UN NETWORKS
ಕೊಲ್ಯ: ಕಳೆದ ನಾಲ್ಕು ವರುಷ ಹತ್ತು ತಿಂಗಳ ಅವಧಿಯಲ್ಲಿ ದೇಶದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ.ಎಂದು ಬಿ.ಜೆ.ಪಿ. ಜಿಲ್ಲಾ ಚುನಾವಣಾ ಸಂಚಲಕರಾದ ಗೋಪಾಲಕೃಷ್ಣ ಹೇರಳೆಯವರು ಹೇಳಿದರು.ಅವರು ಕೊಲ್ಯ ಸೌಭಾಗ್ಯ ಭವನದಲ್ಲಿ ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ ಜತೆಯಲ್ಲಿ,ಬಿ.ಜೆ.ಪಿ. ಮಂಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಗೆ ಸಿದ್ದತಾ ಸಭೆ ಮತ್ತು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಚುನಾವಣಾ ಸಹ ಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಕ್ಷೇತ್ರ ಚುನಾವಣಾ ಪ್ರಭಾರಿ ರಾಧಾಕೃಷ್ಣ ಬೂಡಿಯಾರ್, ಜಿಲ್ಲಾ ವಕ್ತಾರ. ವಿಕಾಸ್ ಪುತ್ತೂರು, ಜಿಲ್ಲಾ ಉಪಾಧ್ಯಕ್ಷ ರಾದ ಚಂದ್ರಹಾಸ್ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿ ಗಳಾದ ಸತೀಶ್ ಕುಂಪಲ,ನಮಿತಾ ಶ್ಯಾಮ್, ಕ್ಷೇತ್ರ ಚುನಾವಣಾ ಸಂಬಾಲಕ ಚಂದ್ರಶೇಖರ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಗಳಾದ ಮೋಹನ್ ರಾಜ್ ಕೆ.ಆರ್. ಮತ್ತು ಮನೋಜ್ ಆಚಾರ್ಯ ಉಪಸ್ಥಿತರಿದ್ದರು.