Site icon Ullalavani

ಸ್ಥಾನೀಯ ಸಮಿತಿಯ ನೂತನ ಸಮಿತಿ ರಚನೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು : ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರ ತೊಕ್ಕೊಟ್ಟು ಒಳಪೇಟೆ ಇದರ 27ನೇ ಸ್ಥಾನೀಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ತೊಕ್ಕೊಟ್ಟು ಒಳಪೇಟೆ ಸುವರ್ಣ ಕಾಂಪ್ಲೆಕ್ಸ್‍ನಲ್ಲಿ ಇತ್ತೀಚೆಗೆ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಶರತ್ ತೊಕ್ಕೊಟ್ಟು ಹಾಗೂ ಉಪಾಧ್ಯಕ್ಷರಾಗಿ ದೀಪಕ್ ವಾಸುಕೀನಗರ ಮತ್ತು ಕುಮಾರಿ ಉಷಾರಾಣಿ, ಪ್ರ.ಕಾರ್ಯದರ್ಶಿಯಾಗಿ ಪ್ರವೀಣ್ ತೊಕ್ಕೊಟ್ಟು ಹಾಗೂ ಜೊತೆ ಕಾರ್ಯದರ್ಶಿಯಾಗಿ ಉಮೇಶ್ ತೊಕ್ಕೊಟ್ಟು ಮತ್ತು ಹರಿಶ್ಚಂದ್ರ ತೊಕ್ಕೊಟ್ಟು ಆಯ್ಕೆಯಾದರು.

ಉಳ್ಳಾಲ ಗ್ರಾಮದ ಅಧ್ಯಕ್ಷ ಗಣೇಶ್ ಕಾಪಿಕಾಡ್, ಕ್ಷೇತ್ರ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಕ್ಷೇತ್ರ ಉಸ್ತುವಾರಿಗಳಾದ ರಾಘವ ಉಚ್ಚಿಲ್, ಮೋಹನ್ ರಾಜ್ ಕನೀರ್ ತೋಟ, ಕೌನ್ಸಿಲರ್ ಶಶಿಕಲಾ ಎ ಶೆಟ್ಟಿ, ಕುಮಾರಿ ಗೀತಾ ಬ್ಯಾ, ಯೋಗೀಶ್ ಹಾಗೂ ಗ್ರಾಮ ಕಾರ್ಯದರ್ಶಿ ಆನಂದ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version