Site icon Ullalavani

ಶಿವಗಿರಿ ಮಠದಲ್ಲಿ ಭಕ್ತಿಪರವಶಗೊಳಿಸಿದ ‘ಗುರು ಮಾಧುರ್ಯ’ ಕಾರ್ಯಕ್ರಮ

ವರ್ಕಳ: ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯ ವರ್ಕಳದಲ್ಲಿರುವ ಶಿವಗಿರಿ ಮಠದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮದಿನಾಚರಣೆಯ ಅಂಗವಾಗಿ ‘ಗುರು ಮಾಧುರ್ಯ’ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಶಿವಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕುಮಾರಿ ಶ್ರೀ ರಕ್ಷಾ ಎಸ್.ಎಚ್. ಪೂಜಾರಿ ಕೊಣಾಜೆ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳು ರಚಿಸಿದ ವಿನಾಯಕಾಷ್ಟಕಂ, ಭದ್ರಕಾಳಿ ಅಷ್ಟಕಂ, ಚಿದಂಬರಾಷ್ಟಕಂ ಸೇರಿದಂತೆ ವಿವಿಧ ಕೃತಿಗಳಿಗೆ ಸ್ವತಃ ರಾಗ ಸಂಯೋಜನೆ ಮಾಡಿ ಗಾಯನ ಪ್ರಸ್ತುತಪಡಿಸಿದರು.

ಗುರುವರ್ಯರ ಭಕ್ತಿ ಪ್ರಧಾನ ಗೀತೆಗಳನ್ನು ಹಾಡುವುದರ ಜೊತೆಗೆ, ಹಾಡುಗಳಿಗೆ ನೃತ್ಯದ ಮೂಲಕ ಅಭಿವ್ಯಕ್ತಿ ನೀಡಿದ ಅವರು ನೆರೆದಿದ್ದ ಜನಸಾಗರವನ್ನು ಭಕ್ತಿಪರವಶಗೊಳಿಸಿದರು.

ಕಾರ್ಯಕ್ರಮದಲ್ಲಿ ಪಿಟೀಲಿನಲ್ಲಿ ಟ್ರಿವೆಂಡ್ರಂ ಆರ್. ರಾಜ್ ಗೋಪಾಲಾಚಾರ್ಯ, ಮೃದಂಗದಲ್ಲಿ ಸುರೇಶ್ ಚಂದ್ರ ಮಂಗಳಂ (ಕೇರಳ), ನೃತ್ಯದಲ್ಲಿ ಕುಮಾರಿ ರಶ್ಮಿತಾ ಕುಲಾಲ್ ಕೈರಂಗಳ ಹಾಗೂ ಸಹಗಾಯನದಲ್ಲಿ ಮಾಸ್ಟರ್ ಶ್ರೀವತ್ಸ ಎಸ್.ಎಚ್. ಪೂಜಾರಿ ಸಹಕಾರ ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸುರೇಖ ಹರೀಶ್ ಪೂಜಾರಿ ಕೊಣಾಜೆ ನಡೆಸಿದರು.

Exit mobile version