿಗಳು ಹೊರಗೆ ತಿಳಿಸಿದಾಗ ಮೂರನೇಯವರೇ ಲಾಭದಾಯಕರಸ್ಥರು ಆಗುವರು. ನಿನ್ನೆ ತನಕ ಬೇವು ತಿಂದು ಬಂದ ನಾವುಗಳು ಇವತ್ತಿನಿಂದ ಬೆಲ್ಲವನ್ನು ಸವಿದು ಹೊಸ ಬದುಕಿನತ್ತ ಸಾಗಬೇಕಾಗಿದೆ.

ಸ್ವಾರ್ಥಿಗಳ ಅರ್ಥವಿಲ್ಲದ ಮಾತಿಗೆ ಮೌನವೇ ಉತ್ತರವಾಗಲಿ. ವಾಟ್ಸಾಪ್, ಫೇಸ್‍ಬುಕ್‍ಗಳನ್ನು ಆಯುಧವಾಗಿಸಿ ಬೇಕಾಬಿಟ್ಟಿ ಪ್ರಕಟನೆಗಳನ್ನು ಭಿತ್ತರಿಸುವುದೇ ದೋಡ್ಡ ಅಪರಾಧ ಮತ್ತು ಇದೊಂದು ಅಡ್ಡದಾರಿಯಾಗಿದೆ. ಇದು ಯಾರಿಗೂ ಶೋಭದಾಯಕ ಮಾರ್ಗವಲ್ಲ. ಒಳ್ಳೆ ಮನಸ್ಸಿನಿಂದ ಒಳ್ಳೇ ಕಾರ್ಯಕ್ಕೆ ಒಂದು ನಿರ್ಧಿಷ್ಟ ಉದ್ದೇಶವಿಟ್ಟುಕೊಂಡು ಬಂದವರಾದ ಪತ್ರಕರ್ತರು ಸಮಾಧಾನ ಪ್ರಧಾನರಾಗಬೇಕು. ತಾವು ಸ್ವಇಪ್ಛೆಯಿಂದ ಪತ್ರಕರ್ತ ವೃತ್ತಿ ಆಯ್ಕೆ ಮಾಡಿದವರು. ದೇಶದ ಮನೋಭಾವವನ್ನು ಸೃಷ್ಠಿಸುವ ಹೊಣೆಹೊತ್ತವರು. ತಾವು ಅಪ್ಪಿತಪ್ಪಿ ಬರೆದರೆ ನೀವು ದೇಶದ ಮನಸ್ಥಿತಿ (ಮೂಡ್) ಹಾಳು ಮಾಡಿದಂತೆ. ಆದುದರಿಂದ ಪತ್ರಕರ್ತರು ರಾಷ್ಟ್ರದ ಮನಸ್ಥಿತಿ ಸೃಷ್ಠಿಸುವ ಮೇಧಾವಿಗಳಾಗಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್, ಮುಂಬಯಿ ಉಚ್ಛನ್ಯಾಯಲಯದ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್ ತಿಳಿಸಿದರು.

ಕಳೆದ ಶನಿವಾರ ಪೂರ್ವಾಹ್ನ ನಗರದ ಬಾಂದ್ರಾ ಪೂರ್ವದ ಖೇರ್‍ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2019-2021ರ ಸಾಲಿನ ಪದಾಧಿಕಾರಿಗಳ ಆಯ್ಕೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ನ್ಯಾ| ಸಾಲ್ಯಾನ್ ಮಾತನಾಡಿದರು.ಪತ್ರಕರ್ತರ ಸಂಘದ ಸಲಹಾ ಸಮಿತಿ ಸದಸ್ಯರಾದ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಗ್ರೇಗೋರಿ ಡಿಅಲ್ಮೇಡಾ, ಪಂಡಿತ್ ನವೀನ್‍ಚಂದ್ರ ಆರ್.ಸನೀಲ್, ಕಡಂದಲೆ ಸುರೇಶ್ ಎಸ್.ಭಂಡಾರಿ, ಸುರೇಂದ್ರ ಎ.ಪೂಜಾರಿ, ಸುಧಾಕರ್ ಉಚ್ಚಿಲ್ ವೇದಿಕೆಯಲ್ಲಿ ಆಸೀನರಾಗಿದ್ದು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭಾರೈಸಿದರು.

ನ್ಯಾ| ಮೋಹಿದ್ಧೀನ್ ಮುಂಡ್ಕೂರು ಉಪಸ್ಥಿತ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಪ್ರತಿಜ್ಞೆವಿಧಿ ಬೋಧಿಸಿದರು ಹಾಗೂ ಪತ್ರಕರ್ತ ಸದಸ್ಯರ ಆರೋಗ್ಯನಿಧಿಗಾಗಿ 50,000/- ರೂಪಾಯಿ ದೇಣಿಗೆ ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ನ್ಯಾ| ಮೋಹಿದ್ಧೀನ್ ಮಾತನಾಡಿ ಕ.ಪ.ಸ.ಮ ಸ್ಥಾಪಣೆಯ ಆರಂಭದಲ್ಲೇ ನಾನು ಈ ಸಂಸ್ಥೆಯೊಂದಿಗೆ ಇದ್ದು ಸಲಹಿದವನು. ಯಾವುದೇ ಸಂಘ ಸಂಸ್ಥೆಗಳಲ್ಲೂ ಅಹಿತಕರ ಘಟನೆಗಳು ನಡೆಯುವುದು ಸ್ವಾಭಾವಿಕ. ಆದರೆ ವಿಷಯ ಮೈಮೇಲೆ ಎಳೆದುಕೊಂಡು ವೈರಾಗ್ಯವನ್ನೇ ಬೆಳೆಸಿಕೊಂಡರೆ ವ್ಯಕ್ತಿಗೂ ಸಂಸ್ಥೆಗೂ ಅಪತ್ತು ಸ್ವಾಭಾವಿಕ. ವೈಮನಸ್ಸು ಬೆಳೆಸಿ ಮುನ್ನಡೆದರೆ ನಿಜಾರ್ಥದ ನಿಸ್ವಾರ್ಥ ಸಮಾಜ ಸೇವೆ ಸಾಧ್ಯವಾಗದು. ಅದೂ ಪತ್ರಕರ್ತರೆಂದರೆ ¨ರೇ ವರದಿ ಮಾಡಿ ಪತ್ರಿಕೆಯಲ್ಲಿ ಪ್ರಕಟಿಸುವುದು ಅಲ್ಲ. ವಿಷಯದ ಮೂಲವನ್ನು ಅಧ್ಯಯನ ಮಾಡಿ ನ್ಯಾಯ ಒದಗಿಸಿ ಇತರರಿಗೆ ಮಾದರಿ ಅಂತಣಿಸಬೇಕು. ಅವಾಗಲೇ ಪತ್ರಕರ್ತನ ಕಾಯಕ ಸಮಾಧಾನಕ ಮತ್ತು ಫಲದಾಯಕ ಆಗುವುದು ಎಂದರು.

ಯಾವೊತ್ತೂ ಬದಲಾವಣೆಯಿಂದ ಒಳ್ಳೇತನ ಸಾಧ್ಯವಾಗುತ್ತಿದ್ದು, ನಿನ್ನೆ ಇದ್ದವ ಇಂದಿಲ್ಲ ಇಂದು ಇದ್ದವ ನಾಳೆ ಇರಲಾರ ಅನ್ನುವುದು ಲೋಕದ ರೂಢಿ. ಆದ್ದರಿಂದ ಯಾವುದೇ ಸಂಸ್ಥೆಗಳಿಗೂ ಹೊಸಹೊಸ ಮುಖಗಳು ಬರಬೇಕು. ನೂತನ ಚೈತನ್ಯ ಹುಟ್ಟಬೇಕು. ಯುಗಾದಿ ಅದನ್ನೇ ಸಾರುವ ಹಬ್ಬವಾಗಿದೆ. ಯುಗ ಕಳೆದು ಮತ್ತೆ ಆದಿ ಎನ್ನುವಂತೆ ಈ ಸಂಸ್ಥೆಯೂ ಹೊಸ ದೆಶೆಯತ್ತ ಹೆಜ್ಜೆಯನ್ನಿರಿಸುತ್ತಿದೆ. ಇದಕ್ಕೆ ಪ್ರೋತ್ಸಾಹಿಸುವುದು ಪ್ರತೀಂಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಪತ್ರಕರ್ತರೆಂದರೆ ಎಲ್ಲಕ್ಕಿಂತ ಮೊದಲಾಗಿ ಸಮಾಜ ಸುಧಾರಕರು. ಸಮಾಜದ ಅಂಕುಡೊಂಕುಗಳನ್ನು ಹೋಗಲಾಡಿಸಿ ಸಮಾಜದ ಬೆಳವಣಿಗೆಗೆ ಸ್ಪಂದಿಸುವನೋ ಅವನೇ ನಿಜಾರ್ಥದ ಪತ್ರಕರ್ತ. ಹಿಂಸಾತ್ಮಕವಾದ ಎಲ್ಲಾ ಶಕ್ತಿಗಳನ್ನು ಮೀರಿನಿಂತ ಪೆನ್ನು ಪ್ರಪಂಚದ ಅಹಿಂಸಾತ್ಮಕವಾದಂತೆಹ ದೊಡ್ದ ಆಯುಧವಾಗಿದೆ. ಪೆನ್ನು ಹಿಡಿದ ಪತ್ರಕರ್ತರು ನಿಷ್ಠುರವಾದಿತ್ವ ಸಾಧಿಸಬೇಕು ಎಂದು ಕಡಂದಲೆ ಸುರೇಶ್ ತಿಳಿಸಿದರು.

ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದು ಮತದಾನಕ್ಕೆ ಅಡ್ಡಿ ಪಡಿಸುವುದೇ ಘೋರ ಅಪರಾಧ. ಅದರಲ್ಲೂ ಅಭ್ಯರ್ಥಿಗಳನ್ನೇ ತಡೆದು ನಿಲ್ಲಿಸುವುದು ಮಹಾಪಾಪ. ಅಲ್ಲದೆ ವಿಜೇತ ಅಭ್ಯರ್ಥಿಗಳನ್ನು ರಾಜೀನಾಮೆ ನೀಡಿಸಲು ಒತ್ತಡ ಹೇರಿ ಸಂಸ್ಥೆಯ ಜವಾಬ್ದಾರಿಯಿಂದ ತಡೆ ಹಿಡಿಯುವುದೆಂದರೆ ದೇಶದ್ರೋಹವೇ ಸರಿ. ಸ್ವಾರ್ಥಿಗಳ ವಿರೋಧತ್ವದ ವಿಷವನ್ನು ನಾನು ಅಮೃತವಾಗಿಸಿರುವ ಕಾರಣ ಈ ಸಂಸ್ಥೆಯ ಚುಕ್ಕಾಣಿ ಹಿಡಿಯುವಂತಾಗಿದೆ. ಸತ್ಯವನ್ನು ಒಪ್ಪದೇ ಸತ್ಯವಂತರನ್ನೇ ಸುಳ್ಳನಾಗಿಸುತ್ತಾ ಸಂಸ್ಥೆಯ ಮಾನವನ್ನೇ ಹರಾಜು ಹಾಕುವವರಿಂದ ಅಪೇಕ್ಷಿಸುವುದು ಆದರೂ ಏನು.? ಪತ್ರಕರ್ತರು ಪತ್ರಿಕಾ ಸ್ವಾತಂತ್ರ್ಯವನ್ನು ಸಮಾಜದ ಹಿತಕ್ಕಾಗಿ ಬಳಸಿ ಕೊಳ್ಳಬೇಕೇ ಹೊರತು ಸ್ವಾರ್ಥಕ್ಕಾಗಿಯಲ್ಲ. ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಅನಾಚಾರ ಎಸಗುವರರನ್ನು ನಾನೂ ಎಂದಿಗೂ ಸಹಿಸಿದವನಲ್ಲ ಆದುದರಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ನಿರತನಾದರೂ ಸಮಾಜವೇ ನನ್ನ ಮತ್ತು ಕಪಸಮದ ಸೇವೆ ಗುರುತಿಸಿ ಕೊಂಡಿದೆ.ಇನ್ನೂ ನಾವೆಲ್ಲರೂ ಒಗ್ಗಟ್ಟಿನಿಂದ ಸಂಸ್ಥೆಯನ್ನು ಮುನ್ನಡೆಸೋಣ ಎಂದರು.

ಪತ್ರಕರ್ತರ ಸಂಘದ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ಅಶೋಕ್ ಎಸ್.ಸುವರ್ಣ, ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ, ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ| ದಿನೇಶ್ ಶೆಟ್ಟಿ ರೆಂಜಾಳ, ನಾಗರಾಜ್ ಕೆ.ದೇವಾಡಿಗ, ಅನಿತಾ ಪಿ.ಪೂಜಾರಿ ತಾಕೋಡೆ ಪ್ರೀತಂ ಎನ್. ದೇವಾಡಿಗ, ಜಯಂತ್ ಕೆ.ಸುವರ್ಣ, ವಿಶೇಷ ಆಮಂತ್ರಿತ ಸದಸ್ಯರಾದ ಸಾ.ದಯಾ (ದಯಾನಂದ್ ಸಾಲ್ಯಾನ್), ಗೋಪಾಲ್ ತ್ರಾಸಿ, ಕರುಣಾಕರ್ ವಿ.ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಸಲಹಾಗಾರರಾಗಿದ್ದು ಮುಖ್ಯ ಚುನಾವಣಾಧಿಕಾರಿ ನ್ಯಾ| ಪ್ರಕಾಶ್ ಎಲ್.ಶೆಟ್ಟಿ ಹಾಗೂ ಚಾರ್ಟರ್ಡ್ ಎಕೌಂಟೆಂಟ್ ಆಗಿದ್ದು ಅನುಪಮ ಸೇವೆಗೈಯುತ್ತಿರುವ ಸಿಎ| ಐ.ಆರ್ ಶೆಟ್ಟಿ ಅವರ ಸೇವೆ ಸಂಘವು ಸ್ಮರಿಸಿತು. ವಿಶೇಷವಾಗಿ ಉಪಸ್ಥಿತ ಸದಾನಂದ ಸಾಫಲ್ಯ (ರಾಜಯೋಗ್) ಇವರಿಗೆ ನ್ಯಾ| ರೋಹಿಣಿ ಸಾಲ್ಯಾನ್ ಪುಷ್ಫಗುಪ್ಚ ನೀಡಿ ಗೌರವಿಸಿದರು.

ಗತ ಸಾಲಿನಲ್ಲಿ ಅಗಲಿದ ಎಲ್ಲಾ ಹಿರಿಕಿರಿಯ ಪತ್ರಕರ್ತರು, ಹಾಗೂ ರಾಷ್ಟ್ರದ ಯೋಧರನ್ನು ಸಭೆಯ ಆದಿಯಲ್ಲಿ ಸ್ಮರಿಸಿ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪದಾಧಿಕಾರಿಗಳು ಸಂಘದ ಯಶಸ್ಸಿಗೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ವಿಶೇಷವಾಗಿ ಸಹಕರಿಸಿದ ಸರ್ವ ಗಣ್ಯರನ್ನು, ಎಲ್ಲಾ ಮತದಾರ ಸದಸ್ಯರನ್ನು ಸ್ಮರಿಸಿದರು. ಅಶೋಕ್ ಎಸ್.ಸುವರ್ಣ ಸ್ವಾಗತಿಸಿ ಸಭಾ ಕಲಾಪ ನಡೆಸಿದರು. ಡಾ| ಶಿವ ಮೂಡಿಗೆರೆ ದನ್ಯವಾದಗೈದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜನಸಂಘದ ಹಿರಿಯ ಕಾರ್ಯಕರ್ತ ವಿಠಲ್ ಕೊಟ್ಟಾರಿ ನಿಧನ..!!

June 12, 2026

ಅರ್ಧಕ್ಕೆ ನಿಂತಿದ್ದ 11ನೇ ವಾರ್ಡಿನ ಕಾಂಕ್ರೀಟಿಕರಣ ಪೂರ್ಣ; ಛಲಬಿಡದ ಕೌನ್ಸಿಲರ್ ಹರೀಶ್‌ರಾವ್ ಮಡ್ಯಾರ್

June 11, 2026

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಅಜ್ಜಿನಡ್ಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ

June 11, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
BANTWALA

ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಬಾಲಕೃಷ್ಣ ಗಟ್ಟಿ ನಿಧನ

By UllalaVaniJune 12, 20260

ಮುಂಬಯಿ (ಬಂಟ್ವಾಳ), ಜೂ.12: ಕರ್ನಾಟಕ ಕರಾವಳಿಯ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಬಾಲಕೃಷ್ಣ ಗಟ್ಟಿ (83) ಅವರು…

29ನೇ ವರ್ಷದ ಕುಂಪಲಾಷ್ಟಮಿ ಉತ್ಸವಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

June 12, 2026

ಕುಂಪಲ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

June 12, 2026

ಹನುಮಾನ್ ನಗರ ಕುಂಪಲ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಅಭಿನಂದನೆ

June 12, 2026
1 2 3 … 1,964 Next
Automatic YouTube Gallery

ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"

"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ-
"ತೆರೆಯ ಮೇಲೆ ಭಯಂಕರ ಖಳನಾಯಕ!


ನಿಜ ಜೀವನದಲ್ಲಿ ಹೇಗಿದ್ದಾರೆ ರಾಮ್‌ಪವನ್?| Exclusive Interview"


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"
Now Playing
ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"
"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ- "ತೆರೆಯ ಮೇಲೆ ಭಯಂಕರ ಖಳನಾಯಕ! ...
"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ-
"ತೆರೆಯ ಮೇಲೆ ಭಯಂಕರ ಖಳನಾಯಕ!


ನಿಜ ಜೀವನದಲ್ಲಿ ಹೇಗಿದ್ದಾರೆ ರಾಮ್‌ಪವನ್?| Exclusive Interview"


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪ್ರಧಾನಿ ಮೋದಿ ಆಡಳಿತದ 12 ವರ್ಷ; ಉಳ್ಳಾಲದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ
Now Playing
ಪ್ರಧಾನಿ ಮೋದಿ ಆಡಳಿತದ 12 ವರ್ಷ; ಉಳ್ಳಾಲದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version