Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
UllalavaniUllalavani
Home»All News»ಕೊಂಡಾಣ ಕ್ಷೇತ್ರದಲ್ಲಿ ಮುತ್ತಣ್ಣ ಶೆಟ್ಟಿ ಗುರಿಕಾರ ಸ್ಥಾನ ನಿರ್ವಹಿಸಬಾರದು , ಅಪರ ಜಿಲ್ಲಾಧಿಕಾರಿ ಆದೇಶ: ಕೃಷ್ಣ ಶೆಟ್ಟಿ ತಾಮಾರ್
All News

ಕೊಂಡಾಣ ಕ್ಷೇತ್ರದಲ್ಲಿ ಮುತ್ತಣ್ಣ ಶೆಟ್ಟಿ ಗುರಿಕಾರ ಸ್ಥಾನ ನಿರ್ವಹಿಸಬಾರದು , ಅಪರ ಜಿಲ್ಲಾಧಿಕಾರಿ ಆದೇಶ: ಕೃಷ್ಣ ಶೆಟ್ಟಿ ತಾಮಾರ್

UllalaVaniBy UllalaVaniMay 20, 2025Updated:May 20, 2025No Comments3 Mins Read
Facebook Twitter Pinterest LinkedIn Tumblr Email WhatsApp
Follow Us
Facebook Instagram YouTube WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ: ಕಳೆದ ವರ್ಷ ಶ್ರೀ ಕ್ಷೇತ್ರ ಕೊಂಡಾಣದಲ್ಲಿ ಶೇ.80 ರಷ್ಟು ಕಾಮಗಾರಿ ಮುಗಿದಿದ್ದ ಭಂಡಾರ ಮನೆಯನ್ನು ಒಡೆದುಹಾಕಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಗುರಿಕಾರ ಮುತ್ತಣ್ಣ ಶೆಟ್ಟಿ ಪ್ರಕರಣ ಇತ್ಯರ್ಥ ಆಗುವವರೆಗೂ  ಜಾತ್ರಾ ಸಂದರ್ಭ ಗುರಿಕಾರ ಸ್ಥಾನದಲ್ಲಿ ನಿಲ್ಲಬಾರದು ಎಂದು ಅಪರ ಜಿಲ್ಲಾಧಿಕಾರಿ, ಧಾರ್ಮಿಕ ಪರಿಷತ್ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ ಹರಕೆ ವಿಚಾರಕ್ಕೆ ಸಂಬಂಧಿಸಿ ಮುತ್ತಣ್ಣ ಅವರನ್ನು ಯಾರು ಕೂಡಾ ಸಂಪರ್ಕಿಸಬಾರದು ಎಂದು  ಶ್ರೀ ಕ್ಷೇತ್ರ ಕೊಂಡಾಣ ಇದರ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ , ಸನಾತನ ಧರ್ಮ ಜಾಗರಣಾ ಸಮಿತಿ ಅಧ್ಯಕ್ಷ  ಕೃಷ್ಣ ಶೆಟ್ಟಿ ತಾಮಾರ್ ಹೇಳಿದರು.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ನೂತವಾಗಿ ರಚಿಸಿದ ಭಂಡಾರ ಮನೆಯನ್ನು ಮಾ.3 ರಂದು ಮುತ್ತಣ್ಣ ಶೆಟ್ಟಿ ಮತ್ತು ಬಳಗ ಒಡೆದು ಹಾಕಿದೆ.  2024ರ  ಫೆ.29 ತನ್ನ ಅಧಿಕಾರ ಅವಧಿ ಮುಗಿದಿದ್ದು, ಜಿಲ್ಲಾಧಿಕಾರಿಯವರ  ಆದೇಶದಂತೆ ಕೋಟೆಕಾರು ಮುಖ್ಯಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರ ಮಾಡಲಾಗಿತ್ತು.  ಅಧಿಕಾರ ಹಸ್ತಾಂತರದ ಬೆನ್ನಲ್ಲೇ ಸರಕಾರಿ ಅನುದಾನದಿಂದ ಶೆ.80 ರಷ್ಟು ರಚನೆಯಾದ ಭಂಡಾರಮನೆಯನ್ನು ಜೆಸಿಬಿ ಮೂಲಕ ಒಡೆದುಹಾಕಲಾಗಿತ್ತು. ಈ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಉಳ್ಳಾಲ  ಪೊಲೀಸ್ ಠಾಣೆಯಲ್ಲಿ ಒಡೆದು ಹಾಕಿದ ಮುತ್ತಣ್ಣ ಶೆಟ್ಟಿ ಮತ್ತು ಬಳಗದ ವಿರುದ್ಧ  ದೂರು ದಾಖಲಿಸಿ ಪ್ರಕರಣ ದಾಖಲು ಮಾಡಲಾಗಿತ್ತು. ಅಲ್ಲದೇ  ಮಾ.4 ರಂದು ಕೋಟೆಕಾರು ಪ.ಪಂ ಮುಂಭಾಗದಲ್ಲಿ  ಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು.  ಘಟನೆ ಕುರಿತು  ಧಾರ್ಮಿಕ ಪರಿಷತ್ , ಎಡಿಸಿ ತನಿಖೆ ನಡೆಸಿ ಪ್ರಥಮ ಆರೋಪಿ ಮುತ್ತಣ್ಣ ಶೆಟ್ಟಿಗೆ ಮಾ.4 ರಂದು ನೋಟೀಸು ನೀಡಲಾಗಿತ್ತು. ಆರೋಪಿತ ಮುತ್ತಣ್ಣ ಶೆಟ್ಟಿ ವಿರುದ್ಧ   ಕ್ರಿಮಿನಲ್ ಕೇಸು ದಾಖಲಾಗಿರುವುದರಿಂದ ಗುರಿಕಾರ ಸ್ಥಾನವನ್ನು ಪವಿತ್ರ ಕ್ಷೇತ್ರದಲ್ಲಿ  ನಿರ್ವಹಿಸಬಾರದು ಎಂದು ಫೆ.27  ಆದೇಶ ಬಂದಿದೆ. ಪ್ರಕರಣ  ಇತ್ಯರ್ಥ ಆಗದೇ ಗುರಿಕಾರ ಸ್ಥಾನದಲ್ಲಿ ನಿಲ್ಲಬಾರದೆಂಬ ಆದೇಶ ಆಯುಕ್ತರಿಂದ ಹೊರಡಿಸಲಾಗಿದೆ.  ಆದರೆ  ವೈದ್ಯನಾಥನ ವಲಸರಿ ಜಾತ್ರೆಯಲ್ಲಿ ಆದೇಶ ಉಲ್ಲಂಘಿಸಿ ಮುಂಡಾಸು ಕಟ್ಟಿ ಮುತ್ತಣ್ಣ ಶೆಟ್ಟಿ ನಿಂತಿದ್ದಾರೆ. ನೂತನ ವ್ಯವಸ್ಥಾಪನಾ ಸಮಿತಿಯು ಕಾನೂನು ಉಲ್ಲಂಘಿಸದಂತೆ ನೂತನ ವ್ಯವಸ್ಥಾಪನಾ ಸಮಿತಿಗೆ ಆದೇಶ ಜಾರಿ ಮಾಡಲಾಗಿದೆ.  ಕೃತ್ಯ ನಡೆದ ದಿನದಂದು  ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವದ ಗರ್ಭಗುಡಿ ಎದುರು ಪ್ರಾರ್ಥನೆ ನಡೆಸಿದ್ದೇವೆ. ಪ್ರಾರ್ಥನೆಯ ಫಲವಾಗಿ ಮುಖ್ಯ ಸ್ಥಾನದಲ್ಲಿ ನಿಲ್ಲದಂತೆ ಆದೇಶ ಬಂದಿದೆ. ಕೊಂಡಾಣದ ಬಗ್ಗೆ ಮುತ್ತಣ್ಣ ಶೆಟ್ಟಿ ಬಳಿ ಹರಕೆ ರೂಪಕ್ಕೆ ಯಾರೂ ಸಂಪರ್ಕಿಸಬಾರದು. ಮುತ್ತಣ್ಣ ಶೆಟ್ಟಿಗೂ ಕೊಂಡಾಣ ಕ್ಷೇತ್ರಕ್ಕೂ ಸಂಬಂಧವಿಲ್ಲವೆAದು ಧಾರ್ಮಿಕ ಪರಿಷತ್ ನಿಂದಲೇ ಆದೇಶವಿದೆ.  5 ಸೆಂಟ್ಸ್ ಜಾಗ ಕ್ಷೇತ್ರದ ವತಿಯಿಂದ  ಖರೀದಿಸಿಲಾಗಿದ್ದು, ಇನ್ನು 5 ಸೆಂಟ್ಸ್ ದಾನಿಗಳ ಸಹಕಾರದಿಂದ ಸರಕಾರಕ್ಕೆ   43,070 ರೂ.  ಪಾವತಿಸಿಯೇ ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದು ಕಟ್ಟಡವನ್ನು ಕಟ್ಟಲಾಗಿದೆ. ಹಾಗಾಗಿ ಕಟ್ಟಿದಂತಹ ಕಟ್ಟಡವನ್ನು   ಮುತ್ತಣ್ಣ ಶೆಟ್ಟಿ ಮಾತ್ರವಲ್ಲ ಜಿಲ್ಲಾಧಿಕಾರಿಗೆ ಒಡೆದು ಹಾಕುವ ಹಕ್ಕಿಲ್ಲ.  ಮೂರು ವರ್ಷದ ಅವಧಿಯಲ್ಲಿ   ಜಾತ್ರಾ ಸಂದರ್ಭ ಪ್ರತಿ ದಿನ  18,8,432 ಲಕ್ಷ ರೂ. ಆದಾಯ ಕಾಣಿಕೆ ಹುಂಡಿಗೆ ಭಕ್ತರಿಂದ ಬರುತ್ತದೆ. ಪ್ರತಿದಿನ ಹಣವನ್ನು ಬ್ಯಾಂಕಿಗೆ  ತನ್ನ ಅಧಿಕಾರದ ಅವಧಿಯಲ್ಲಿ ಕಟ್ಟಲಾಗಿದೆ. ಆದರೆ ಮುತ್ತಣ್ಣ ಶೆಟ್ಟಿ ನೇತೃತ್ವದಲ್ಲಿದ್ದಂತಹ ಸಮಿತಿ ಬ್ಯಾಂಕಿಗೆ ನಗದನ್ನೇ ಪಾವತಿಸಿಲ್ಲ, ಲೆಕ್ಕ ಪತ್ರವನ್ನೇ ಮಂಡಿಸಿಲ್ಲ. ಸ್ವಾರ್ಥದ ಲಾಭಕ್ಕಾಗಿ ಮಾಡಿದಂತಹ  ವ್ಯವಸ್ಥೆಯಿಂದಾಗಿ ತಗಾದೆ ಎದ್ದಿದೆ. 10 ವರ್ಷಗಳ ಹಿಂದೆ ಖಾಸಗಿ ಫೈನಾನ್ಸ್ ನವರ ಕೈಯಲ್ಲಿ ರೂ. 10 ಲಕ್ಷ ಹಣವನ್ನು ಮುತ್ತಣ್ಣ ಶೆಟ್ಟಿ ನೀಡಿದ್ದು, ಅದರ  ಲಾಭ ತಿಂಗಳಿಗೆ ರೂ. 30,000 ಬರುತ್ತಿದೆ ಎಂಬುದು ಫೈನಾನ್ಸ್ ನವರೇ ತನ್ನ ಬಳಿ ಹೇಳಿದ್ದಾರೆ. 1931 ರಲ್ಲಿ ಮದ್ರಾಸ್ ಸರಕಾರದ ಅವಧಿಯಲ್ಲಿ ಕ್ಷೇತ್ರ ಎಂಡೋಮೆಂಟ್ ಆಗಿದೆ. 1950 ರಲ್ಲಿ ಅಂದಿನ ಅಧಿಕಾರಿಗಳು ಹೊರಡಿಸಿರುವ ಆದೇಶದ  ಪ್ರತಿಯಲ್ಲಿ ಭಂಡಾರಮನೆ, ಮತ್ತು ಭದ್ರತಾ ಕೊಠಡಿ ದೈವಸ್ಥಾನದ  ಪಕ್ಕದಲ್ಲೇ ಆಗಬೇಕು ಅನ್ನುವುದು ಇದೆ. ಅದರ ಪ್ರಕಾರ  ಭಂಡಾರಮನೆಯನ್ನು ದೈವಸ್ಥಾನದ ಸಮೀಪದಲ್ಲೇ ಕಟ್ಟಲಾಗಿತ್ತು ಎಂದರು.
ಮೇ 21ರಿಂದ 23 ವರಗೆ ಕೊಂಡಾಣ ಜಾತ್ರೆ
ಮೇ.21 ,22,23 ಶ್ರೀ ಕ್ಷೇತ್ರ ಕೊಂಡಾಣದಲ್ಲಿ ವಾರ್ಷಿಕ ನೇಮ ಜರಗಲಿದೆ. ಭಂಡಾರ ಬರುವುದು, ಬಂಟ ನೇಮ ಹಾಗೂ ರಾತ್ರಿ ಬಂಡಿ ಉತ್ಸವ ಜರಗಲಿದೆ. ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಕಡೇ ಬಂಡಿ ಉತ್ಸವವಾಗಿದೆ. ಅತ್ಯಂತ ಕಾರಣೀಕ ಕ್ಷೇತ್ರ ಕೊಂಡಾಣ ಆಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ರಮೇಶ್ ಕೊಲ್ಯ, ಜಯಂತ್ ಸಂಕೊಳಿಗೆ ಉಪಸ್ಥಿತರಿದ್ದರು.

Share this:

  • Facebook
  • X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಳೆ ಹಾನಿಗೆ ತ್ವರಿತ ಸ್ಪಂದನೆ ಅಗತ್ಯ – ಸಚಿವ ದಿನೇಶ್ ಗುಂಡೂರಾವ್

June 19, 2025

ಜಿಲ್ಲಾಸ್ಪತ್ರೆಗಳಲ್ಲಿ ಮಾದಕ ವಸ್ತು ಪರೀಕ್ಷೆಗೆ ಚಿಂತನೆ – ಸಚಿವ ದಿನೇಶ್ ಗುಂಡೂರಾವ್

June 19, 2025

ಉಳ್ಳಾಲ ಠಾಣೆಯಿಂದ ವರ್ಗಾವಣೆಗೊಂಡ ಆರು ಮಂದಿ ಸಿಬ್ಬಂದಿಗೆ ಬೀಳ್ಕೊಡುಗೆ

June 18, 2025

Comments are closed.

ಸಂಪರ್ಕಿಸಿ

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025

ಉದ್ದಿಮೆ ಪರವಾನಿಗೆ ಕಡ್ಡಾಯ : ನವೀಕರಣ ಇಲ್ಲದವರಿಗೆ ದಂಡ

June 11, 2025

ದೇಶದಲ್ಲೇ ಮೊದಲ ಬಾರಿಗೆ ಬಮೂಲ್ ನಿಂದ ಬಯೋಡಿಗ್ರೇಡೆಬಲ್ ಹಾಲು ಪೊಟ್ಟಣದ ಪ್ರಾರಂಭ – ಡಿ.ಕೆ. ಸುರೇಶ್ ಬಮೂಲ್ ನಿರ್ದೇಶಕ

June 10, 2025

ಅಡಿಕೆ ಹಾಳೆ ಉತ್ಪನ್ನಗಳ ಮೇಲೆ ಅಮೆರಿಕ ನಿರ್ಬಂಧ : ಉದ್ದಿಮೆಗಳಿಗೆ ಸಂಕಷ್ಟ

June 10, 2025
All News

ಮಳೆ ಹಾನಿಗೆ ತ್ವರಿತ ಸ್ಪಂದನೆ ಅಗತ್ಯ – ಸಚಿವ ದಿನೇಶ್ ಗುಂಡೂರಾವ್

By UllalaVaniJune 19, 20250

ಮಂಗಳೂರು: ಮಳೆಗಾಲದಲ್ಲಿ ಸಂಭವಿಸುವ ಅವಘಡಗಳಿಗೆ ತಕ್ಷಣ ಸ್ಪಂದಿಸಬೇಕು. ಪರಿಹಾರ ಧನ ವಿತರಣೆಯಲ್ಲಿ ಯಾವ ಕಾರಣಕ್ಕೂ ವಿಳಂಬವಾಗಬಾರದು. ಹಾನಿ, ಅನಾಹುತಗಳಿಗೆ ಸ್ಪಂದಿಸದೆ…

Share this:

  • Facebook
  • X

Like this:

Like Loading...

ಜಿಲ್ಲಾಸ್ಪತ್ರೆಗಳಲ್ಲಿ ಮಾದಕ ವಸ್ತು ಪರೀಕ್ಷೆಗೆ ಚಿಂತನೆ – ಸಚಿವ ದಿನೇಶ್ ಗುಂಡೂರಾವ್

June 19, 2025

ಉಳ್ಳಾಲ ಠಾಣೆಯಿಂದ ವರ್ಗಾವಣೆಗೊಂಡ ಆರು ಮಂದಿ ಸಿಬ್ಬಂದಿಗೆ ಬೀಳ್ಕೊಡುಗೆ

June 18, 2025

ಮನೆ ತೊರೆಯುವಂತೆ ನೋಟೀಸ್ ನೀಡುವ ಹರೇಕಳ ಗ್ರಾಮಪಂಚಾಯತ್‌ ಜಿಲ್ಲಾಡಳಿತದ ಜೊತೆಗೆ ಸೇರಿ ಶಾಶ್ವತ ಪರಿಹಾರ ಒದಗಿಸಲಿ, ಮನೆ ಬಿಡುತ್ತೇವೆ : ಕಡವಿನಬಳಿ ನಿವಾಸಿಗಳ ಅಳಲು

June 18, 2025
1 2 3 … 1,495 Next
Automatic YouTube Gallery

ಬ್ರಹ್ಮಾವರ : ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು

ಬ್ರಹ್ಮಾವರ : ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು
#ullalavani #news #brahmavara
ಬ್ರಹ್ಮಾವರ : ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು
Now Playing
ಬ್ರಹ್ಮಾವರ : ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು
ಬ್ರಹ್ಮಾವರ : ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ವಿದ್ಯಾರ್ಥಿಗಳು ...
ಬ್ರಹ್ಮಾವರ : ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು
#ullalavani #news #brahmavara
ಜೂ.23 ಜಿಲ್ಲೆಯಾದ್ಯಂತ ಕಾಂಗ್ರೆಸ್ ಸರಕಾರದ ಧೋರಣೆ ವಿರುದ್ಧ ಪ್ರತಿಭಟನೆ : ಸತೀಶ್ ಕುಂಪಲ
Now Playing
ಜೂ.23 ಜಿಲ್ಲೆಯಾದ್ಯಂತ ಕಾಂಗ್ರೆಸ್ ಸರಕಾರದ ಧೋರಣೆ ವಿರುದ್ಧ ಪ್ರತಿಭಟನೆ : ಸತೀಶ್ ಕುಂಪಲ
ಜೂ.23 ಜಿಲ್ಲೆಯಾದ್ಯಂತ ಕಾಂಗ್ರೆಸ್ ಸರಕಾರದ ಧೋರಣೆ ವಿರುದ್ಧ ಪ್ರತಿಭಟನೆ : ಸತೀಶ್ ...
ಜೂ.23 ಜಿಲ್ಲೆಯಾದ್ಯಂತ ಕಾಂಗ್ರೆಸ್ ಸರಕಾರದ ಧೋರಣೆ ವಿರುದ್ಧ ಪ್ರತಿಭಟನೆ : ಸತೀಶ್ ಕುಂಪಲ
#Ullalavani #news #SathishKumpala #BJP #
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d