UN NETWORKS
ಮಂಗಳೂರು: ಕಡಲತೀರ ಕರಾವಳಿ ಕೋಮುದಳ್ಳುರಿಗೆ ಸಿಲುಕಿ ನಲುಗಿ ಹೋಗಿವೆ.ಒಂದು ಕಾಲದಲ್ಲಿ ಬುದ್ದಿವಂತರ ಜಿಲ್ಲೆ,ಶಾಂತಿಪ್ರಿಯ ಜಿಲ್ಲೆ ಎಂದು ಕರೆಯಲ್ಪಡುತ್ತಿದ್ದ ದಕ್ಷಿಣ ಕನ್ನಡ ಅಶಾಂತಿಯ ಬೀಡಾಗಿದೆ.ಕರಾವಳಿಯಲ್ಲಿ ಭಯದ ವಾತಾವರಣ ನಿರ್ಮಾಣಗೊಂಡು ಪದೇ ಪದೇ ಶಾಂತಿ ಕದಡುವ ಕೆಲಸ ನಡೆಯುತ್ತಲೇ ಇದೆ.ಕಾರಣವಿಲ್ಲದ ತಪ್ಪಿಗೆ ಕೋಮುಖ ವ್ಯಾಘ್ರಗಳ ಹಟ್ಟಹಾಸಕ್ಕೇ ಅಮಾಯಕರ ಜೀವಗಳು ಬೀಳುತ್ತಲೇ ಇವೆ.ಕರಾವಳಿಯ ಕಣ್ಣೀರಿಗೆ ಕಾರಣರು ಯಾರು ಎಂಬ ಪ್ರಶ್ನೆ ಮೂಡಿದಾಗ ಅದಕ್ಕೆ ಸರಿಯಾದ ಉತ್ತರವೇ ಸಿಗದಂತಾಗಿದೆ.
ದೀಪಕ್ ರಾವ್ ತನ್ನ ಜೀವನಕ್ಕಾಗಿ ಮಜೀದ್ ಎಂಬ ಮುಸ್ಲಿಂ ವ್ಯಕ್ತಿಯೊಬ್ಬರ ಜೊತೆ ಕೆಲಸ ಮಾಡುತಿದ್ದು ಹತ್ಯೆಯಾದ ಸಂದರ್ಭದಲ್ಲಿ ಪೊ ಲೀಸರಿಗೆ ಫೋನ್ ಮಾಡಿ ಅತ್ಯಂತ ಕ್ರೋರವಾಗಿ ಹತ್ಯೆ ನಡೆಸಿದ ಪರಾರಿಯಾದ ಆರೋಪಿಗಳನ್ನು ಸೆರೆ ಹಿಡಿಯಲು ಸಹಕಾರ ನೀಡುತ್ತಾರೆ.ಅದೂ ಅಲ್ಲದೆ ಸಾವಿನ ದವಡೆಯಲ್ಲಿದ್ದ ದೀಪಕ್ ರಾವ್ ಬಾಯಿಗೆ ನೀರನ್ನು ಕೊಡುತ್ತಾರೆ.
1993 ರಲ್ಲಿ ಕೋಮುಗಲಭೆಯಾದ ಸಂದರ್ಭದಲ್ಲಿ ಪ್ರಭಾಕರ್ ಎಂಬವರಿಗೆ ದೂರದ ಸೌದಿ ಅರೇಬಿಯಾದಲ್ಲಿ ಕೆಲವರು ಹಲ್ಲೆ ನಡೆಸಲು ಯ ತ್ನಿಸಿದ ಸಂದರ್ಭದಲ್ಲಿ ಇದೆ ಬಷೀರ್ ತಡೆದಿದ್ದರು ಎನ್ನಲಾಗಿದೆ.ಈ ಎಲ್ಲ ಘಟನೆಗಳನ್ನು ನೋಡಿದಾಗ ಕರಾವಳಿಯ ಅಮಾಯಕ ಕಣ್ಣೀರಿಗೆ ಕಾರಣರು ಎಂಬ ಪ್ರಶ್ನೆ ಬುದ್ದಿವಂತರೆಂದು ಕರೆಸಲ್ಪಡುವ ನಮ್ಮ ನಿಮ್ಮಲ್ಲಿ ಮೂಡುವುದು ಸಹಜ.ಕರಾವಳಿಯ ಜನರು ನಿಜವಾಗಲೂ ಶಾಂತಿ ಪ್ರಿಯರೇ?.ಕರಾವಳಿಯ ಜನರಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆಯೇ?.
ಹೌದು ಕಳೆದೆರಡು ದಿನಗಳ ಘಟನೆಗಳನ್ನು ನೋಡಿದಾಗ ಹಿಂದೂ ಮುಸ್ಲಿಂ ಎರಡೂ ಧರ್ಮದ ಜನರಲ್ಲೂ ಸೌಹಾರ್ದ ಮನೋಭಾವವಿದೆಎಂಬುದು ಸಾಬೀತಾಗಿದೆ.ಆದರೆ ಮತ್ಯಾಕೆ ಶಾಂತಿಪ್ರಿಯ ಜಿಲ್ಲೆಯಲ್ಲಿ ಪದೇ ಪದೇ ಅಶಾಂತಿಯ ಹೊಗೆಯಾಗುತ್ತಿದೆ ಎಂಬುದನ್ನು ಬುದ್ಧಿವಂತರಾದ ನಾವು ನೀವುಗಳು ಚಿಂತಿಸಬೇಕಾಗಿದೆ.
ರಾಜಕೀಯ ಬೆಲೆ ಬೇಯಿಸಲು ರಾಜಕೀಯ ಪಕ್ಷಗಳು ಕರಾವಳಿಯಲ್ಲಿ ಹೆಣದ ರಾಜಕೀಯ ಮಾಡಿತ್ತಿವೆಯೇ?.ಕರಾವಳಿಯ ಅಮಾಯಕರ ಕಣ್ಣೀರಿಗೆ ರಾಜಕೀಯ ಪಕ್ಷಗಳೇ ಕಾರಣವಾಗುತ್ತಿದೆ ಎಂದನಿಸುದಿಲ್ಲವೇ.
ಇತಿಹಾಸ ಪುಟಗಳನ್ನೂ ಒಮ್ಮೆ ನೋಡಿದಾಗ ಕೇವಲ ಅಮಾಯಕ ಬಡವರ ಹತ್ಯೆಗಲ್ಲಾಗಿವೆ ಹೊರತು ಶ್ರೀಮಂತ ರಾಜಾಕೀಯ ಕುಟುಂಬದ ವ್ಯಕ್ತಿಗಳ ಹತ್ಯೆಗಳಾಗಿವೆಯೇ??
ಕೇವಲ ರಾಜಕೀಯ ಲಾಭಕ್ಕಾಗಿ ಕರಾವಳಿಯ ಹಿಂದೂ ಮುಸ್ಲಿಮರ ಮದ್ಯೆ ವಿಷದ ಬೀಜವನ್ನು ಬಿತ್ತಿ ಎಳೆದಿರುವ ಬಲೆಯಲ್ಲಿ ಬಿದ್ದು ಅಮಾಯಕರ ಸಾವಿಗೆ ಕಾರಣರಾಗದೆ ಕರಾವಳಿಯಲ್ಲಿ ಮತ್ತೆ ಶಾಂತಿ ಸಹಬಾಳ್ವೆ ಸಾಮರಸ್ಯದ ಜೀವನ ಸಾಗಿಸೋಣ.ಯಾವುದೇ ವದಂತಿಗಳಿಗೆ ಬಲಿಬೀಳದೆ ಈ ಸಮಾಜವನ್ನು ಹೊಡೆಯುವ ಕೈಗಳಾಗದೆ,ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಕೈಗಳಾಗೋಣ.ಈ ಸಮಾಜ ನಮಗೇನು ನೀಡಿದೆ ಎಂದು ಚಿಂತಿಸೋದಕ್ಕಿಂತ ಸಮಾಜಕ್ಕಾಗಿ ನಾವೇನು ನೀಡಿದ್ದೇವೆ ಅನ್ನೋದನ್ನ ಚಿಂತಿಸೋಣ.ಬನ್ನಿ ನಾವೆಲ್ಲರೂ ಪಕ್ಷ,ಜಾತಿ,ಮತ,ಪಂಗಡ ಮರೆತು ಕರಾವಳಿಯಲ್ಲಿ ಮತ್ತೆ ಶಾಂತಿ ಸಹಬಾಳ್ವೆ ಸಾಮರಸ್ಯಕ್ಕಾಗಿ ಕೈಜೋಡಿಸೋಣ.