Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಅಪರಾಧ ಸುದ್ದಿಗಳು

ಉಳ್ಳಾಲ : ಬಾರ್ ಇದ್ದ ಕಟ್ಟಡ ಬಲವಂತ ತೆರವು 8 ಲಕ್ಷ ನಷ್ಟ

UllalaVaniBy UllalaVaniAugust 4, 2015No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಉಳ್ಳಾಲ ಹಳೆ ಸ್ಟೇಟ್‍ಬ್ಯಾಂಕ್ ಬಳಿ ಬಾರ್‍ಎಂಡ್ ರೆಸ್ಟಾರೆಂಟೊಂದನ್ನು ಬಲವಂತಾಗಿ ಕಟ್ಟಡದ ಮಾಲಕರು ತೆರವು ಮಾಡಿದ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದ್ದು, ತೆರವಿಗೆ ಸಂಬಂ„ಸಿದಂತೆ ಒಂದು ಜೆಸಿಬಿಯೊಂದನ್ನು ವಶಕ್ಕೆ ತೆಗೆದುಕೊಂಡಿದ್ದು 15 ಮಂದಿಯನ್ನು ಉಳ್ಳಾಲ  ಪೊಲೀಸರು  ಬಂಧಿಸಿದ್ದಾರೆ. ಬಾರ್ ತೆರವಿನಿಂದ ಸುಮಾರು ಎಂಟು ಲಕ್ಷ ರೂ. ನಷ್ಟವಾಗಿದೆ ಎಂದು ಬಾರ್ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.

ರವೀಂದ್ರ ಉಳ್ಳಾಲ್ ಎಂಬವರಿಗೆ ಸೇರಿದ ಅಶೋಕ್ ಬಾರ್ ಎಂಡ್ ರೆಸ್ಟಾರೆಂಟನ್ನು ನಸುಕಿನ ವೇಳೆ ತೆರವು ನಡೆಸಿದ್ದು, ಕಟ್ಟಡ ಮಾಲಕಿ ಲಲಿತಾ ರವಿ ಸೇರಿದಂತೆ 15ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ತೆರವು ನಡೆಸುತ್ತಿದ್ದ ಜೆಸಿಬಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡರೆ, ಜೆಸಿಬಿ ಚಾಲಕ ಸಹಿತ ತೆರವು ನಡೆಸುತ್ತಿದ್ದ 15 ಜನರನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

DSC_0956

DSC_0960

DSC_0962

DSC_0965

DSC_0966

DSC_0967

DSC_0968

DSC_0969

DSC_0970

DSC_0973

DSC_0975

DSC_0976ಚೋಟಾ ಮಂಗಳೂರು ಎಂದೇ ಪ್ರಸಿದ್ದಿಯನ್ನು ಪಡೆದಿರುವ ಉಳ್ಳಾಲದ ಹಳೆ ಸ್ಟೇಟ್ ಬ್ಯಾಂಕ್ ಬಳಿ ರವೀಂದ್ರ ಎಂಬವರು ಸುಮಾರು 22 ವರ್ಷಗಳಿಂದ ಉಳ್ಳಾಲದ ರಘುರಾಮ್ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಬಾರ್ ಎಂಡ್ ರೆಸ್ಟಾರೆಂಟನ್ನು ನಡೆಸುತ್ತಿದ್ದರು. ರಘುರಾಮ್ ಅವರು ಎರಡು ವರ್ಷದ ಹಿಂದೆ ಕಟ್ಟಡವನ್ನು ತನ್ನ ಸಂಬಂ„ಯಾಗಿರುವ ಲಲಿತಾ ರವಿ ಎಂಬವರಿಗೆ ಮಾರಾಟ ನಡೆಸಿದ್ದರು. ಮಾರಾಟದ ಬಳಿಕ ಕಟ್ಟಡದಲ್ಲಿದ್ದ ಬೇರೆ ಅಂಗಡಿಗಳನ್ನು ತೆರವುಗೊಳಿಸಿದ್ದು, ಬಾರ್ ಎಂಡ್ ರೆಸ್ಟಾರೆಂಟನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಭಾನುವಾರ ನಸುಕಿನ ವೇಳೆಯಲ್ಲಿ ಜೆಸಿಬಿ ಮೂಲಕ ಬಲವಂತವಾಗಿ ತೆರವು ನಡೆಸಲಾಯಿತು.

ದಾರಿಯಲ್ಲಿ ಗುಂಡಿ ತೆಗೆದು ಬಾರ್ ಕಟ್ಟಡದ ಗೋಡೆಯನ್ನು ಉರುಳಿಸಿದರು : 

ಬಾರ್ ಎಂಡ್ ರೆಸ್ಟಾರೆಂಟ್‍ಗೆ ತೆರಳುವ ದಾರಿಯನ್ನು ಗುಂಡಿ ತೆಗೆದು ಬಳಿ ಬಾರ್ ಎಂಡ್ ರೆಸ್ಟಾರೆಂಟ್ ಇದ್ದ ಕಟ್ಟಡದ ಗೋಡೆಯನ್ನು ಕೆಡವಿದ್ದು, ಈ ಸಂದರ್ಭದಲ್ಲಿ ಮಾರಾಟಕ್ಕೆಂದು ಸಂಗ್ರಹಿಸಿದ್ದ ಮದ್ಯ ಸಹಿತ ಬಾರ್‍ನಲ್ಲಿದ್ದ ಸಾಮಾಗ್ರಿಗೆ ಹಾನಿಯಾಗಿದ್ದು ಸುಮಾರು ಎಂಟು ಲಕ್ಷ ರೂ. ನಷ್ಟವಾಗಿದೆ ಎಂದು ಬಾರ್ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.

ವರ್ಷದಿಂದ ನೋಟಿಸ್ ನೀಡಲಾಗುತ್ತಿದೆ :

ಕಟ್ಟಡವನ್ನು ತೆಗೆದು ಅಲ್ಲಿ ಹೊಸ ಕಟ್ಟಡ ನಿರ್ಮಾಣ ನಡೆಸಲು ಕಳೆದ ಒಂದೂವರೆ ವರ್ಷದಿಂದ ಬಾರ್ ಮಾಲಕರಿಗೆ ನೋಟಿಸ್ ನೀಡಲಾಗಿದ್ದು, ಬಾರ್ ಮಾಲಕರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಮಾಲಕರ ಸಂಬಂ„ಕರೊಬ್ಬರು ಪತ್ರಿಕೆಗೆ ತಿಳಿಸಿದರು. ತೆರವು ಕಾರ್ಯಾಚರಣೆಯ ಮಾಹಿತಿಯನ್ನು ಬಾರ್ ಮಾಲಕರಿಗೆ ತಿಳಿಸಿ ನಡೆಸಲಾಗಿದೆ. ಅದರಲ್ಲಿದ್ದ ಸಾಮಾನುಗಳನ್ನು ಖಾಲಿ ಮಾಡಲು ಮನವಿ ಮಾಡಿತ್ತು ಎನ್ನುವ ಅವರು ವೈನ್‍ಶಾಪ್ ನಡೆಸಲು ಅನುಮತಿ ನೀಡಿದ್ದ ಕೋಣೆಯನ್ನು ಮುಟ್ಟಿಲ್ಲ ಅದರ ಪಕ್ಕದ ಕೋಣೆಗಳನ್ನು ಕೆಡವಿದ್ದು, ಅದರಲ್ಲಿ ಮದ್ಯ ಸ್ಟಾಕ್ ಇರಿಸಿದ್ದ ಮಾಹಿತಿ ನಮಗೆ ಗೊತ್ತಿಲ್ಲ ಎಂದರು.

ಡಿಸೆಂಬರ್‍ವರೆಗೆ ಕಾಲಾವಕಾಶ ಕೇಳಿದ್ದೆ :

ಬಾರ್ ಎಂಡ್ ರೆಸ್ಟಾರೆಂಟನ್ನು ಈ ಪ್ರದೇಶದಿಂದ ಬೇರೆ ಕಡೆ ಸ್ಥಳಾಂತರಕ್ಕೆ ಕಳೆದ ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಸರಿಯಾದ ಸ್ಥಳ ಸಿಗದೇ ಇರುವ ಹಿನ್ನಲೆಯಲ್ಲಿ ಡಿಸೆಂಬರ್‍ವರೆಗೆ ಮುನ್ನಡೆಸುವ ಕುರಿತು ಕಟ್ಟಡ ಮಾಲಕರಿಗೆ ಮಾಹಿತಿ ನೀಡಿದ್ದೆ.ಆದರೆ ನಮಗೆ ಕಟ್ಟಡ ಮಾಲಕರು ಯಾವುದೇ ಮಾಹಿತಿಯಾಗಲಿ ನೋಟಿಸ್ ಆಗಲಿ ನೀಡಿಲ್ಲ. ಕಳೆದ ಮೇ. ತಿಂಗಳ ವರೆಗೆ ಬಾಡಿಗೆ ತೆಗೆದುಕೊಂಡಿದ್ದಾರೆ. ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅದರದೇ ಆದ ಕಾನೂನು ಇದ್ದು, ಅಬಕಾರಿ ಇಲಾಖೆ ಮೂಲಕ ನಾವು ಪರ್ಮಿಟ್ ತೆಗೆದು ವ್ಯವಹಾರ ನಡೆಸುತ್ತಿದ್ದೇವೆ. ಆದರೆ ಈಗ ಏಕಾಏಕಿ ಕಟ್ಟಡ ತೆರವುಗೊಳಿಸಿದ್ದರಿಂದ ಮಾರಾಟಕ್ಕೆಂದು ತಂದಿದ್ದ ಮದ್ಯ ಸಹಿತ ಸುಮಾರು 8 ಲಕ್ಷ ರೂ. ಹಾನಿಯಾಗಿದೆ ಎಂದು ಬಾರ್ ಮಾಲಕ ರವೀಂದ್ರ ಪತ್ರಿಕೆಗೆ ಮಾಹಿತಿ ನೀಡಿದರು.

ಸ್ಥಳೀಯರಿಗೆ ಸುಗ್ಗಿ :

ಬಾರ್ ಕಟ್ಟಡ ತೆರವುಗೊಳಿಸುತ್ತಿರುವ ಸುದ್ಧಿ ತಡ ರಾತ್ರಿ ಬಾರ್ ನೌಕರನಿಂದ ತಿಳಿದು ಬಂತು ಬಾರ್ ಕಡೆ ಬಂದಾಗ ಹೆಚ್ಚಿನ ಕಟ್ಟಡವನ್ನು ಧ್ವಂಸಗೊಳಿಸಲಾಗಿತ್ತು. ಘಟನೆಗೆ ಸಂಬಂ„ಸಿದಂತೆ ಉಳ್ಳಾಲ ಪೆÇಲೀಸರಿಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿದಾಗ ಹೆಚ್ಚಿನ ಮದ್ಯ ಬಾಟಲ್‍ಗಳು ಕಟ್ಟಡದ ಅಡಿಗೆ ಬಿದ್ದು, ಹಾನಿಯಾದರೆ, ಉಳಿದಿದ್ದ ಮದ್ಯದ ಬಾಟಲ್‍ಗಳನ್ನು ಸ್ಥಳೀಯರು ತೆಗೆದುಕೊಂಡು ಹೋಗುತ್ತಿರುವುದು ಅಸಾಯಕರಾಗಿ ನೋಡಬೇಕಾಯಿತು ಎಂದು ಬಾರ್ ಮಾಲಿಕರು ತಿಳಿಸಿದರು.

 

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ವಿವಾಹಿತೆ ಆತ್ಮಹತ್ಯೆ

July 29, 2025

ಕೋಟೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗರಪಂಚಮಿ

July 29, 2025

ಶ್ರೀ ಪಾಡಂಗರ ಭಗವತೀ ಕ್ಷೇತ್ರದಲ್ಲಿ ನಾಗರಪಂಚಮಿ

July 29, 2025
Leave A Reply

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ವಿವಾಹಿತೆ ಆತ್ಮಹತ್ಯೆ

By UllalaVaniJuly 29, 20250

ಬೆಳ್ತಂಗಡಿ: ವಿವಾಹಿತೆ ಮಹಿಳೆ ಆತ್ಮಹತ್ಯೆ ನಡೆಸಿರುವ ಘಟನೆ ವೇಣೂರು ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯಲ್ಲಿ ಸಂಭವಿಸಿದೆ.ವಾಣಿಶ್ರೀ(26ವ) ಆತ್ಮಹತ್ಯೆ ಮಾಡಿಕೊಂಡವರು.…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೋಟೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗರಪಂಚಮಿ

July 29, 2025

ಶ್ರೀ ಪಾಡಂಗರ ಭಗವತೀ ಕ್ಷೇತ್ರದಲ್ಲಿ ನಾಗರಪಂಚಮಿ

July 29, 2025

ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ನಾಗರ ಪಂಚಮಿ

July 29, 2025
1 2 3 … 1,544 Next
Automatic YouTube Gallery

ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ

ಮಂಜನಾಡಿ ದುರಂತದ
ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ
ಇನ್ನೂ ಸಿಗದ ನ್ಯಾಯ
#Ullalavani #Manjanady #Ashwini
ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ
Now Playing
ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ
ಮಂಜನಾಡಿ ದುರಂತದ ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ ಇನ್ನೂ ಸಿಗದ ನ್ಯಾಯ ...
ಮಂಜನಾಡಿ ದುರಂತದ
ಅಶ್ವಿನಿ ದೇರಳಕಟ್ಟೆ ಆಸ್ಪತ್ರೆಯಿಂದ ಬಿಡುಗಡೆ
ಇನ್ನೂ ಸಿಗದ ನ್ಯಾಯ
#Ullalavani #Manjanady #Ashwini
ತೊಕ್ಕೊಟ್ಟು  : ಕೆರೆಬೈಲ್‌ನ ಕೊರಮಾಡಿಹಿತ್ಲುವಿನಲ್ಲಿ ನಾಗರಪಂಚಮಿ
Now Playing
ತೊಕ್ಕೊಟ್ಟು : ಕೆರೆಬೈಲ್‌ನ ಕೊರಮಾಡಿಹಿತ್ಲುವಿನಲ್ಲಿ ನಾಗರಪಂಚಮಿ
ತೊಕ್ಕೊಟ್ಟು: ತೊಕ್ಕೊಟ್ಟು ಕೆರೆಬೈಲ್‌ನ ಕೊರಮಾಡಿಹಿತ್ಲುವಿನ ಶ್ರೀ ನಾಗಬ್ರಹ್ಮ ಶ್ರೀ ...
ತೊಕ್ಕೊಟ್ಟು: ತೊಕ್ಕೊಟ್ಟು ಕೆರೆಬೈಲ್‌ನ ಕೊರಮಾಡಿಹಿತ್ಲುವಿನ ಶ್ರೀ ನಾಗಬ್ರಹ್ಮ ಶ್ರೀ ಕೋರ‍್ದಬ್ಬು ದೈವಸ್ಥಾನ ದಲ್ಲಿ ನಾಗರಪಂಚಮಿ ಪ್ರಯುಕ್ತ ಮಹಾಪೂಜೆ ನೆರವೇರಿತು.
#Ullalvani #Thokkottu #Kerebailu #Nagarapanchami
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications