Site icon Ullalavani

ಕಾರು ಅಪಘಾತ: ಗಾಯಾಳು ವಿದ್ಯಾರ್ಥಿ ಸಾವು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ದೇರಳಕಟ್ಟೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕೇರಳ ಕಣ್ಣೂರಿನ ಪಯ್ಯಂಬಲ್ ರಾಯಲ್ ಹೆಲೆನ್ ಫ್ಲಾಟಿನ ನಿವಾಸಿ ವಿನೋದ್ ವರ್ಗೀಸ್ ಎಂಬವರ ಪುತ್ರ ಮ್ಯಾಥ್ಯಿವ್ ವರ್ಗೀಸ್ (20) ಮೃತ ವಿದ್ಯಾರ್ಥಿ. ಇವರು ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ತೃತೀಯ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ಮಾ.4 ಶುಕ್ರವಾರ ದೇರಳಕಟ್ಟೆಯಿಂದ ಕುತ್ತಾರು ಕಡೆಗೆ ತೆರಳುತ್ತಿದ್ದಾಗ ಮ್ಯಾಥಿವ್ ಚಲಾಯಿಸುತ್ತಿದ್ದ ಕಾರು ನಿತ್ಯಾನಂದನಗರ ಸಮೀಪ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು.

ಪರಿಣಾಮ ಮ್ಯಾಥಿವ್ ಮತ್ತು ಸಂಶಾದ್ ಎಂಬವರು ಗಂಭೀರವಾಗಿ ಗಾಯಗೊಂಡರೆ, ಜಾರ್ಜ್ ರೋಹನ್, ಕೌಶಿಕ್ ಥೋಮಸ್, ರಾಜು
ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಚೇತರಿಸುತ್ತಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವಿದ್ಯಾರ್ಥಿ ಹೆತ್ತವರು ವಿನೋದ್ ವರ್ಗೀಸ್ ದಂಪತಿ ಇಬ್ಬರು ಕೇರಳದಲ್ಲಿ ಖ್ಯಾತ ವೈದ್ಯರಾಗಿದ್ದು, ಕಿರಿಯ ಸಹೋದರಿ ದೇರಳಕಟ್ಟೆಯಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಅಗಲಿದ್ದಾರೆ.

Exit mobile version