Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಬಾಳೆಪುಣಿಯಲ್ಲಿ ಸ್ವಚ್ಛೋತ್ಸವ ಹಾಗೂ ನರೇಗಾ ಗ್ರಾಮೋತ್ಸವ

UllalaVaniBy UllalaVaniFebruary 14, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp


ಕೊಣಾಜೆ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಸರ್ಕಾರದ ಅನೇಕ ಮಹತ್ವಪೂರ್ಣವಾದ ಯೋಜನೆಗಳ ಸಮರ್ಪಕ ಸದ್ಭಳಕೆಯನ್ನು ಮಾಡುವ ಮೂಲಕ ಎಷ್ಟೋ ಜನರು ಸ್ವಾವಲಂಬಿ ಬದುಕನ್ನು ಕಂಡುಕೊಂಡಿದ್ದಾರೆ ಎಂದು ಕರ್ನಾಟಕ ಸರ್ಕಾರದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್ ಗಟ್ಟಿ ಹೇಳಿದರು.



ಅವರು ಗುರುವಾರ ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಉಳ್ಳಾಲ, ಬಾಳೆಪುಣಿ ಗ್ರಾಮ ಪಂಚಾಯತ್ ಇದರ ವತಿಯಿಂದ ಸ್ವಚ್ಛೋತ್ಸವ, ನರೇಗಾ ಗ್ರಾಮೋತ್ಸವ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ -50 ವರ್ಷ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಚ್ಛ ಗ್ರಾಮವಾಗಿ ಬಾಳೆಪುಣಿ ಗ್ರಾಮ ಪಂಚಾಯತ್ ಮಾದರಿಯಾಗಿದೆ. ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡಿದೆ. ಗ್ರಾಮ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯೂ ಸಾಧ್ಯ ಎಂದರು.

ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಅವರು ಮಾತನಾಡಿ, ಕಾರ್ಯಯೋಜನೆಗಳನ್ನು ಎಸಿ ರೂಮುನೊಳಗೆ ಕೂತು ನಿರ್ಧರಿಸಿದರೆ ಯಶಸ್ಸು ಆಗಲು ಸಾಧ್ಯವಿಲ್ಲ. ಅಧಿಕಾರಿಗಳೊಂದಿಗೆ ಜನರು ಸಂಪೂರ್ಣವಾಗಿ ಯೋಜನೆಯಲ್ಲಿ ಭಾಗವಹಿಸಿ ತೊಡಗಿಸಿಕೊಂಡರೆ ಮಾತ್ರ ಇದು ಯಶಸ್ವಿಯಾಗಲು ಸಾಧ್ಯ. ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸ ಸ್ಥಳಗಳಿಗೆ ಕರೆದುಕೊಂಡು ಹೋಗುವಂತೆಯೇ ಅವರಿಗೆ ಸ್ವಚ್ಚ ಘಟಕಗಳನ್ನೂ ತೋರಿಸಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.

ನರೇಗಾ ಯೋಜನಾಧಿಕಾರಿ ಜಯರಾಮ್ ಸ್ವಚ್ಛ ಮನೆ ಘೋಷಣಾ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ದೂರದೃಷ್ಟಿಕೋನ ಇಟ್ಟುಕೊಂಡು ನಾವು ಕಾರ್ಯಪ್ರವೃತ್ತರಾದರೆ ಯಶಸ್ಸು ಸಾಧ್ಯ. ಸರ್ಕಾರದ ಯೋಜನೆಗಳನ್ನು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಲೆಕ್ಕಸಹಾಯಕರಾಗಿ ಕಾರ್ಯನಿರ್ವಹಿಸಿ ಇದೀಗ ವರ್ಗಾವಣೆಗೊಂಡ ರುಕ್ಮನ್ ದಾಸ್, ಆರೋಗ್ಯ ಸಹಾಯಕಿಯಾಗಿ ವರ್ಗಾವಣೆಗೊಂಡ ನಳಿನಾಕ್ಷಿ ಲಿಂಗಪ್ಪ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಪುಷ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಶೈಕ್ಷಣಿಕ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಕಪಾಟು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದರ ಗೀತಾ ಭಂಡಾರಿ,ಉಪಾಧ್ಯಕ್ಷರಾದ ಸಿ.ಎಂ. ಶರೀಫ್ ಚೆಂಬೆತೋಟ, ಉದ್ಯಮಿ ನಾಸೀರ್ ಎನ್ ಎಸ್ ನಡುಪದವು, ಮಾಜಿ ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಮಾಜಿ ಅಧ್ಯಕ್ಷ ಬಶೀರ್ , ಹಿರಿಯ ಸದಸ್ಯ ಬಾಸ್ಕರ ಕೋಟ್ಯಾನ್, ದ.ಕ‌.ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಸದಸ್ಯರಾದ ಅಬ್ದುಲ್ ರಹಿಮಾನ್, ಅಬ್ಬಾಸ್, ಸುಜಾತ, ದೊಂಬಯ್ಯ , ಸುನೀಲ್, ಸಾವಿತ್ರಿ, ಅಂಜಲಿ, ಸುಮನಾ ಕ್ರಾಸ್ತಾ, ಅಬ್ದುಲ್ ರಹಿಮಾನ್, ಗುರುರಾಜ್ ಭಟ್, ಶಶಿಧರ್, ಮಾಜಿ ಅಧ್ಯಕ್ಷರಾದ ಸುಕನ್ಯಾ ರೈ, ಜೊಹರಾ, ಯಾಕೂಬ್ ಮೊದಲಾದವರು ಉಪಸ್ಥಿತರಿದ್ದರು ಕಾರ್ಯದರ್ಶಿ ಆಯಿಷಾ ಬಾನು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಅವರು ಸ್ಬಾಗತಿಸಿದರು. ಉಪಾಧ್ಯಕ್ಷರಾದ ಸಿ.ಎಂ.ಶೆರೀಫ್ ವಂದಿಸಿದರು. ಸದಾನಂದ ಹಾಗೂ ಮಂಜಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.

ಸಾವಯವ ಬಾಟಲಿ ಹಾಗೂ ಸಾವಯವ ಕೈಚೀಲ ಬಿಡುಗಡೆ:

ಬಾಳೆಪುಣಿಯಲ್ಲಿ ನಡೆದ ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಮೆಲ್ವಿನ್ ಅರುಣ್ , ಕವಿತಾ ದಂಪತಿಗಳು ಕಬ್ದು, ಜೋಳ ಮೊದಲಾದ ಸಾವಯವ ಪದಾರ್ಥಗಳನ್ನು ಬಳಸಿ ತಯಾರಿಸಿದ ಸಾವಯವ ನೀರಿನ ಬಾಟ್ಲಿ ಹಾಗೂ ಸಾವಯವ ಪ್ಲಾಸ್ಟಿಕ್ ಚೀಲ, ಸಾವಯವ ನರ್ಸರಿ ಚೀಲವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಮಾಹಿತಿ‌ ನೀಡಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸೋಷಿಯಲ್ ಮೀಡಿಯಾ ವೀವ್ಸ್ ಗೆ ವಿಷಕಾರಿ ಏಡಿ ತಿಂದು ಫುಡ್ ಇನ್ಫ್ಲುಯೆನ್ಸರ್ ಸಾವು…!

February 14, 2026

ಬಾಳೆಪುಣಿಯಲ್ಲಿ ನವೀಕೃತಗೊಂಡ ಬದ್ರಿಯಾ ಜುಮಾ ಮಸೀದಿ ಉದ್ಘಾಟನೆ

February 14, 2026

ಪೊಲೀಸ್ ಠಾಣೆಯಲ್ಲಿ ದರ್ಪ ತೋರುವ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಶಾಕ್

February 12, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಸೋಷಿಯಲ್ ಮೀಡಿಯಾ ವೀವ್ಸ್ ಗೆ ವಿಷಕಾರಿ ಏಡಿ ತಿಂದು ಫುಡ್ ಇನ್ಫ್ಲುಯೆನ್ಸರ್ ಸಾವು…!

By UllalaVaniFebruary 14, 20260

ನ್ಯೂಯಾರ್ಕ್: ಸೋಷಿಯಲ್ ಮೀಡಿಯಾ ವೀವ್ಸ್ ಗೆ ವಿಷಕಾರಿ ‘ಡೆವಿಲ್ ಕಾರ್ಬ್’ ತಿಂದು ಫುಡ್ ಇನ್ಫ್ಲುಯೆನ್ಸರ್ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಎಮ್ಮಾ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಬಾಳೆಪುಣಿಯಲ್ಲಿ ಸ್ವಚ್ಛೋತ್ಸವ ಹಾಗೂ ನರೇಗಾ ಗ್ರಾಮೋತ್ಸವ

February 14, 2026

ಬಾಳೆಪುಣಿಯಲ್ಲಿ ನವೀಕೃತಗೊಂಡ ಬದ್ರಿಯಾ ಜುಮಾ ಮಸೀದಿ ಉದ್ಘಾಟನೆ

February 14, 2026

`ವೈಲ್ಡ್ ಟೈಗರ್ ಸಫಾರಿ’ ಚಿತ್ರದ ಮೊದಲ ಹಾಡು ಬಿಡುಗಡೆ; ಭರ್ಜರಿ ರೆಸ್ಪಾನ್ಸ್

February 14, 2026
1 2 3 … 1,800 Next
Automatic YouTube Gallery

ಕಾಪಿಕಾಡು ಉಮಾಮಹೇಶ್ವರೀ ದೇವಳದ ಬ್ರಹ್ಮಕಲಶೋತ್ಸವ ಸಂಪನ್ನ; ಅಭಿನಂದನಾ ಸಮಾರಂಭ

ಕಾಪಿಕಾಡು ಉಮಾಮಹೇಶ್ವರೀ ದೇವಳದ ಬ್ರಹ್ಮಕಲಶೋತ್ಸವ ಸಂಪನ್ನ; ಅಭಿನಂದನಾ ಸಮಾರಂಭ
#ullalavani #ullala #Kapikad #umamaheshwari #Temple
ಕಾಪಿಕಾಡು ಉಮಾಮಹೇಶ್ವರೀ ದೇವಳದ ಬ್ರಹ್ಮಕಲಶೋತ್ಸವ ಸಂಪನ್ನ; ಅಭಿನಂದನಾ ಸಮಾರಂಭ
Now Playing
ಕಾಪಿಕಾಡು ಉಮಾಮಹೇಶ್ವರೀ ದೇವಳದ ಬ್ರಹ್ಮಕಲಶೋತ್ಸವ ಸಂಪನ್ನ; ಅಭಿನಂದನಾ ಸಮಾರಂಭ
ಕಾಪಿಕಾಡು ಉಮಾಮಹೇಶ್ವರೀ ದೇವಳದ ಬ್ರಹ್ಮಕಲಶೋತ್ಸವ ಸಂಪನ್ನ; ಅಭಿನಂದನಾ ಸಮಾರಂಭ ...
ಕಾಪಿಕಾಡು ಉಮಾಮಹೇಶ್ವರೀ ದೇವಳದ ಬ್ರಹ್ಮಕಲಶೋತ್ಸವ ಸಂಪನ್ನ; ಅಭಿನಂದನಾ ಸಮಾರಂಭ
#ullalavani #ullala #Kapikad #umamaheshwari #Temple
ಕೊಲ್ಯ ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ಫೆ.17ರಿಂದ 38ನೇ ವರ್ಧಂತ್ಯೋತ್ಸವ
Now Playing
ಕೊಲ್ಯ ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ಫೆ.17ರಿಂದ 38ನೇ ವರ್ಧಂತ್ಯೋತ್ಸವ
ಕೊಲ್ಯ ಮೂಕಾಂಬಿಕಾ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ;ಫೆ.17ರಿಂದ 21ರವರೆಗೆ ...
ಕೊಲ್ಯ ಮೂಕಾಂಬಿಕಾ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ;ಫೆ.17ರಿಂದ 21ರವರೆಗೆ ನಡೆಯಲಿದೆ 38ನೇ ವರ್ಧಂತ್ಯೋತ್ಸವ

ಉಳ್ಳಾಲದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ಮಾಹಿತಿ
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d