ನವದೆಹಲಿ, ಆ. 05 : ದೇಶದಲ್ಲಿ ವಿಮೆ ಇಲ್ಲದೆಯೇ ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ವಿಮೆ ಇಲ್ಲದೇ ಓಡಾಡುವ ವಾಹನಗಳಿಗೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ನಿರಾಕರಿಸುವ ಪ್ರಯೋಗಿಕ ಯೋಜನೆ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶ ನೀಡಿದೆ.
ವಿಮೆ ಇಲ್ಲದೆ ವಾಹನಗಳನ್ನು ಓಡಿಸುವುದರ ಮೇಲೆ ಪ್ರಮುಖ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿದೆ. ಪೆಟ್ರೋಲ್ ಪಂಪ್ಗಳು ಇಂಧನವನ್ನು ಪೂರೈಸುವ ಮೊದಲು ವಾಹನದ ವಿಮೆಯನ್ನು ಪರಿಶೀಲಿಸುವಂತಹ ಪ್ರಾಯೋಗಿಕ ಯೋಜನೆಯನ್ನು ಸಿದ್ಧಪಡಿಸುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.ಪ್ರಸ್ತಾವಿತ ವ್ಯವಸ್ಥೆಯಡಿಯಲ್ಲಿ, ಮಾನ್ಯ ವಿಮೆ ಇಲ್ಲದ ವಾಹನಗಳಿಗೆ ಅಗತ್ಯವಿರುವ ವಿಮೆ ಸಿಗುವವರೆಗೆ ಪೆಟ್ರೋಲ್ ಅಥವಾ ಡೀಸೆಲ್ ನಿರಾಕರಿಸಬಹುದು.ಈ ಕ್ರಮವು ನ್ಯಾಯಾಲಯವು ಪ್ರಸ್ತಾಪಿಸಿರುವ ರಸ್ತೆ ಸುರಕ್ಷತಾ ಕ್ರಮಗಳ ಭಾಗವಾಗಿದೆ. ಇದರಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳನ್ನು ವಾಹನ ಮತ್ತು ವಿಮಾ ಡೇಟಾಬೇಸ್ಗಳೊಂದಿಗೆ ಸಂಪರ್ಕಿಸುವುದು, ಸಂಚಾರ ಪೊಲೀಸರಿಗೆ ವಿಮೆಯನ್ನು ತಕ್ಷಣವೇ ಪರಿಶೀಲಿಸಲು ಮೊಬೈಲ್ ಪರಿಕರಗಳನ್ನು ನೀಡುವುದು ಮತ್ತು ಹೊಸದಾಗಿ ಖರೀದಿಸಿದ ವಾಹನಗಳಿಗೆ ಕಡ್ಡಾಯವಾದ ಮೂರನೇ ವ್ಯಕ್ತಿಯ ವಿಮಾ ಅವಧಿಯನ್ನು ವಿಸ್ತರಿಸುವುದು ಸೇರಿವೆ.ಪೆಟ್ರೋಲ್ ಪಂಪ್ಗಳು ಇಂಧನವನ್ನು ವಿತರಿಸುವ ಮೊದಲು ವಾಹನಕ್ಕೆ ಮಾನ್ಯ ವಿಮೆ ಇದೆಯೇ ಎಂದು ಪರಿಶೀಲಿಸಲು ಅನುವು ಮಾಡಿಕೊಡುವ ಪೈಲಟ್ ಯೋಜನೆಯಲ್ಲಿ ಕೆಲಸ ಮಾಡುವಂತೆ ನ್ಯಾಯಾಲಯ ಐಆರ್ಡಿಎಐ ಮತ್ತು ರಸ್ತೆ ಸಾರಿಗೆ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.ಕಡ್ಡಾಯ ಮೋಟಾರು ವಿಮಾ ನಿಯಮಗಳ ಅನುಸರಣೆಯನ್ನು ಹೆಚ್ಚಿಸುವುದು ಮತ್ತು ವಿಮೆ ಮಾಡದ ವಾಹನಗಳು ರಸ್ತೆಗಳಲ್ಲಿ ಸಂಚರಿಸುವುದನ್ನು ತಪ್ಪಿಸಲು ಈ ಕ್ರಮಕ್ಕೆ ಸಲಹೆ ನೀಡಲಾಗಿದೆ.