Site icon Ullalavani

ದೇರಳಕಟ್ಟೆ: ರಾಷ್ಟ್ರೀಯ ವಿಜ್ಞಾನ ಸಪ್ತಾಹ-2016

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಉಭಯ ಸಾಧಕರನ್ನು ಜೀವಮಾನ ಸಾಧನೆಗಾಗಿ ನಿಟ್ಟೆ ವಿವಿ ಹಾಗೂ ಕ್ಷೇಮ ಅಕಾಡೆಮಿಯಿಂದ ರಾಷ್ಟ್ರೀಯ ವಿಜ್ಞಾನ ಸಪ್ತಾಹ-2016ರಲ್ಲಿ ಸನ್ಮಾನಿಸುವ ಮೂಲಕ ನಿಟ್ಟೆ ವಿವಿ ಶ್ಲಾಘನೀಯ ಕಾರ್ಯ ನಿರ್ವಹಿಸಿದೆ. ಉಭಯ ಸಾಧಕರ ಹಿಂದಿನ ಶ್ರಮ, ಛಲ, ಸಂಶೋಧನಾ ಯಶಸ್ಸು ಎಲ್ಲವೂ ಕ್ಷೇಮ ಸಂಶೋಧನಾ ವಿದ್ಯಾರ್ಥಿಗಳ ವಿಜ್ಞಾನವನ್ನು ಹೆಚ್ಚಿಸುವಲ್ಲಿ ಬಹಳಷ್ಟು ಪ್ರಯೋಜನವಾಗಲಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಪತಿ ಪ್ರೊ. ಡಾ| ಎಂ. ಶಾಂತಾರಾಮ್ ಶೆಟ್ಟಿ ಅಭಿಪ್ರಾಯಪಟ್ಟರು.

ರಾಷ್ಟಿ ್ರೀಯ ವಿಜ್ಞಾನ ಸಪ್ತಾಹ-2016 ಅಂಗವಾಗಿ ದೇರಳಕಟ್ಟೆಯ ಕ್ಷೇಮ ಮೆಡಿಕಲ್ ಆಕಾಡೆಮಿಯ ಸೆಮಿನಾರ್ ಹಾಲ್‍ನಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಕ್ಷೇಮ ಮೆಡಿಕಲ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಸೋಮವಾರ ನಡೆದ ವೈದ್ಯಕೀಯ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಉಭಯ ಸಾಧಕರಾದ ವೆಲ್ಲೂರು ಸಿಎಂಸಿಯ ಮೆಡಿಸಿನ್ ವಿಭಾಗದ ನಿವೃತ್ತ ಪ್ರೊ ಡಾ| ವಿ. ಐ. ಮಥನ್ ಹಾಗೂ ಪ್ರೊ. ಡಾ| ಮಿನ್ನಿ ಮಥನ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಯಾವುದೇ ಕ್ಷೇತ್ರದಲ್ಲಿ ಉದ್ದೇಶಿತ ಗುರಿಯೊಂದು ಇದ್ದಾಗ ಅದನ್ನು ತಲುಪುವುದು ಕಷ್ಟಸಾಧ್ಯವಾದರೂ ಪರಿಶ್ರಮದೊಂದಿಗೆ ಮುನ್ನಡೆದರೆ ಯಶಸ್ಸು ಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರೊ. ವಿ.ಐ. ಮಥನ್ ಅವರು ಸವೆಸಿದ ಹಾದಿ, ಕ್ರಮಿಸಿದ ದೂರ ಹಾಗೂ ಅವರ ಸಂಶೋಧನೆ
ಫಲಿತಾಂಶಗಳು ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ| ಎಸ್. ರಮಾನಂದ ಶೆಟ್ಟಿ , ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ಡೀನ್ ಹಾಗೂ ಪ್ರಾಂಶುಪಾಲ ಪ್ರೊ. ಡಾ| ಯು.ಎಸ್. ಕೃಷ್ಣ ನಾಯಕ್, ಸ್ಥಾಪಕ ಡೀನ್ ಡಾ| ಎನ್. ಶ್ರೀಧರ್ ಶೆಟ್ಟಿ , ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅ„ೀಕ್ಷಕಿ ಡಾ| ಕರುಣಾ ರಮೇಶ್ ಕುಮಾರ್ ಉಪಸ್ಥಿತರಿದ್ದರು.

ಕ್ಷೇಮ ಡೀನ್ ಪ್ರೊ. ಡಾ| ಸತೀಶ್ ಕುಮಾರ್ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಷೇಮ ಕುಲಸಚಿವ ಡಾ| ಜಯಪ್ರಕಾಶ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಪ್ರೊ. ಡಾ| ಇಂದ್ರಾಣಿ ಕರುಣಾ ಸಾಗರ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version