UN NETWORKS
ತೊಕ್ಕೊಟ್ಟು:ಉಳ್ಳಾಲ ಹಸಿದ ವಿದ್ಯಾರ್ಥಿಗೆ ಊಟ ಕೊಡಲಾರದ ಸೆಕ್ಯುಲಾರ್ವಾದಿಗಳಂತಹ ಚಿಂತನೆಯಿಂದ ಹಿಂದು ಸಮುದಾಯ ಶೋಷಣೆಗೆಕ್ಕೊಳಗಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆ ಕಾರ್ಯಕಾರಿಣಿ ಸದಸ್ಯ ಹಾಗೂ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಹೇಳಿದರು.
ಅವರು ವಿಶ್ವ ಹಿಂದು ಪರಿಷತ್, ಬಜರಂಗದಳದ ಉಳ್ಳಾಲ ಪ್ರಖಂಡ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಸಲುವಾಗಿ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಿಂದ ತೊಕ್ಕೊಟ್ಟು ಬಸ್ಸು ನಿಲ್ದಾಣದವರೆಗೆ ಸೋಮವಾರ ಜರಗಿದ ಬೃಹತ್ ಪಂಜಿನ ಮೆರವಣಿಗೆ ಮತ್ತು ತೊಕ್ಕೊಟ್ಟುವಿನಲ್ಲಿ ನಡೆದ ದಿಕ್ಸೂಚಿ ಭಾಷಣ ಮಾಡಿದರು.
ಹಿಂದು ರಾಷ್ಟ್ರದಲ್ಲಿ ಹಿಂದುಗಳು ಹಬ್ಬಗಳನ್ನು ಆಚರಿಸುವ ಸಂದರ್ಭ ಗಣೇಶನ ವಿಗ್ರಹದ ಎತ್ತರ, ಪೆಂಡಾಲ್ ಅಳತೆಯನ್ನು ಲಿಖಿತವಾಗಿ ನೀಡುವ ದೌರ್ಭಾಗ್ಯ ಇದೆ. ಹಿಂದಿನ ಇತಿಹಾಸವೆಲ್ಲವೂ ಭೂಮಿಯಲ್ಲಿ ಇದ್ದವರೆಲ್ಲಾ ಹಿಂದುಗಳು ಹಾಗೂ ಹಿಂದುಸ್ತಾನ ತ್ಯಾಗದ ನೆಲ ಎಂಬ ಇತಿಹಾವಿದೆ. ಆದರೆ ತುಷ್ಟೀಕರಣದ ಗೋಜಿನಲ್ಲಿ ಧ್ವಜದ ಬಣ್ಣವನ್ನು ತುಂಡು ಮಾಡುವುದರ ಜತೆಗೆ ದೇಶವನ್ನೇ ತುಂಡು ಮಾಡಲಾಗಿದೆ. ಹಿಂದುಗಳ ಭಾವನೆಯನ್ನು ಒಂದುಗೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನೆಹರು ಸಂತಾನ ರಾಕ್ಷಸೀ ಪ್ರವೃತ್ತಿಯವರನ್ನು ದೇಶಾದ್ಯಂತ ಬೆಳೆಸಿದೆ. ಹಟ್ಟಿಯಿಂದ ದನವನ್ನು ಕಳವುಗೈಯ್ಯುತ್ತಿದ್ದವರು ಇದೀಗ ಲವ್ ಜಿಹಾದ್ ನಡೆಸಿಕೊಂಡು ಹಿಂದು ಹುಡುಗಿಯರನ್ನೇ ಮನೆಯಿಂದ ಹೊತ್ತೊಯ್ಯುವ ಅನಾಗರಿಕತೆ ಬೆಳೆದಿದೆ. ಓರ್ವ ಮೋದಿಯಿಂದ ದೇಶ ಜಾಗೃತಿಯಾಗಲು ಸಾಧ್ಯವಿಲ್ಲ, ಎಲ್ಲರೂ ಒಗ್ಗಟ್ಟಾಗಿ ಜಾಗೃತಿಯಾಗುವ ಮೂಲಕ ಹಿಂದುತ್ವದ ಭಾವನೆಗಳನ್ನು ಅಂಕಿತಗೊಳಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊಲದವರ ಯಾನೆ ಗಟ್ಟಿ ಸಮಾಜದವರ ಸೇವಾ ಸಂಘದ ಅಧ್ಯಕ್ಷ ಪವಿತ್ರ ಗಟ್ಟಿ ಮಾತನಾಡಿ ಸಮಾಜದಲ್ಲಿ ಹಿಂದುಗಳನ್ನು ತುಂಡು ಮಾಡಿ ಆಳುವ ಸಂಸ್ಕøತಿ ಮುಂದುವರಿದಿದೆ. ಇದನ್ನು ನಿಲ್ಲಿಸುವ ಕಾರ್ಯ ಹಿಂದು ಸಂಘಟನೆಗಳಿಂದ ಆಗಬೇಕಿದೆ. ಅಖಂಡ ಭಾರತ ಕಜಗತ್ತಿನಲ್ಲಿ ಶ್ರೇಷ್ಟವಾಗಲು ಎಲ್ಲರೂ ಒಗ್ಗಟ್ಟಾಗಬೇಕಿದೆ ಎಂದರು.
ವಿಶ್ವ ಹಿಂದು ಪರಿಷತ್ ಉಳ್ಳಾಲ ವಲಯ ಅಧ್ಯಕ್ಷ ಹರಿದಾಸ್ ಮಾಡೂರು, ಜಿಲ್ಲಾ ಕಾರ್ಯದರ್ಶಿ ಗೋಪಾಲ ಕುತ್ತಾರ್, ಬಜರಂಗದಳ ಉಳ್ಳಾಲ ಪ್ರಖಂಡದ ಸಂಚಾಲಕ ಪವಿತ್ರ ಕುಮಾರ್ ಉಪಸ್ಥಿತರಿದ್ದರು.
ರವಿ ಅಸೈಗೋಳಿ ಸ್ವಾಗತಿಸಿದರು. ಆಶೀಕ್ ಮಾಡೂರು ನಿರೂಪಿಸಿದರು. ಪ್ರೇಮ್ ಪಾವೂರು ವಂದಿಸಿದರು.


