Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಕೆ.ಸಿ.ರೋಡ್: ಪ್ರೀ ಫಯರ್ ಮೊಬೈಲ್ ಗೇಮ್ ಗಲಾಟೆ ಆಕೀಫ್ ಕೊಲೆಯಲ್ಲಿ ಅಂತ್ಯ

UllalaVaniBy UllalaVaniApril 5, 2021Updated:April 5, 2021No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp
Murdered Akif

ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ.ರೋಡ್ ನಿವಾಸಿ ಶನಿವಾರ ರಾತ್ರಿ ನಾಪತ್ತೆಯಾಗಿದ್ದ ಹನ್ನೆರಡರ ಹರೆಯದ ಬಾಲಕ ಆಕೀಫ್ ಮೃತದೇಹ ಭಾನುವಾರ ಕೆ.ಸಿರೋಡ್ ಬಳಿ ಮೈದಾನದ ಬಳಿ ತೆಂಗಿನಗರಿಯ ಅಡಿಯಲ್ಲಿ ಪತ್ತೆಯಾಗಿದ್ದು, ಪಬ್‍ಜಿ ಮಾದರಿಯ ಫ್ರೀ ಫಯರ್ ಮೊಬೈಲ್ ಗೇಮ್ ವಿಚಾರದಲ್ಲಿ ಆತನ ಸ್ನೇಹಿತನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Police Commissioner Shashi Kumar visit

 ಕೆ.ಸಿ.ರೋಡ್ ನಿವಾಸಿ ದ್ವಿತೀಯ ಪಿಯುಸಿ ಕಲಿಯುತ್ತಿರುವ ಉತ್ತರ ಪ್ರದೇಶ ಮೂಲದ ದೀಪಕ್(17) ಆಕೀಫ್‍ನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಆರೋಪಿಯಾಗಿದ್ದು, ಫ್ರೀ ಫಯರ್ ಮೊಬೈಲ್ ಗೇಮ್ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದ್ದು, ದೀಪಕ್‍ನನ್ನು ಉಳ್ಳಾಲ ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ವಿವರ : ಕೆ.ಸಿ ರೋಡ್ ನಿವಾಸಿ ಹನೀಫ್ ಅವರ ಐವರು ಮಕ್ಕಳಲ್ಲಿ ಮಹಮ್ಮದ್ ಆಕೀಫ್ ನಾಲಕನೆಯವನಾಗಿದ್ದು ಮೂವರು ಸಹೋದರಿ, ಓರ್ವ ಸಹೋದರ ಮತ್ತು ತಂದೆ ತಾಯಿಯನ್ನು ಅಗಲಿದ್ದಾನೆ. ಕೆ.ಸಿ. ರೋಡ್‍ನ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಈತನಿಗೆ ಕೊರೊನ ಹಿನ್ನಲೆಯಲ್ಲಿ  ಆನ್‍ಲೈನ್ ತರಗತಿಗೆಂದು ಹೆತ್ತವರು ಮೊಬೈಲ್ ತೆಗೆದುಕೊಟ್ಟಿದ್ದರು. ಕಳೆದ ಒಂದು ವರ್ಷದಿಂದ ಆಕೀಫ್ ಮೊಬೈಲ್‍ನಲ್ಲಿ ಕಲಿಕೆಯೊಂದಿಗೆ ಮೊಬೈಲ್ ಗೇಮ್‍ನಲ್ಲಿ ಪರಿಣತನಾಗಿದ್ದ. ಈ ಆಟವನ್ನು ಆನ್‍ಲೈನ್ ಮೂಲಕ ಹಲವಾರು ಸ್ನೇಹಿತರೊಂದಿಗೆ ಆಟವಾಡುತ್ತಿದ್ದು, ಈತ ಪ್ರತೀ ಬಾರಿ ಗೆಲ್ಲುತ್ತಿದ್ದ. ಗೇಮ್‍ನಿಂದ ಸ್ನೇಹಿತನಾದ ದೀಪಕ್ : ಮೂಲತ: ಉತ್ತರ ಪ್ರದೇಶದವನಾದ ದೀಪಕ್‍ನ ತಂದೆ ತಾಯಿ ಕಳೆದ 30 ವರ್ಷಗಳಿಂದ ಕೆ.ಸಿ.ರೋಡ್‍ನಲ್ಲಿ ವಾಸಿಸುತ್ತಿದ್ದು ಈತನ ತಂದೆ ಲಾರಿ ಚಾಲಕನಾಗಿದ್ದು ತಾಯಿ ಟೈಲರಿಂಗ್ ಸೇರಿದಂತೆÀ ಬೇರೆ ಬೇರೆ ಕೆಲಸ ಮಾಡುತ್ತಿದ್ದರು.

Police commissioner With Akif`s Father Haneef
Dead Body of Akif Found near Falah School`s compound wall

ದೀಪಕ್ ಸೋಮೇಶ್ವರದ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪಡೆಯುತ್ತಿದ್ದು ಮೂರು ತಿಂಗಳ ಹಿಂದೆ ಆಕೀಫ್‍ಗೆ ಮೊಬೈಲ್ ಅಂಗಡಿಯಲ್ಲಿ ಪರಿಚಯವಾಗಿ ಆನ್‍ಲೈನ್‍ನಲ್ಲಿ ಆಟವಾಡುತ್ತಿದ್ದ. ಎದುರುಬದುರಾಗಿ ಆಟಕ್ಕೆ ಕರೆದಿದ್ದ ದೀಪಕ್ : ಆನ್‍ಲೈನ್‍ನಲ್ಲಿ ದೀಪಕ್‍ನೊಂದಿಗೆ ಯಾವಾಗಲೂ ಗೆಲ್ಲುತ್ತಿದ್ದ ಆಕೀಫ್‍ನನ್ನು ಎದುರುಬದುರಾಗಿ ಆಟಕ್ಕೆ ದೀಪಕ್ ಕರೆದಿದ್ದ. ಶನಿವಾರ ನಮಾಝ್ ಮಗಿಸಿ ಎಂಟು ಗಂಟೆಯ ಸುಮಾರಿಗೆ ಹೊರಗೆ ಹೋಗುತ್ತೇನೆ ಎಂದು ದೀಪಕ್ ಮನೆ ಬಳಿ ತೆರಳಿದ್ದ ಆಕೀಫ್ ನೇರ ಸ್ಪರ್ಧೆಯಲ್ಲಿ ದೀಪಕ್‍ನೆದುರು ಸೋತಿದ್ದ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದರೂ ದೀಪಕ್ ಮನೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಆಕೀಫ್ ದೀಪಕ್‍ನನ್ನು ವಾಪಾಸ್ ಕರೆದು ಆಟವಾಡುವಂತೆ ಒತ್ತಾಯಿಸಿದ್ದಾನೆ. ದೀಪಕ್ ಆಟವಾಡಲು ಒಲವು ತೋರಿಸದೆ ಇದ್ದಾಗ ಆಕೀಫ್ ಆತನ ಮೇಲೆ ಕಲ್ಲು ಎಸೆದಿದ್ದ. ದೀಪಕ್ ಪ್ರತಿಯಾಗಿ ದೊಡ್ಡ ಕಲ್ಲು ತೆಗೆದು ಆಕೀಫ್‍ನ ಮೇಲೆ ತೂರಿದ್ದು ಅದು ಆತನ ಹಣೆ ಮತ್ತು ಕೆನ್ನೆಗೆ ಬಲವಾದ ಏಟು ನೀಡಿದ್ದು ಸ್ಥಳದಲ್ಲಿಯೇ ಕುಸಿದು ಬಿದಿದ್ದ. ದೀಪಕ್ ಘಟನೆಯ ಬಳಿಕ ಮನೆಗೆ ತೆರಳಿದ್ದರೂ 10 ನಿಮಿಷದ ಬಳಿಕ ವಾಪಾಸ್ ಘಟನಾ ಸ್ಥಳಕ್ಕೆ ಬಂದಾಗ ಆಕೀಫ್ ಕುಸಿದು ಬಿದ್ದ ಸ್ಥಿತಿಯಲ್ಲೇ ಇದ್ದುದ್ದನ್ನು ಕಂಡು ಆತನ ದೇಹವಮನ್ನು ಮೈದಾನದ ಬಳಿ ಎಳೆದು ಬಳಿಕ ತೆಂಗಿನ ಗರಿ ಮುಚ್ಚಿ ತೆರಳಿದ್ದ. ಆಕೀಫ್ ಹೊರಗಡೆ ಹೋದವ ಇನ್ನೂ ಬರಲಿಲ್ಲ ಎಂದು ಮನೆಯವರು ಹುಡುಕಾಡಿದ್ದು, ಸುತ್ತಮುತ್ತಲು ಎಲ್ಲಾ ಕಡೆ ಹುಡುಕಾಡಿದ್ದು ಆತನ ಸ್ನೇಹಿತರ ಮನೆಗೆ ತೆರಳಿ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ದೀಪಕ್‍ನೊಂದಿಗೆ ಮೊಬೈಲ್ ಗೇಮ್, ಆಡುವ ವಿಚಾರ ತಿಳಿದಿದ್ದ  ಮನೆಯವರು ಅವನಲ್ಲೂ ವಿಚಾರಿಸಿದ್ದಾರೆ ಬಳಿಕ ತಡರಾತ್ರಿ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿ ಆತನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ದೀಪಕ್‍ನನ್ನು ವಿಚಾರಿಸಿದರೆ ಯಾವುದೇ ಮಾಹಿತಿ ನೀಡಿರಲಿಲ್ಲ. ಬೆಳಗ್ಗೆ ಹುಡುಕಾಟ ನಡೆಸಿದಾಗ ದೀಪಕ್ ಮನೆಯ ಅಣತಿ ದೂರದ ಮೈದಾನದಲ್ಲಿ  ಆಕೀಫ್ ಕೊಲೆಯಾಗಿರುವುದು ಪತ್ತೆಯಾಗಿದೆ. ಬೆಳಗ್ಗೆ ಮೃತದೇಹ ಪತ್ತೆಯಾಗುತ್ತಿದ್ದಂತೆ ದೀಪಕ್ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಕಮಿಷನರ್ ಶಶಿಕುಮಾರ್, ಡಿಸಿಪಿಗಳಾದ ಹರಿರಾಂ, ವಿನಯ ಗಾಂವ್ಕರ್, ಎಸಿಪಿಗಳಾದ ನಟರಾಜ್, ರಂಜಿತ್ ಬಂಡಾರು, ನ್ಸ್‍ಪೆಕ್ಟರ್‍ಗಳಾದ ಸಂದೀಪ್, ಪ್ರಕಾಶ್ ಸ್ಥಳದಲ್ಲಿ ಆಗಮಿಸಿದ್ದು. ಈ ಸಂದರ್ಭದಲ್ಲಿ ಪೆÇಲೀಸ್ ಕಮೀಷನರ್ ಶಶಿಕುಮಾರ್ ಮಾತನಾಡಿ ಪೆÇೀಷಕರು ಮಕ್ಕಳ ಕೈಗೆ ಮೊಬೈಲ್ ನೀಡಿದಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು. ಪಬ್ ಜೀ ಆಟ ಬ್ಯಾನ್ ಆದರೂ ಬೇರೆ ವರ್ಷನ್ ಗಳನ್ನು ಮಕ್ಕಳು ಉಪಯೋಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. 

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ವಿವಾಹಿತೆ ಆತ್ಮಹತ್ಯೆ

July 29, 2025

ಕೋಟೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗರಪಂಚಮಿ

July 29, 2025

ಶ್ರೀ ಪಾಡಂಗರ ಭಗವತೀ ಕ್ಷೇತ್ರದಲ್ಲಿ ನಾಗರಪಂಚಮಿ

July 29, 2025
Leave A Reply

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ವಿವಾಹಿತೆ ಆತ್ಮಹತ್ಯೆ

By UllalaVaniJuly 29, 20250

ಬೆಳ್ತಂಗಡಿ: ವಿವಾಹಿತೆ ಮಹಿಳೆ ಆತ್ಮಹತ್ಯೆ ನಡೆಸಿರುವ ಘಟನೆ ವೇಣೂರು ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯಲ್ಲಿ ಸಂಭವಿಸಿದೆ.ವಾಣಿಶ್ರೀ(26ವ) ಆತ್ಮಹತ್ಯೆ ಮಾಡಿಕೊಂಡವರು.…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೋಟೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗರಪಂಚಮಿ

July 29, 2025

ಶ್ರೀ ಪಾಡಂಗರ ಭಗವತೀ ಕ್ಷೇತ್ರದಲ್ಲಿ ನಾಗರಪಂಚಮಿ

July 29, 2025

ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ನಾಗರ ಪಂಚಮಿ

July 29, 2025
1 2 3 … 1,544 Next
Automatic YouTube Gallery

ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ

ಮಂಜನಾಡಿ ದುರಂತದ
ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ
ಇನ್ನೂ ಸಿಗದ ನ್ಯಾಯ
#Ullalavani #Manjanady #Ashwini
ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ
Now Playing
ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ
ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ ...
ಮಂಜನಾಡಿ ದುರಂತದ
ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ
ಇನ್ನೂ ಸಿಗದ ನ್ಯಾಯ
#Ullalavani #Manjanady #Ashwini
ತೊಕ್ಕೊಟ್ಟು  : ಕೆರೆಬೈಲ್‌ನ ಕೊರಮಾಡಿಹಿತ್ಲುವಿನಲ್ಲಿ ನಾಗರಪಂಚಮಿ
Now Playing
ತೊಕ್ಕೊಟ್ಟು : ಕೆರೆಬೈಲ್‌ನ ಕೊರಮಾಡಿಹಿತ್ಲುವಿನಲ್ಲಿ ನಾಗರಪಂಚಮಿ
ತೊಕ್ಕೊಟ್ಟು: ತೊಕ್ಕೊಟ್ಟು ಕೆರೆಬೈಲ್‌ನ ಕೊರಮಾಡಿಹಿತ್ಲುವಿನ ಶ್ರೀ ನಾಗಬ್ರಹ್ಮ ಶ್ರೀ ...
ತೊಕ್ಕೊಟ್ಟು: ತೊಕ್ಕೊಟ್ಟು ಕೆರೆಬೈಲ್‌ನ ಕೊರಮಾಡಿಹಿತ್ಲುವಿನ ಶ್ರೀ ನಾಗಬ್ರಹ್ಮ ಶ್ರೀ ಕೋರ‍್ದಬ್ಬು ದೈವಸ್ಥಾನ ದಲ್ಲಿ ನಾಗರಪಂಚಮಿ ಪ್ರಯುಕ್ತ ಮಹಾಪೂಜೆ ನೆರವೇರಿತು.
#Ullalvani #Thokkottu #Kerebailu #Nagarapanchami
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications