ಕಾಪಿಕಾಡು; ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಉಳ್ಳಾಲ ನಗರದ ವತಿಯಿಂದ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡು ಇಲ್ಲಿ ಶಿವರಾತ್ರಿ ಜಾಗರಣೆ ಹಾಗೂ ಯೋಗ ಶಿವನಮಸ್ಕಾರದ ಕಾರ್ಯಕ್ರಮವನ್ನು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ ಶೇಖರ್ ಮತ್ತು ಅವರ ಧರ್ಮಪತ್ನಿ ಪೂರ್ಣಿಮಾ ಶೇಖರ್ ದೀಪ ಪ್ರಜ್ವಲನೆಗೈಯುವ ಮೂಲಕ ಚಾಲನೆ ನೀಡಿದರು.

ಕ್ಷೇತ್ರದ ಪ್ರಧಾನ ಅರ್ಚಕರಾದ ಪರಮೇಶ್ವರ ಜೋಶಿ, ಮೊಕ್ತೇಸರರಾದ ಆರ್.ಕೆ.ಶೆಟ್ಟಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಲೆಕ್ಕಪತ್ರ ಪ್ರಮುಖರಾದ ಸುಬ್ರಹ್ಮಣ್ಯ ಭಟ್ ನಗರ ಸಂಚಾಲಕರಾದ ಸುಂದರ ಉಳ್ಳಾಲ ಜಿಲ್ಲಾ ಸಂಘಟನಾ ಪ್ರಮುಖರಾದ ಗೀತಾ ವಿಜಯ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿವರಾತ್ರಿ ಜಾಗರಣೆಯ ಸಂದರ್ಭದಲ್ಲಿ ಶಿವ ಭಜನೆ ಕುಣಿತ ಭಜನೆ ಮೃತ್ಯುಂಜಯ ಜಪ ಪಠಣೆ ಶಿವ ಅಷ್ಟೋತ್ತರ ಶತನಾಮಾನಿ ಪಠಣೆ 1008 ಪಂಚಾಕ್ಷರಿ ಜಪ ಪಠಣೆ ಯೋಗ ಬಂಧುಗಳಿAದ ನಡೆಯಿತು ಇವುಗಳ ಮಹತ್ವದ ಬಗ್ಗೆ ಬೌದ್ಧಿಕ ಅನ್ನು ನಗರದ ಶಿಕ್ಷಕರು ನೀಡಿದರು.
ಮುಂಜಾನೆ 4:00ಯಿಂದ ಅಮೃತವಚನ, ಪಂಚಾoಗ ಪಠಣ, ಅಗ್ನಿ ಹೋತ್ರ, ಗಣಪತಿ ನಮಸ್ಕಾರ ,ಹಾಗೂ ಹಾಗೂ ನಾಲ್ಕು ಸುತ್ತು ಯೋಗ ಶಿವನಮಸ್ಕಾರ. ಮತ್ತು ಅಮೃತಾಸನವನ್ನು ನಗರದ ವಿವಿಧ ಶಾಖೆಗಳ ಯೋಗ ಬಂಧುಗಳು ನಡೆಸಿಕೊಟ್ಟರು .
ಕಾರ್ಯಕ್ರಮದಲ್ಲಿ ವಲಯ ಪ್ರಮುಖರಾದ ಜಯರಾಮ ಚಂಬುಗುಡ್ಡೆ ನಗರ ಶಿಕ್ಷಣ ಪ್ರಮುಖರಾದ ವಸಂತ ಪಜೀರ್ ,ಪ್ರಶಾಂತ್ ಕಂಬಳ ಪದವು, ರವಿಶಂಕರ ಸೋಮೇಶ್ವರ ಕ್ಷೇತ್ರದ ಗಣೇಶ್ ಕಾಪಿಕಾಡು ಆನಂದ ಶೆಟ್ಟಿ ಭಾಸ್ಕರ್ ಗಟ್ಟಿ ಮತ್ತು ನೂರಕ್ಕೂ ಅಧಿಕ ಯೋಗ ಬಂಧುಗಳು ಉಪಸ್ಥಿರಿದ್ದರು. ಶಿಲ್ಪಾ ತಲಪಾಡಿ ನಿರೂಪಣೆ ಮಾಡಿದರು. ಕಾರ್ಯಕ್ರಮ ಸಂಚಾಲಕರಾದ ಅವಿನಾಶ್ ವಂದನಾರ್ಪಣೆ ಸಲ್ಲಿಸಿದರು



