UN NETWORKS
ಉಳ್ಳಾಲ: ಇಸ್ಲಾಮಿನ ಆದರ್ಶ ಮಕ್ಕಳಲ್ಲಿ ಬೆಳೆಯಬೇಕು. ಮಕ್ಕಳ ಕಾರ್ಯ ಇಸ್ಲಾಂ ಚೌಕಟ್ಟು ಮೀರದೇ ನಡೆಯಬೇಕು ಎಂಬ ಉದ್ದೇಶದಿಂದ ಪ್ರೇ ಸ್ಕೂಲ್ ಆರಂಭಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಇಸ್ಮಾಯಿಲ್ ಸಅದಿ ಉರುಮಣೆ ಅಭಿಪ್ರಾಯಪಟ್ಟರು.

ದೇರಳಕಟ್ಟೆಯಲ್ಲಿ ತಾಜುಲ್ ಉಲಮಾ ಮಸೀದಿಯಲ್ಲಿ ಆರಂಭಗೊಂಡ ತಾಜುಲ್ ಉಲಮಾ ನ್ಯೂ ಬೀ ಇಸ್ಲಾಮಿಕ್ ಪ್ರೇ ಸ್ಕೂಲ್ಉದ್ಘಾಟಿಸಿ ಮಾತನಾಡಿದರು. ಸಿಹಾಬುದ್ದೀನ್ ಸಖಾಫಿ ತಲಕ್ಕಿ ಅವರು ತರಗತಿಯನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಮಕ್ಕಳ ಅಭಿವೃದ್ಧಿಗಿರುವ ಸಾಧನ. ಇದರ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕೆಂದರು.
ಏಷ್ಯನ್ ಬಾವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಸ್ಹಾಕ್ ಝುಹ್ರಿ, ಯಾಕೂಬ್ ಸಅದಿ, ಮನ್ಸೂರ್ ಹಿಮಮಿ, ಹೈದರ್ ಆಲಿ, ನಝೀರ್ ಅಹ್ಸನಿ, ಇಸ್ಮಾಯಿಲ್ ಝಕರಿಯಾ, ಅಶ್ರಫ್ ಸಅದಿ, ಹಮೀದ್ ದೇರಳಕಟ್ಟೆ, ಶೌಕತ್, ಬಶೀರ್ ಕಲ್ಕಟ್ಟ ಉಪಸ್ಥಿತರಿದ್ದರು.


