

ಉಳ್ಳಾಲ: ಪೆಹಲ್ಗಾಮ್ ಘಟನೆ ಇಡೀ ಮಾನವ ಕುಲಕ್ಕೆ ನೋವಾಗುವ ಘಟನೆ. ಭಾರತೀಯರು ಎಂದಿಗೂ ಇಂತಹ ಕೃತ್ಯವನ್ನು ಸಹಿಸಲಾರರು. ಮೃತ ಕುಟುಂಬಸ್ಥರಿಗೆ ದು:ಖವನ್ನು ಸಹಿಸುವ ಶಕ್ತಿಯನ್ನು ದೇವರು ಒದಗಿಸಲಿ, ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ದೇವರ ಅನುಗ್ರಹವಿರಲಿ ಎಂದು ಕೆಥೊಲಿಕ್ ಸಭಾ ಸ್ತ್ರೀ ಸಂಘಟನಾ ಅಧ್ಯಕ್ಷೆ ಪ್ರಮೀಳಾ ಡಿಸೋಜ ಹೇಳಿದ್ದಾರೆ.
ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಇದರ ವತಿಯಿಂದ ತೊಕ್ಕೊಟ್ಟು ಫ್ಲೆöÊಓವರ್ ಕೆಳಗಡೆ ಜರಗಿದ ಪಹಲ್ಗಾಮ್ ಭಯೋತ್ಪಾಧಕರ ದಾಳಿಗೆ ಬಲಿಯಾದವರ ಗೌರವಾರ್ಥವಾಗಿ ಹಾಗೂ ಒಗ್ಗಟ್ಟಿನ ಸಂಕೇತವಾಗಿ ಮೊಂಬತ್ತಿ ನಡಿಗೆ ಹಾಗೂ ಮೌನ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, 26 ಜನರನ್ನು ಕೊಲ್ಲುತ್ತಾರೆ, 400 ಕೆ.ಜಿ ಆರ್ ಡಿಎಕ್ಸ್ ಹೊಡೆಯುತ್ತಾರೆ ಎಂದಾದಲ್ಲಿ ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಭಾರತದ ಇತಿಹಾಸದಲ್ಲಿ ಮರೆಯಲಾಗದ ಘಟನೆ, ವಿಷಯವನ್ನು ಯಾವ ಧರ್ಮದವರೂ ಒಪ್ಪಲು ತಯಾರಿಲ್ಲ, ಕೃತ್ಯ ಎಸಗಿದವರಿಗೆ ಜಾತಿಯಿಲ್ಲ ಅವರು ಭಯೋತ್ಪಾದಕರು ಜಾತಿ ಮಾತ್ರ. ಕಾಶ್ಮೀರ ಅಂದಲ್ಲಿ ಭವ್ಯಭಾರತದ ಪರಂಪರೆಯ ಜಾಗ. ಸುತ್ತಾಡಲು ಬಹಳಷ್ಟು ಜನರಿಗೆ ಇಷ್ಟಪಡುತ್ತಾರೆ. ಅಂತಹ ಸ್ಥಳಕ್ಕೆ ಭೇಟಿ ಕೊಟ್ಟ ನವವಧು, ಮಡದಿಯ ಎದುರು ಪತಿಯ ಹತ್ಯೆ ನಡೆಸುವವರನ್ನು ಮಾನವ ಕುಲ ಒಪ್ಪಲು ಸಾಧ್ಯವಿಲ್ಲ. ಅವರು ಮೃಗಕ್ಕೆ ಸಮಾನವಾದವರು. ಭಯೋತ್ಪಾಧಕೆರು ಬಂದೂಕು ಹಿಡಿದುಕೊಂಡು ಬರುವಾಗ ಕೇಂದ್ರ ಸರಕಾರ ಎಲ್ಲಿದೆ ?. 400 ಕೆ.ಜಿ ಆರ್ ಡಿ ಎಕ್ಸ್ ಸ್ಫೋಟವಾಗಲೂ ಕೇಂದ್ರ ಸರಕಾರ ತಡೆಯಲು ವಿಫಲವಾಯಿತು. ಇದೆಲ್ಲಾ ಪ್ರಕರಣಗಳನ್ನು ಗಮನಿಸುವಾಗ ವೈಫಲ್ಯತೆ ಎದ್ದುಕಾಣುತ್ತಿದ್ದು, ಇಡೀ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದರು.
ಕ್ಯಾಥಲಿಕ್ ಸಭಾ ಮಂಗಳೂರು ಇದರ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಮಾತನಾಡಿ, ಪೆಹಲ್ಗಾಮ್ ಘಟನೆಯಲ್ಲಿ ಕೇಂದ್ರ ಸರಕಾರ ವಿಫಲತೆಯನ್ನು ತಲೆಮರೆಸಿಕೊಳ್ಳಲು ಒಂದು ಮತದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದೆ. ಇಡೀ ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ ವಿಫಲಗೊಂಡಿರುವುದು ಎದ್ದುಕಾಣುತ್ತಿದೆ ಎಂದರು.
ಈ ಸಂದರ್ಭ ಎನೆಸ್ಯುಐ ಅಧ್ಯಕ್ಷ ಸಾಹಿಲ್ , ಮುಖಂಡರಾದ ಪ್ರಕಾಶ್ ಪಿಂಟೋ, ಮನ್ಸೂರ್ ಮಂಚಿಲ, ಸಂಘಟಕ ಸಫ್ವಾನ್ ಕೆರೆಬೈಲ್, ಸುರೇಶ್ , ಆಸೀಫ್ , ಕಿಂಗ್ಸ್ ಕಲ್ಲಾಪು ಅಧ್ಯಕ್ಷ ತ್ವಾಹಿದ್ ಅಹಮ್ಮದ್, ರೀಚಲ್ ಚಾರಿಟೇಬಲ್ ಅಧ್ಯಕ್ಷ ಸಿರಿಲ್ ರಾಬರ್ಟ್ ಡಿಸೋಜ, ಡೊನಾಲ್ಡ್ ಪಿಂಟೋ, ರೊನಾಲ್ಡ್ ವೇಗಸ್, ಹರಿಶ್ಚಂದ್ರ, ಸಂತೋಷ್ ಮಾಡೂರು, ಬ್ರಿಜೇಶ್ ಚೆಂಬುಗುಡ್ಡೆ, ಡೇಸಿ ಕೆರೆಬೈಲ್ , ಮಾಶೂಕ್ ಬೀಜಕಟ್ಟೆ, ಖಾದರ್ ಕಲ್ಲಾಪು, ಸಿಮಾಕ್ ಕೆರೆಬೈಲ್ ಮೊದಲಾದವರು ಉಪಸ್ಥಿತರಿದ್ದರು.