Site icon Ullalavani

ಪೆರಾರ ಮುಂಡಬೆಟ್ಟುಗುತ್ತುವಿನ ತುಂಬೆತ್ತೋಡಿ ವರದರಾಜ ಎಸ್. ಶೆಟ್ಟಿ ನಿಧನ

ಉಳ್ಳಾಲ, ಆ. 6: ಪೆರಾರ ಮುಂಡಬೆಟ್ಟುಗುತ್ತುವಿನ ತುಂಬೆತ್ತೋಡಿ ವರದರಾಜ ಎಸ್. ಶೆಟ್ಟಿ (83) ಅವರು ಆ.6 ರಂದು ಬಾಕ್ರಬೈಲಿನಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ನಾಲ್ವರು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ.

ಸುಮಾರು 50 ವರ್ಷಗಳ ಕಾಲ ಮುಂಬಯಿ, ಮಂಗಳೂರು ಹಾಗೂ ವಿದೇಶಗಳಲ್ಲಿ ವಿವಿಧ ಉದ್ಯೋಗಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿಯ ಬಳಿಕ ಬಾಕ್ರಬೈಲಿನಲ್ಲಿ ಹವ್ಯಾಸಿ ಕೃಷಿಕರಾಗಿ ಜೀವನ ಸಾಗಿಸುತ್ತಿದ್ದರು.

ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನ ಹಾಗೂ ಬಜಿಲಾಡಿ ಶ್ರೀ ಮಹಿಷಮರ್ಧಿನಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದರು.

ಅವರ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಸ್ಥಳೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Exit mobile version