Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ದೇರಳಕಟ್ಟೆ: ಕ್ಷೇಮದಲ್ಲಿ ವೈದ್ಯರ ದಿನಾಚರಣೆ

UllalaVaniBy UllalaVaniJuly 2, 2018Updated:July 2, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ವೈದ್ಯಕೀಯ ಶಿಕ್ಷಣದ ವೇಳೆ ನೈತಿಕವಾಗಿ ಅಭ್ಯಾಸ ನಡೆಸಿದಾಗ ವೃತ್ತಿಯಲ್ಲಿ ಸಮರ್ಥನೀಯತೆಯನ್ನು ಗಳಿಸಬಹುದು. ಈ ಮೂಲಕ ನ್ಯಾಯಬದ್ಧವಾಗಿ ಕರ್ತವ್ಯ ನಿರ್ವಹಿಸುವುದರಿಂದ ಜನಮಾನಸದಲ್ಲಿ ಶಾಶ್ವತವಾದ ಗೌರವ ಪಡೆಯಲು ಸಾಧ್ಯ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.
ವೈದ್ಯರ ದಿನಾಚರಣೆ ಪ್ರಯುಕ್ತ ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಧೀನದ ಕ್ಷೇಮ ಚಿಂತನಾ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದ ಅಧ್ಯಕಕ್ಷತೆ ವಹಿಸಿ ಅವರು ಮಾತನಾಡಿದರು.

ವೈದ್ಯರೆಂದರೆ ನಾಯಕರು, ಜೀವಮಾನ ಕಲಿಯುವವರು, ಸಂವಹನವುಳ್ಳವರು ಹಾಗೂ ವೃತ್ತಿಪರರಾಗಿರುತ್ತಾರೆ. ಇದೆಲ್ಲರ ಜೊತೆಗೆ ವೃತ್ತಿಯಲ್ಲಿ ಸಮಗ್ರತೆ ಮತ್ತು ಬದ್ಧತೆಯನ್ನು ಕಾಪಾಡುವುದರ ಮೂಲಕ ಯಶಸ್ವಿ ವೈದ್ಯನಾಗಬಹುದು. ಇಂತಹ ಬದ್ಧತೆಯನ್ನು ಇಟ್ಟುಕೊಂಡು ದೂರದ ಪಯ್ಯನ್ನೂರಿನಲ್ಲಿ ಕೋಪಿಷ್ಠ ರೋಗಿಗಳ ನಡುವೆ ಯಶಸ್ವಿಯಾಗಿ ಡಾ|.ಎ.ಹೆಚ್ ಶೆಣೈ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಹಳ ಕಷ್ಟದಿಂದ ಸೇವೆ ನಡೆಸಿ ಜನಮಾನಸದಲ್ಲಿ ಇಂದಿಗೂ ಶಿರಸಿಯ ಡಾ| ಅರುಣ್ ಪ್ರಭು ದಂಪತಿಗಳಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಿಟ್ಟೆ ಕಾರ್ಕಳ ನಿಟ್ಟೆಯ ಗಜಾರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಯರಾಮ ರೈ, ಪಯ್ಯನ್ನೂರಿನ ಜನರಲ್ ಸರ್ಜನ್ ಡಾ. ಎಚ್. ಎ. ಶೆಣೈ. ಪುತ್ತೂರಿನ ಖ್ಯಾತ ವೈದ್ಯ ಡಾ. ಭಾಸ್ಕರ್, ಶಿರಸಿಯ ಜನರಲ್ ಸರ್ಜನ್ ಡಾ. ಅರುಣ್ ಪ್ರಭು ಹಾಗೂ ಶಿರಸಿಯ ಅನಸ್ತೇಶಿಯಾ ತಜ್ಞೆ ಡಾ. ಆಶಾ ಪ್ರಭು ಅವರನ್ನು ಸನ್ಮಾನಿಸಲಾಯಿತು.ವೈಸ್ ಡೀನ್ ಡಾ. ಅಮೃತ್ ಎಂ. ಮಿರಾಜ್ಕರ್, ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ, ಡಾ. ಮಂಜುನಾಥ್ ಆರ್. ಕಾಮತ್, ಡಾ. ರಾಜೀವ್ ಟಿ.ಪಿ ಹಾಗೂ ಡಾ. ದಿಲೀಪ್ ಕೆ.ಎಸ್ ಸನ್ಮಾನಿತರನ್ನು ಪರಿಚಯಿಸಿದರು.ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹೀರೇಮಠ ವಂದಿಸಿದರು. ಕ್ಷೇಮ ಡೀನ್ ಡಾ. ಪಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಆರ್ಥೊಪೆಡಿಕ್ಸ್ ಪ್ರೊಫೆಸರ್ ಡಾ. ಸಿದ್ದಾರ್ಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕೇರಳೀಯರಿಗೆ ಕ್ಷೇಮದ ಕೊಡುಗೆ ಅಪಾರ
ಕೇರಳ ಭಾಗದವರಿಗೆ ಕ್ಷೇಮ ಆಸ್ಪತ್ರೆ ಬಹಳಷ್ಟು ಕೊಡುಗೆಯನ್ನು ನೀಡುತ್ತಿದೆ. ಪಯ್ಯನ್ನೂರಿನಲ್ಲಿ ಕರ್ತವ್ಯ ನಿರ್ವಹಿಸಿದರೂ, ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯನ್ನು ಅರಸಿಕೊಂಡು ಬರುವ ಅಲ್ಲಿನ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದು ವಾಪಸ್ಸಾಗುವವರಿದ್ದಾರೆ. ಇಂತಹ ಸೇವೆ ಅಲ್ಲಿನ ಗ್ರಾಮೀಣ ಪ್ರದೇಶದ ಮಂದಿಗೆ ಬಹಳಷ್ಟು ಸಹಕಾರಿಯಾಗಿದೆ
ಡಾ| ಎಚ್.ಎ.ಶೆಣೈ
ಜನರಲ್ ಸರ್ಜನ್
ಪಯ್ಯನ್ನೂರು

ವೈದ್ಯರು ತಮ್ಮನ್ನು ತಾವು ವೃದ್ಧಿಪಡಿಸಿಕೊಂಡು ಮುಂದುವರಿಯಬೇಕಿದೆ. ವೈದ್ಯ ವೃತ್ತಿಯಲ್ಲಿ ನಿವೃತ್ತಿಯಿಲ್ಲ. ವೈದ್ಯಕೀಯ ಅಭ್ಯಾಸದ ಸಂದರ್ಭ ನೈತಿಕತೆ ಮತ್ತು ನೈತಿಕತೆಯಿಲ್ಲದ ಶಿಕ್ಷಣವನ್ನು ಪಡೆಯಬಹುದು. ನೈತಿಕತೆಯ ಶಿಕ್ಷಣ ಗಳಿಸಿ ಉತ್ತಮ ಸೇವೆಯನ್ನು ಜನರಿಗೆ ಒದಗಿಸಬೇಕಿದೆ. ಪ್ರಸ್ತುತ ಬರುವ ರೋಗಿಗಳು ಬುದ್ಧಿವಂತರು ಹಾಗೂ ದಯವಂತರೂ ಇರುತ್ತಾರೆ. ಅದನ್ನೆಲ್ಲಾ ಮನಗಂಡು ಅನುಭೂತಿಯಿಂದ ವರ್ತಿಸಿದಲ್ಲಿ ವೈದ್ಯರ ಮೇಲಿನ ಹಿಂಸೆಯಿಂದ ದೂರವಿರಬಹುದು.
ಡಾ| ಭಾಸ್ಕರ್
ಖ್ಯಾತ ವೈದ್ಯರು
ಪುತ್ತೂರು

ವೈದ್ಯಕೀಯ ಲೋಕ ಬಹಳಷ್ಟು ಬದಲಾಗಿದೆ. ಸತತ 30 ವರ್ಷಗಳ ತರಬೇತಿಯಿಂದಾಗಿ ಹಿಂದೆ ವೈದ್ಯರಿಗೆ ಮದುವೆಯಾಗಲು ಹುಡುಗಿ ಕೊಡುತ್ತಿರಲಿಲ್ಲ. ತನ್ನ ಸೇವಾ ಅವಧಿಯಲ್ಲಿ ಭಾರತೀಯ ಸೇನೆಯ ಜೊತೆಗೆ ಕರ್ತವ್ಯ ನಿರ್ವಹಿಸಿರುವುದು ಅವಿಸ್ಮರಣೀಯ. ಇಂಡೋ- ಪಾಕ್ ಯುದ್ಧದ ಸಮಯದಲ್ಲಿ ಕಾಡಿನೊಳಗೆ ಕಳೆದಿರುವ ದಿನಗಳು ಈಗಲೂ ಕಣ್ಣ ಮುಂದೆ ಬರುತ್ತಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚಾಗಿ ಅಧ್ಯಯನ ನಡೆಸುವುದರ ಮೂಲಕ ವೃತ್ತಿಯಲ್ಲಿ ಯಶಸ್ವಿಯನ್ನು ಕಂಡಿದ್ದೇನೆ. ವೃತ್ತಿ ಜೊತೆಗೆ ಆರೋಗ್ಯವನ್ನು ಕಾಪಾಡಿರುವುದರಿಂದ 72 ರ ಹರೆಯದಲ್ಲೂ ಆರೋಗ್ಯವಂತನಾಗಿರುವೆ.
ಡಾ| ಅರುಣ್ ಪ್ರಭು
ಜನರಲ್ ಸರ್ಜನ್
ಶಿರಸಿ

ಸರಕಾರಿ ಆಸ್ಪತ್ರೆಯಲ್ಲೇ 22 ವರ್ಷಗಳ ಸೇವೆಯನ್ನು ಪ್ರೀತಿಯಿಂದ ಸಲ್ಲಿಸಿದ್ದೇನೆ. ಎಲ್ಲಾ ವಿಭಾಗದಲ್ಲಿಯೂ ಓರ್ವಳೇ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಬಹಳಷ್ಟು ಬೆಳೆಸಿತು. ಹಾವು ಕಚ್ಚಿ ಕೋಮಾ ಸ್ಥಿತಿಗೆ ತಲುಪಿದ ಯುವಕನ ರಕ್ಷಣೆ ಮತ್ತು ಅನಾರೋಗ್ಯದಿಂದ ಸಾವಿನ ಅಂಚಿನಲ್ಲಿದ್ದ 4ರ ಹರೆಯದ ಮಗುವನ್ನು ಇದ್ದ ಸೌಲಭ್ಯಗಳಲ್ಲೇ ರಕ್ಷಿಸಿದ ನೆನಪು ಈಗಲೂ ನೆನಪಾಗುತ್ತದೆ. ಬದುಕಿಸಿದ ಮಗು 32ರ ತರುಣನಾಗಿ ಬೆಳೆದು ಈಗಲೂ ಗೌರವಿಸಿ ನೆನಪಿಸುತ್ತಿರುವುದು ಸಂತಸ ಕೊಡುತ್ತದೆ. ಶಿರಸಿಯ ಗ್ರಾಮೀಣ ಭಾಗದ ನಾಲ್ಕು ಪ್ರದೇಶಗಳ ಕ್ಷಯರೋಗಿಗಳ ಪರೀಕ್ಷೆ ಜವಾಬ್ದಾರಿ ತನ್ನ ಮೇಲೆ ಬಿದ್ದಾಗ, ಚಾಲಕನಿಲ್ಲದ ಸಮಯದಲ್ಲಿ ಅಂಬಾಸಿಡರ್ ಕಾರನ್ನು ತಾನೇ ಚಲಾಯಿಸಿಕೊಂಡು ಶುಶ್ರೂಷಕಿಯರ ಜತೆಗೆ ಕರ್ತವ್ಯ ನಿರ್ವಹಿಸುವ ಮೂಲಕ ಹಲವರ ಜೀವ ಉಳಿಸಿರುವ ಸೇವೆಯನ್ನು ಜನ ಈಗಲೂ ಕೃತಾರ್ಥಭಾವದಲ್ಲಿ ನೋಡುತ್ತಾರೆ.
ಡಾ| ಆಶಾ ಪ್ರಭು
ಅನಸ್ತೇಷಿಯಾ ತಜ್ಞೆ

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ವಿಜಯ ಗೇಮ್ಸ್ ಟೀಮ್ ನ ನೂತನ ಅಧ್ಯಕ್ಷರಾಗಿ ಮಾರ್ವಿನ್ ಡೇವಿಸ್ ಅವಿರೋಧ ಆಯ್ಕೆ

August 18, 2026

ಕಲಾಯಿ ಫ್ರೆಂಡ್ಸ್ ಸರ್ಕಲ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

August 18, 2026

ಪಜೀರ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಧ್ವಜಕಂಬ ಹಸ್ತಾಂತರ

August 18, 2026
Leave A Reply

Advertise
ಸಂಪರ್ಕಿಸಿ

ಕೋಟೆಕಾರು ಪಟ್ಟಣ ಪಂಚಾಯತ್‌ 80 ನೇ ಸ್ವಾತಂತ್ರೋತ್ಸವ

August 16, 2026

ಮಾಡೂರು ಶಾಲೆಯಲ್ಲಿ ವಿಭಿನ್ನವಾಗಿ ಜರಗಿದ 80 ರ ಸ್ವಾತಂತ್ರ್ಯ

August 16, 2026

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026
suddi

ವಿಟ್ಲ: ಬಾಲಕನಿಗೆ ಲೈಂಗಿಕ ಕಿರುಕುಳ, ಬೆದರಿಕೆ ಪ್ರಕರಣ- ಆರೋಪಿ ಬಂಧನ

By UllalaVaniAugust 19, 20260

ವಿಟ್ಲ, ಆ. 19 : ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದಡಿ ವಿಟ್ಲ ಪೊಲೀಸರು 53…

ತಿಪಟೂರು ಕ್ಷೇತ್ರದ ಮಾಜಿ ಶಾಸಕ ಮತ್ತು ರಾಜ್ಯದ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿಧನ

August 19, 2026

ವಿಜಯ ಗೇಮ್ಸ್ ಟೀಮ್ ನ ನೂತನ ಅಧ್ಯಕ್ಷರಾಗಿ ಮಾರ್ವಿನ್ ಡೇವಿಸ್ ಅವಿರೋಧ ಆಯ್ಕೆ

August 18, 2026

ಹೆಸರಾಂತ ಶಾಮಿಯಾನ ಮಾಲೀಕ ಕೆ.ಎನ್.ಹೆಚ್. ಅಬ್ದುಲ್ ಖಾದರ್ ನಿಧನ

August 18, 2026
1 2 3 … 2,067 Next
Automatic YouTube Gallery

ಆ.28ರಂದು ದುರ್ಗಾಶ್ರೀ ಮಹಿಳಾ ಮಂಡಳಿ ಪಜೀರು ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ

ದುರ್ಗಾಶ್ರೀ ಮಹಿಳಾ ಮಂಡಳಿ ಪಜೀರು ಇದರ ವತಿಯಿಂದ ;ಆ.28ರಂದು ಷಷ್ಠಮ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ

ಕುರ್ನಾಡು ಶ್ರೀಸೂರ್ಯನಾರಾಯಣ ಭಟ್ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಆ.28ರಂದು ದುರ್ಗಾಶ್ರೀ ಮಹಿಳಾ ಮಂಡಳಿ ಪಜೀರು ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ
Now Playing
ಆ.28ರಂದು ದುರ್ಗಾಶ್ರೀ ಮಹಿಳಾ ಮಂಡಳಿ ಪಜೀರು ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ
ದುರ್ಗಾಶ್ರೀ ಮಹಿಳಾ ಮಂಡಳಿ ಪಜೀರು ಇದರ ವತಿಯಿಂದ ;ಆ.28ರಂದು ಷಷ್ಠಮ ವರ್ಷದ ಶ್ರೀ ...
ದುರ್ಗಾಶ್ರೀ ಮಹಿಳಾ ಮಂಡಳಿ ಪಜೀರು ಇದರ ವತಿಯಿಂದ ;ಆ.28ರಂದು ಷಷ್ಠಮ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ

ಕುರ್ನಾಡು ಶ್ರೀಸೂರ್ಯನಾರಾಯಣ ಭಟ್ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ವಿಶ್ವ ದಾಖಲೆ ನಿರ್ಮಿಸಲು ಮುಂದಾದ ಸಂಗೀತ ಬಾಲಚಂದ್ರ
Now Playing
ವಿಶ್ವ ದಾಖಲೆ ನಿರ್ಮಿಸಲು ಮುಂದಾದ ಸಂಗೀತ ಬಾಲಚಂದ್ರ
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಮುಂದಾದ ಸಂಗೀತ ಬಾಲಚಂದ್ರ ;25 ಗಂಟೆಗಳ ...
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಮುಂದಾದ ಸಂಗೀತ ಬಾಲಚಂದ್ರ ;25 ಗಂಟೆಗಳ ಕಾಲ ನಿರಂತರ ದಾಸರಪದ ಗಾಯನ

ಮಂಗಳೂರಿನಲ್ಲಿ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್‌ಬೈಲ್ ಸುದ್ದಿಗೋಷ್ಠಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version