Site icon Ullalavani

ಬಹರೇನ್: ತೆಲಿಕೆ-ನಲಿಕೆ ಕಾರ್ಯಕ್ರಮ

ಬಹರೇನ್, ಗುರುಸೇವ ಸಮಿತಿ ಬಹರೇನ್ ಬಿಲ್ಲವಾಸ್ ತಾ.೨೯.೧೦.೨೦೧೫ ರಂದು ಇಂಡಿಯನ್ ಕ್ಲಬ್ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲ್ಪಟ್ಟಿದ್ದ ” ತೆಲಿಕೆ ನಲಿಕೆ ” ಹಾಸ್ಯ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡು ಹೊಸ ದಾಖಲೆಯನ್ನು ನಿರ್ಮಿಸಿತು, ಸುಮಾರು ೨೦೦೦ ಪ್ರೇಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಾಯಿನಾಡಿನಿಂದ ಬಂದಂತಹ ಹಾಸ್ಯ ಕಲಾವಿದರುಗಳಾದ ದೇವದಾಸ್ ಕಾಪಿಕಾಡ್, ನವೀನ ಡಿ ಪಡಿಲ್, ಬೋಜರಾಜ ವಾಮಂಜೂರು ಇವರ ಹಾಸ್ಯ ಪ್ರಹಸನಗಳು ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೆಲಾಡಿಸುವಂತೆ ಮಾಡಿತು. ತುಳು ಸೂಪರ್ ಸ್ಟಾರ್ ಅರ್ಜುನ್ ಕಾಪಿಕಾಡ್ ಹಾಗು ಚಂಡಿ ಕೋರಿ ತುಳು ಚಲನ ಚಿತ್ರದ ನಾಯಕಿ ಕರಿಷ್ಮ ಅಮಿನ್ ವೇದಿಕೆಯಲ್ಲಿ ತಮ್ಮ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸ್ಥಳೀಯ ನೃತ್ಯ ಕಲಾವಿದರಿಂದ ಮೂಡಿಬಂದಂತಹ ನೃತ್ಯ ಪ್ರದರ್ಶನ ನೋಡುಗರನ್ನು ಮಂತ್ಹ್ರಮುಗ್ದರನ್ನಗಿಸಿತು. ಈ ನೃತ್ಯ ಸಂಯೋಜನೆಯನ್ನು ನಮಿತ ಸಾಲ್ಯಾನ್ ನಿರ್ವಹಿಸಿದ್ದರು.

ಮನೋರಂಜನ ಕಾರ್ಯದರ್ಶಿ ಶ್ರೀ ಶ್ರೀಧರ್ ಅಮಿನ್ ಅವರ ಸ್ವಾಗತ ಭಾಷಣ ದಿಂದ ಪ್ರಾರಂಭಗೊಂಡು ಶ್ರೀಮತಿ ಪ್ರತಿಮರಾಜ್ ಅವರ ಸಂಕ್ಷಿಪ್ತ ತುಳುನಾಡ ದರ್ಶನದೊಂದಿಗೆ ಇತ್ತಿಚಿಗೆ ಸ್ವರ್ಗಸ್ಥರಾದ ಕಯ್ಯಾರ ಕಿಂಜಣ್ಣ ರೈ ಹಾಗು ಕೆ. ಏನ್. ಟೈಲರ್ ಅವರಿಗೆ ಶೃದ್ದಾಂಜಲಿ  ಸಲ್ಲಿಸುವ  ಸಲುವಾಗಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಕೈಗೊಂಡಿತು. ಕಾರ್ಯಕ್ರಮದ ನಿರೂಪಕರಾಗಿ ಶ್ರೀ ಸುರೇಂದ್ರ ಉದ್ಯಾವರ ಹಾಗು ಶ್ರೀಮತಿ ಕುಶಿ ಅಮಿನ್ ಕಾರ್ಯನಿರ್ವಹಿಸಿದ್ದರು.

ಇದೆ ಸಂದರ್ಬದಲ್ಲಿ ಬರುವ ಡಿಸೆಂಬರ್ ೧೭ ರಂದು ನಡೆಯಲಿರುವ “ಆಕಿಯೊಂಕೆ ಜರಕೊಂಸೇ” ೧೯ ಮಂದಿ ದೃಷ್ಟಿ ಹೀನ ಕಲಾವಿದರು ಮುಂಬೈಯಿಂದ ಬಂದು ನಡೆಸಿಕೊಡಲಿರುವ ಸಂಗೀತ ರಸಸಂಜೆಯ ಮನವಿಯನ್ನು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು ಅದ್ಯಕ್ಷರಾದ ಶ್ರೀ ರಾಜಕುಮಾರ್ ತಾಯಿನಾಡಿನಿಂದ ಬಂದಂತಹ ಕಲಾವಿದರಿಗೆ ಗೌರವದ ಸ್ಮರಣಿಕೆಯನ್ನು ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಕಾರ್ಯದರ್ಶಿಯವರಾದ ಶ್ರೀ ಹರೀಶ್ ಪೂಜಾರಿ ಈ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿ  ಪ್ರೋಸ್ಸಹಿಸಿದ  ಎಲ್ಲರಿಗೂ ಧನ್ಯವಾದ ಸಮರ್ಪನೆಯೊಂದಿಗೆ  ಕಾರ್ಯಕ್ರಮ ಮುಕ್ತಾಯಗೊಂಡಿತು. ತಾ ೩೦.೧೦.೨೦೧೫ ರಂದು ತುಳು ಸೂಪರ್ ಹಿಟ್ ಚಲನಚಿತ್ರ “ಚಂಡಿ ಕೊರಿ” ಇಲ್ಲಿನ ಸಿಟಿ ಸೆಂಟರ್ ಮಾಲ್ ಸಿನಿ ಕೊ  – ೨೦ ಯ ಎರಡು ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನಗೊಂಡಿತು. ಚಿತ್ರದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Exit mobile version