UN networks
ಉಳ್ಳಾಲ: ತೌಳವರಾಣಿ ಅಬ್ಬಕ್ಕಳನ್ನು ಚಿರಸ್ಥಾಯಿಯಾಗಿ ಉಳಿಸುವ ಕೆಲಸ ಯುವಸಮುದಾಯದಿಂದ ಆಗಬೇಕಿದೆ. ವಿದ್ಯಾರ್ಥಿಗಳು ೮೦ ರಿಂದ ೯೦ ವರ್ಷಗಳ ಕಾಲ ಉಳ್ಳಾಲದಲ್ಲಿ ಆಡಳಿತ ನಡೆಸಿದ ಅಬ್ಬಕ್ಕೆಯರ ಕುರಿತು ಸಂಶೋಧನಾ ವರದಿಯತ್ತ ಹೆಚ್ಚಿನ ಗಮನಹರಿಸುವ ಅವಶ್ಯಕತೆಯಿದೆ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.

ನಿಟ್ಟೆ ಸಮೂಹ ಸಂವಹನ ವಿಭಾಗ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿ.ವಿಯ ಪಾನೀರು ಕ್ಯಾಂಪಸ್ ನಲ್ಲಿ ಜರಗಿದ ಪ್ರಥಮ ಸ್ವಾತಂತ್ರ÷್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳ ಮುನ್ನೆಲೆಗೆ ಬಾರದ ವಿಚಾರಗಳ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್ ಮಾತನಾಡಿ, ಕಿರೀಟವಿಟ್ಟು ಮೆರೆದವಳಲ್ಲ , ಎಲ್ಲಾ ಸಮುದಾಯದವರನ್ನು ಜತೆಗೂಡಿಕೊಂಡು ೮೦ ವರ್ಷಗಳ ಕಾಲ ಆಡಳಿತ ನಡೆಸಿದಾಕೆ, ಸಾಮಾನ್ಯ ಕೃಷಿಕಳಾಗಿ ಬಾಳುತ್ತಿದ್ದವಳು ರಾಣಿ ಅಬ್ಬಕ್ಕ . ಇಟೆಲಿಯನ್ ಕವಿ ಪಿಯಾತ್ರೋ ದಲ್ಲವಿಲ್ಲೆ ಇಟಲಿ ಭಾಷೆಯಲ್ಲಿ ಅಬ್ಬಕ್ಕಳ ಜೀವನಚರಿತ್ರೆ ಕುರಿತು ಬರೆದ ವಿಚಾರ ೧೫೦ ವರ್ಷಗಳ ಹಿಂದೆಯಷ್ಟೇ ಮುನ್ನೆಲೆಗೆ ಬಂದಿದೆ. ಆಂಗ್ಲ ಭಾಷೆಗೆ ತರ್ಜುಮೆಗೊಂಡ ನಂತರ ಅಬ್ಬಕ್ಕಳ ಶೌರ್ಯ, ವಿಚಾರಧಾರೆಗಳು ದೇಶಾದ್ಯಂತ ಬೆಳಕಿಗೆ ಬಂತು. ಆನಂತರ ಆಕೆಯ ಆದರ್ಶಗಳನ್ನು ಮುಂದಿಟ್ಟು ಸಮಿತಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇನ್ನೂ ಆಕೆಯ ಹೆಸರನ್ನು ಶಾಶ್ವತವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಯುವ ವಿದ್ಯಾರ್ಥಿ ಸಮುದಾಯದ ಶ್ರಮದ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿ.ವಿ ಯ ಕುಲಪತಿ ಪ್ರೊ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ಸುತ್ತಮುತಲಿನ ಪ್ರದೇಶವನ್ನು ಗಮನಿಸದೆ ಸಂಸ್ಕöÈತಿ ಗಳನ್ನು ಮರೆಯುತ್ತಿದ್ದೇವೆ. ಚಿನ್ನದಂತೆ ಕಾಳುಗಳ ಬೆಲೆ ಆಗಿನದ್ದಾಗಿತ್ತು. ವ್ಯಾಪಾರಕ್ಕಾಗಿ ಉಳ್ಳಾಲ ಹೆಸರುವಾಸಿಯಾಗಿತ್ತು. ನಿಜಾಂಶದ ವಿಚಾರಗಳು ಎಂದಿಗೂ ಸ್ಪೂರ್ತಿದಾಯಕ ಅನ್ನುವ ಉದ್ದೇಶದಿಂದ ರಾಣಿ ಅಬ್ಬಕ್ಕಳ ವಿಚಾರಸಂಕಿರಣ ಹಮ್ಮಿಕೊಂಡಿದ್ದೇವೆ. ಉಳ್ಳಾಲದ ಪ್ರದೇಶಗಳ, ಅಬ್ಬಕ್ಕಳ ಆದರ್ಶಗಳ ಸಂಶೋಧನೆಗೆ ವಿದ್ಯಾರ್ಥಿಗಳು ಗಮನಹರಿಸಿರಿ. ಸಮಾಜ, ಪ್ರಕೃತಿಯನ್ನು ಗಮನಿಸಿ ಮಾಧ್ಯಮ ಲೋಕದಲ್ಲಿ ವರದಿ ನಡೆಸಿ. ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಮಾಧ್ಯಮ ಮಾತ್ರ ಬಲಿಷ್ಠವಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಜಿ.ಪಂ ಮಾಜಿ ಸದಸ್ಯೆ ಧನಲಕ್ಷಿ÷್ಮ ಗಟ್ಟಿ, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಉಪಸ್ಥಿತರಿದ್ದರು.
ಸಮೂಹ ಸಂವಹನ ವಿಭಾಗದ ಪ್ರೊ.ರವಿರಾಜ್ ಸ್ವಾಗತಿಸಿದರು. ಆನಂದ್ ಅಸೈಗೋಳಿ ವಂದಿಸಿದರು.


