ಮಾಡೂರು: ವ್ಯಾವಹಾರಿಕ ಅಭಿವೃದ್ಧಿ ಜತೆಗೆ ಸಮಾಜವನ್ನು ಬೆಳೆಸುವ ಕಾರ್ಯ ನಡೆಯಬೇಕಿದ್ದು, ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ತಮ್ಮಲ್ಲಿರುವ ಕೌಶಲ್ಯವನ್ನು ಬೆಳೆಸುವ ತರಬೇತಿ ಅಗತ್ಯ ಬೇಕಿದೆ ಎಂದು ಓಎನ್ ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ನ ನಿರ್ದೇಶಕ ಜೈದೀಪ್ ಘೋಷ್ ಅಭಿಪ್ರಾಯಪಟ್ಟರು.
ಅವರು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜು ( ಸ್ವಾಯುತ್ತ), ಸಂತ ಅಲೋಷಿಯಸ್ ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನ, ವ್ಯವಹಾರ ಆಡಳಿತ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಬೀರಿ ಮಾಡೂರಿನ ಅಲೋಷಿಯಸ್ ಕಾಲೇಜಿನ ಅಲೋಷಿಯಸ್ ಅರ್ತೂರ್ ಶೆಣೈ ಆಡಿಟೋರಿಯಂನಲ್ಲಿ ಬುಧವಾರದಂದು ಆಯೋಜಿಸಲಾದ ಇನ್ಸಿಗ್ನಿಯಾ-2015 ಇನೋವೇಟ್ ಇಂಡಿಯಾ ರಾಷ್ಟ್ರೀಯ ಮಟ್ಟದ ಬಿ- ಸ್ಕೂಲ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲ ಫಾ. ಸ್ವೀಬರ್ಟ್ ಡಿಸಿಲ್ವಾ ಮಾತನಾಡಿ ಕನಸ್ಸುಗಳನ್ನು ಕಾಣಲು ಮುಂದಾಗಬೇಡಿ. ಅಲ್ಪಾವಧಿಯ ಗುರಿಗಳನ್ನು ಹೊಂದುವ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬಹುದು. ಬೇರೆಯವರಲ್ಲಿ ಸಂತಸ ಮೂಡಿಸಿದಲ್ಲಿ ತಾವು ಕೂಡಾ ಜೀವನದಲ್ಲಿ ಸಂತಸವನ್ನು ಹೊಂದಬಹುದು ಎಂದರು.
ಈ ಸಂದರ್ಭ ಸಂತ ಅಲೋಷಿಯಸ್ ಸಂಸ್ಥೆಗಳ ನಿರ್ದೇಶಕ ಫಾ.ಡೆನ್ಸಿಲ್ ಲೋಬೊ ಎಸ್.ಜೆ, ಎಂಬಿಎ ಚೇರ್ ಮೆನ್ ಫಾ.ಓಸ್ವಾಲ್ಡ್ ಮಸ್ಕರೇನಸ್ ಎಸ್.ಜೆ ,ಮುಖ್ಯ ಅತಿಥಿಗಳಾಗಿದ್ದರು.
ಮ್ಯಾನೇಜ್ ಮೆಂಟ್ ಕ್ಲಬ್ ಕಾರ್ಯದರ್ಶಿ ರಾಯ್ಸ್ ಬರೆಟ್ಟೋ, ವಿದ್ಯಾರ್ಥಿ ಸಂಘಟಕ ರೋಹನ್ ಮೋನಿಸ್ ಉಪಸ್ಥಿತರಿದ್ದರು.
ಅಕಾಡೆಮಿ ಡೀನ್ ಡಾ.ರೊವೆನಾ ರೈಟ್ ಸ್ವಾಗತಿಸಿದರು. ಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ಸಂಘಟಕ ರಯಾನ್ ಡಿಸೋಜಾ ವಂದಿಸಿದರು.