Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಕೊಣಾಜೆ

ಬದುಕಿನಲ್ಲಿ ಬಹುಮುಖ ಆಯ್ಕೆ ರೂಢಿಸುವುದು ಅಗತ್ಯ: ಪ್ರಕಾಶ್ ಬಾರೆ

UllalaVaniBy UllalaVaniApril 10, 2019No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೊಣಾಜೆ : ಬದುಕಿನಲ್ಲಿ ಬಹುಮುಖ ಆಯ್ಕೆಗಳನ್ನು ನಾವು ರೂಢಿಸಿಕೊಳ್ಳಬೇಕು. ಜೀವನದ ಪ್ರತಿ 10-15 ವರ್ಷಗಳಿಗೊಮ್ಮೆ ನಮ್ಮನ್ನು ನಾವು ಮರು ಅನ್ವೇಷಿಸಬೇಕು. ವೃತ್ತಿ ಜೊತೆ ಜೊತೆಗೆ ನಟನೆಯಂಥಹ ಆಸಕ್ತಿಯ ವಿಚಾರಗಳಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಮಲಯಾಳಂ ಮತ್ತು ಮರಾಠಿ ಚಿತ್ರರಂಗದ ಜನಪ್ರಿಯ ನಿರ್ದೇಶಕ ಪ್ರಕಾಶ್ ಬಾರೆ ಹೇಳಿದ್ದಾರೆ.

ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಮಂಗಳವಾರ ಕೊಣಾಜೆಯ ಮಂಗಳೂರು ವಿ.ವಿ. ಆವರಣದ ಮಂಗಳಾ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಸಿನಿಮಾ ಉತ್ಸವ `ರಿಪ್ಲೆಕ್ಷನ್ 2019′ ಉದ್ಘಾಟಿಸಿ ಅವರು ಮಾತನಾಡಿದರು. ಇತರ ರಂಗಗಳ ಹಾಗೆ ಸಿನಿಮಾ ರಂಗದಲ್ಲೂ ನ್ಯಾಸಿಸಂ ಪ್ರವೃತ್ತಿ ಇದೆ. ಯಾವುದೇ ಕಲಾ ಪ್ರಕಾರ , ಮನರಂಜನೆಯನ್ನು ಯಾರೋ ಬಂದು ನಮ್ಮ ಮೇಲೆ ಹೇರುವ ಹಾಗಿರಬಾರದು. ನಮ್ಮ ಸ್ವಾತಂತ್ರ್ಯದ, ಆಯ್ಕೆಯ ಸಿನಿಮಾಗಳನ್ನು ನೋಡುವ ಅವಕಾಶ ಇರಬೇಕು. ಸಿನಿಮಾ ಉತ್ಸವಗಳಲ್ಲಿ ಈ ಅವಕಾಶ ದೊರಕುತ್ತದೆ. ಅಂತರ್ಜಾಲ ತಾಣಗಳು ನಮಗೆ ಇಂತಹ ಮುಕ್ತ ಅವಕಾಶ ಒದಗಿಸಿಕೊಡುತ್ತಿವೆ ಎಂದು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ.ಯ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಕೆ. ಮಾತನಾಡಿ, ವಾಣಿಜ್ಯ ಚಲನಚಿತ್ರಗಳು ಏಕತಾನತೆಯನ್ನು ಉತ್ತೇಜಿಸುತ್ತಿವೆ. ಇಂತಹ ಚಲನಚಿತ್ರೋತ್ಸವಗಳು ಏಕತಾನತೆಯ ಪ್ರಯೋಗಗಳಿಗೆ ಸವಾಲು ಹಾಕಬೇಕು. ಸಿನಿಮಾ ಮಾತ್ರವಲ್ಲ, ಎಲ್ಲಾ ರಂಗಗಳಲ್ಲೂ ಬದಲಾವಣೆಗಳನ್ನು ತರಬೇಕಾದರೆ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಿನಿಮಾ ನಿರ್ದೇಶಕ ಅಭಯಸಿಂಹ ಮುಖ್ಯ ಅತಿಥಿಯಾಗಿದ್ದರು. ಉತ್ಸವದ ವಿದ್ಯಾರ್ಥಿ ಸಂಚಾಲಕ ಸಂದೀಪ್ ಕೆ. ಹಾಜರಿದ್ದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಸ್ವಾಗತಿಸಿದರು. ಅತಿಥಿ ಉಪನ್ಯಾಸಕ ಶಶಿಧರ ಮಂಚಿ ವಂದಿಸಿದರು. ವಿದ್ಯಾರ್ಥಿ ಚರಣ್ ನಿರೂಪಿಸಿದರು. ಹರ್ಷಿತ್ ಪಡ್ರೆ ಆಶಯ ನುಡಿಗಳನ್ನಾಡಿದರು.
ಉದ್ಘಾಟನೆ ಬಳಿಕ ಅಭಯಸಿಂಹ ನಿರ್ದೇಶನದ ಪಡ್ಡಾಯಿ ಚಿತ್ರ ಪ್ರದರ್ಶನ, ಚಿತ್ರತಂಡದೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಚಿತ್ರೋತ್ಸವ ಪ್ರಯುಕ್ತ ಶುದ್ಧಿ, ಅಮ್ಮಚ್ಚಿಯೆಂಬ ನೆನಪು, ಹೆಬ್ಬೆಟ್ ರಾಮಕ್ಕ, ನಾತಿಚರಾಮಿ ಚಿತ್ರಗಳ ಪ್ರದರ್ಶನ ವ್ಯವಸ್ಥೆಗೊಳಿಸಲಾಗಿದೆ. ಬುಧವಾರವೂ ಚಿತ್ರೋತ್ಸವ ಮುಂದುವರಿಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.

ಸಿಂಕ್ ಸೌಂಡ್ ತಂತ್ರಬಳಸಿದ ಮೊದಲ ತುಳು ಚಿತ್ರ ಪಡ್ಡಾಯಿ

ಸಿನಿಮಾದ ಚಿತ್ರೀಕರಣವಾಗುವಾಗಲೇ ಬಳಸಿದ ಧ್ವನಿ ಆಧರಿಸಿದ ಸಿಂಕ್ ಸೌಂಡ್ ತಂತ್ರಜ್ಞಾನ ಅಳವಡಿಸಿದ ಮೊದಲ ತುಳು ಚಿತ್ರ ಪಡ್ಡಾಯಿ ಎಂದು ಚಿತ್ರದ ನಿರ್ದೇಶಕ ಅಭಯಸಿಂಹ ತಿಳಿಸಿದ್ದಾರೆ. ಮಂಗಳೂರು ಮಂಗಳೂರು ವಿ.ವಿ.ಯಲ್ಲಿ ರಾಜ್ಯಮಟ್ಟದ ತುಳುಚಿತ್ರೋತ್ಸವದಲ್ಲಿ ಪಡ್ಡಾಯಿ ಚಿತ್ರ ಪ್ರದರ್ಶನದ ಬಳಿಕ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ಈ ತಂತ್ರಜ್ಞಾನದಲ್ಲಿ ವಿಭಿನ್ನ ಧ್ವನಿ ಫಲಿತಾಂಶ ಬರುತ್ತದೆ. ಎಲ್ಲರೂ ರಂಗಭೂಮಿ ಕಲಾವಿದರೇ ಸಿನಿಮಾದಲ್ಲಿ ಪಾಲ್ಗೊಂಡಿರುವುದು ವಿಶೇಷ. ಮನುಷ್ಯನ ಮನಸ್ಸಿನಲ್ಲಿರುವ ಆಶಯವೇ ದೈವದ ನುಡಿ ರೂಪದಲ್ಲಿ ವ್ಯಕ್ತಿಗೊಳ್ಳುವ ತತ್ವ, ಬಡ ಮಹಿಳೆಯ ಶ್ರೀಮಂತಿಕೆಯ ಮೋಹ, ಇಲ್ಲಿ ರೂಪಕವಾಗಿ ಬಳಸಿದ ಪರಿಮಳದ ಕಲ್ಪನೆ, ಶೃಂಗಾರ ದೃಶ್ಯಗಳು ಇವೆಲ್ಲ ಕಥೆಗೆ ಪೂರಕವಾಗಿಯೇ ನಿರೂಪಿತವಾಗಿವೆ ಎಂದು ಅವರು ಪ್ರಶೆಗಳಿಗೆ ಉತ್ತರಿಸುತ್ತಾ ತಿಳಿಸಿದರು.

ನಟ ಚಂದ್ರಹಾಸ ಉಳ್ಳಾಲ ಮಾತನಾಡಿ, ಇಡೀ ಚಿತ್ರದಲ್ಲಿ ಬಳಸಿದ ಕಡಲು ಚಿತ್ರಕ್ಕೆ ದೊಡ್ಡ ಕ್ಯಾನ್ವಾಸ್ ಕಲ್ಪಿಸಿದೆ. ಸಿನಿಮಾಗೋಸ್ಕರ ಆಳ ಸಮುದ್ರಕ್ಕೆ ತೆರಳಿ ಆಳ ಸಮುದ್ರ ಮೀನುಗಾರಿಕೆ ದೃಶ್ಯಗಳನ್ನು ಚಿತ್ರೀಕರಿಸಲಾಯಿತು ಎಂದು ವಿವರಿಸಿದರು. ನಿರ್ಮಾಪಕ ನಿತ್ಯಾನಂದ ಪೈ ಹಾಗೂ ಸಹನಟರು ಹಾಜರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜೂನ್ 14ರಂದು ಕಂಬಳಪದವಿನಲ್ಲಿ ಸುಹಾ ಫರ್ನಿಚರ್ಸ್ ಶುಭಾರಂಭ

June 12, 2026

ಜನಸಂಘದ ಹಿರಿಯ ಕಾರ್ಯಕರ್ತ ವಿಠಲ್ ಕೊಟ್ಟಾರಿ ನಿಧನ..!!

June 12, 2026

ಅರ್ಧಕ್ಕೆ ನಿಂತಿದ್ದ 11ನೇ ವಾರ್ಡಿನ ಕಾಂಕ್ರೀಟಿಕರಣ ಪೂರ್ಣ; ಛಲಬಿಡದ ಕೌನ್ಸಿಲರ್ ಹರೀಶ್‌ರಾವ್ ಮಡ್ಯಾರ್

June 11, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಜೂನ್ 14ರಂದು ಬೆಂಗಳೂರಿನಲ್ಲಿ ಸ್ಟೂಡೆಂಟ್ಸ್ ಫಾರ್ಮರ್ಸ್ ವಾಕಥಾನ್

By UllalaVaniJune 12, 20260

ಬೆಂಗಳೂರು, ಜೂ.12: ಪ್ರಕೃತಿ ಸಂರಕ್ಷಣೆ, ಯುವಜನತೆ ಹಾಗೂ ದೇಶದ ಆರ್ಥಿಕತೆಯಲ್ಲಿ ಕೃಷಿಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಸ್ಟೂಡೆಂಟ್ಸ್…

ಜೂನ್ 14ರಂದು ಕಂಬಳಪದವಿನಲ್ಲಿ ಸುಹಾ ಫರ್ನಿಚರ್ಸ್ ಶುಭಾರಂಭ

June 12, 2026

ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಬಾಲಕೃಷ್ಣ ಗಟ್ಟಿ ನಿಧನ

June 12, 2026

29ನೇ ವರ್ಷದ ಕುಂಪಲಾಷ್ಟಮಿ ಉತ್ಸವಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

June 12, 2026
1 2 3 … 1,964 Next
Automatic YouTube Gallery

ಜಾತಿ-ಧರ್ಮ ಮುಖ್ಯವಲ್ಲ, ಸಚಿವ ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ

ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಭವ್ಯ ಸಿರಿಸಿಂಗಾರ ನೇಮೋತ್ಸವ; ಯು.ಟಿ. ಖಾದರ್ ಪ್ರಯತ್ನದಿಂದ ದೈವಸ್ಥಾನಕ್ಕೆ ಜಾಗ..???!!

ಜಾತಿ-ಧರ್ಮ ಮುಖ್ಯವಲ್ಲ, ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಜಾತಿ-ಧರ್ಮ ಮುಖ್ಯವಲ್ಲ, ಸಚಿವ ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ
Now Playing
ಜಾತಿ-ಧರ್ಮ ಮುಖ್ಯವಲ್ಲ, ಸಚಿವ ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ
ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಭವ್ಯ ಸಿರಿಸಿಂಗಾರ ನೇಮೋತ್ಸವ; ...
ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಭವ್ಯ ಸಿರಿಸಿಂಗಾರ ನೇಮೋತ್ಸವ; ಯು.ಟಿ. ಖಾದರ್ ಪ್ರಯತ್ನದಿಂದ ದೈವಸ್ಥಾನಕ್ಕೆ ಜಾಗ..???!!

ಜಾತಿ-ಧರ್ಮ ಮುಖ್ಯವಲ್ಲ, ಯು.ಟಿ.ಖಾದರ್‌ಗೆ ಬಬ್ಬುಸ್ವಾಮಿ ಅಭಯ ನುಡಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"
Now Playing
ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"
"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ- "ತೆರೆಯ ಮೇಲೆ ಭಯಂಕರ ಖಳನಾಯಕ! ...
"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ-
"ತೆರೆಯ ಮೇಲೆ ಭಯಂಕರ ಖಳನಾಯಕ!


ನಿಜ ಜೀವನದಲ್ಲಿ ಹೇಗಿದ್ದಾರೆ ರಾಮ್‌ಪವನ್?| Exclusive Interview"


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version