
ಕೋಟೆಕಾರು : ಇಲ್ಲಿನ ಬಗಂಬಿಲ ಪರಿಸರದಲ್ಲಿ ಕರ್ಯಾಚರಿಸುತ್ತಿರುವ ಅಸಿಸ್ಸಿ ಶಾಲೆ ಸಮೀಪವೇ ಇರುವ ಸರಕಾರಿ ಜಮೀನು ಸರ್ವೆ ನಂಬರ್ 301/3 ರ 1.50 ಎಕರೆ ಜಮೀನಿನಲ್ಲಿ ಉಳ್ಳಾಲ ತಾಲೂಕು ತಹಶೀಲ್ದಾರ್ ಅವರು ಎಸ್ ಟಿಪಿ, ಎಫ್ಎಸ್ಟಿಪಿಗೆ ಜಾಗವನ್ನು ಮೀಸಲಿರಿಸುವಂತೆ ಪಟ್ಟಣ ಪಂಚಾಯತ್ ಗೆ ಆದೇಶಿಸಿದ್ದು, ಇದರಿಂದ ಶಾಲೆ ಕಲಿಯುವ ಸಾವಿರದಷ್ಟು ವಿದ್ಯಾರ್ಥಿಗಳ ಬದುಕಿನ ಜೊತೆಗೆ ತಹಶಿಲ್ದಾರರು ಚೆಲ್ಲಾಟವಾಡುತ್ತಿದ್ದಾರೆ ಅನ್ನುವ ಆರೋಪ ಕೇಳಿಬಂದಿದೆ.
ವಸತಿ ಪ್ರದೇಶವಾಗಿರುವ ಬಗಂಬಿಲ ಪರಿಸರದಲ್ಲಿ ಅನೇಕ ಮನೆಗಳು, ಕೃಷಿ ಭೂಮಿಯನ್ನು ಪ್ರದೇಶ ಒಳಗೊಂಡಿದೆ. ಪ್ರಮುಖವಾಗಿ 5ರ ಹರೆಯದಿಂದ 16ರ ಆಸುಪಾಸಿನ ಹರೆಯದ ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ. ಆದರೆ ಉದ್ದೇಶಿತ ಜಮೀನಿನಲ್ಲಿ ಎಸ್ ಟಿಪಿ ನಿರ್ಮಾಣವಾದಲ್ಲಿ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾನಿಕಾರಕ ವಾಯುಗಳಾದ ಮಿಥೇನ್ , ಹೈಡ್ರೋಜನ್ ಸಲ್ಪೈಡ್ ಮುಂತಾದ ದುರ್ವಾಸನೆ ನೀಡುವ ಮತ್ತು ವಿಷಕಾರಿ ಅನಿಲಗಳು ಹೊರ ಬೀಳುತ್ತವೆ. ಇದು ಶ್ವಾಸಕೋಶದ ಸಮಸ್ಯೆಗಳಿಗೆ ಕಾರಣವಾಗಬಹುದು. ಸುತ್ತಲಿನ ವಾತಾವರಣದ ಗುಣಮಟ್ಟ ಹದಗೆಡಿಸುತ್ತದೆ. ಜನರಲ್ಲಿ ಅಸ್ವಸ್ಥತೆ, ತಲೆ ಸುತ್ತು, ಉಂಟುಮಾಡಬಹುದು. ಚಿಕಿತ್ಸೆ ಸರಿಯಾಗಿ ಆಗದ ನೀರನ್ನು ನದಿಗೆ ಅಥವಾ ನೆಲಕ್ಕೆ ಬಿಡುವುದು ಜಲಮೂಲಗಳನ್ನು ಮಾಲಿನ್ಯಗೊಳಿಸುತ್ತದೆ. ನೀರಿನ ಜೀವಿಗಳಿಗೆ ಹಾನಿ, ಜೀವವೈವಿಧ್ಯದ ನಾಶ,ನೆಲದ ಗುಣಮಟ್ಟ ಕುಸಿಯುವುದು, ಕೃಷಿಗೆ ತೊಂದರೆ, ಸ್ಥಾವರದಿಂದ ಬರುವ ಯಂತ್ರಗಳ ಶಬ್ದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟುಮಾಡಬಹುದು, ಎಸ್ಸ್ಟಿಪಿ ಸುತ್ತಲಿನ ಪ್ರದೇಶ ಆಕರ್ಷಕವಾಗಿರದೆ ಕಸಕಡ್ಡಿಯ ಗುಂಪಾಗಿ ಕಾಣಬಹುದು, ಹೊರ ಬೀಳುವ ಕೀಟಾಣುಗಳು, ಬಾಕ್ಟೀರಿಯಾಗಳು ನೀರಿನ ಮೂಲಕ ಹರಡಬಹುದು
ಚರ್ಮದ ಅಲರ್ಜಿಗಳು, ಕುಡಿಯುವ ನೀರಿನಲ್ಲಿ ವೈರಲ್ ಸೋಂಕುಗಳು, ಸೊಳ್ಳೆಗಳ ಉತ್ಪತ್ತಿಗೆ ಸಹ ಕಾರಣವಾಗಬಹುದು, ಸ್ಥಳೀಯವಾಸಿ ಜನರ ಆಸ್ತಿ ಮೌಲ್ಯ ಇಳಿಯಬಹುದು, ಆರೋಗ್ಯ ಸಮಸ್ಯೆಗಳ ಕಾರಣದಿಂದ ವೈದ್ಯಕೀಯ ವೆಚ್ಚ ಹೆಚ್ಚಾಗಬಹುದು.