ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ವೀರರಾಣಿ ಅಬ್ಬಕ್ಕಳ ಪ್ರತಿಮೆ ಒಂದೆಡೆ ಧೂಳಿನಿಂದ ಮುಳುಗಿದ್ದರೆ, ಇನ್ನೊಂದೆಡೆ ಕಾಗೆ ಮಾಡಿದ ಗಲೀಜಿನಿಂದ ನೋಡಲಾಗದ ಸ್ಥಿತಿಯಲ್ಲಿದ್ದು, ಕೇವಲ ಅಬ್ಬಕ್ಕ ಉತ್ಸವ ಮತ್ತು ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ರಾಣಿ ಅಬ್ಬಕ್ಕಳ ಪ್ರತಿಮೆಗೆ ಗೌರವ ಸೀಮಿತವಾಗಿದೆ.
ತೊಕ್ಕೊಟ್ಟು-ಉಳ್ಳಾಲ ಕಾಂಕ್ರೀಟಿಕರಣ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ತೊಕ್ಕೊಟ್ಟುವಿನಲ್ಲಿ ಅಬ್ಬಕ್ಕ ಭವನ ಶೀಘ್ರದಲ್ಲೇ ನಡೆಯಲಿದೆ. ಆದರೆ ಅಪ್ರತಿಮ ವೀರರಿಗೆ ಗೌರವ ಸೂಚಿಸುವ ಸಲುವಾಗಿ ಸ್ಥಾಪಿಸಿರುವ ಪ್ರತಿಮೆಗಳಿಗೆ ಕನಿಷ್ಟ ಪಕ್ಷ ಶುಚಿಗೊಳಿಸುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗುವ ಮೂಲಕ ನೈಜ ಗೌರವವನ್ನು ವ್ಯಕ್ತಪಡಿಸಬೇಕಿದೆ.