Site icon Ullalavani

ಉಳ್ಳಾಲ: ಭಗತ್ ಸಿಂಗ್ ಸೇವಾ ಪ್ರತಿಷ್ಠಾನದಿಂದ ‘ವೃಕ್ಷಾಂಕುರ ರಕ್ಷಾ–2026’ ಕಾರ್ಯಕ್ರಮ

ಉಳ್ಳಾಲ ಬೈದರಪಾಲ್ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ‘ವೃಕ್ಷಾಂಕುರ ರಕ್ಷಾ–2026’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಅವರು, ಪ್ರತಿಷ್ಠಾನದ ದಶಮ ಸಂಭ್ರಮದ ಅಂಗವಾಗಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ‘ವೃಕ್ಷಾಂಕುರ ರಕ್ಷಾ’ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಪ್ರಕೃತಿಯನ್ನು ಉಳಿಸುವುದು ನಮ್ಮ ಬದುಕನ್ನು ರಕ್ಷಿಸುವಂತೆಯೇ ಆಗಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರ ಸೇವೆಯನ್ನು ಮಾದರಿಯಾಗಿ ತೆಗೆದುಕೊಂಡು ಪರಿಸರ ಕಾಳಜಿ ಬೆಳೆಸಬೇಕು ಎಂದು ಕರೆ ನೀಡಿದರು.

ಕ್ಷೇತ್ರದ ಪ್ರಧಾನ ಅರ್ಚಕ ಸತೀಶ್ ಭಟ್ ಅವರು ಶುಭ ಹಾರೈಸಿ ಮಾತನಾಡಿದರು. ಅರ್ಚಕ ಉಮೇಶ್ ಭಟ್, ಕ್ಷೇತ್ರದ ಉಪಾಧ್ಯಕ್ಷ ಹರಿಶ್ಚಂದ್ರ, ಪ್ರತಿಷ್ಠಾನದ ಗೌರವಾಧ್ಯಕ್ಷ ರಾಕೇಶ್ ಕುಮಾರ್, ಉಪಾಧ್ಯಕ್ಷ ಮಾಧವ ಉಳ್ಳಾಲ, ದಾಮೋದರ ನಡಾರ್, ಕೋಶಾಧಿಕಾರಿ ಪ್ರಸಾದ್ ಕೊಂಡಾಣ, ‘ವೃಕ್ಷಾಂಕುರ ರಕ್ಷಾ’ ಸಂಚಾಲಕ ರಾಜೇಂದ್ರ ಸೇವಂತಿಗುಡ್ಡೆ, ಕಾರ್ಯದರ್ಶಿ ದೀಕ್ಷಿತ್ ನಿಸರ್ಗ, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೆತೋಡು, ನವೀನ್ ಎ.ಕೆ., ಲಕ್ಷ್ಮೀನಾರಾಯಣ, ರಮೇಶ್ ನಡಾರ್, ನಟರಾಜ್ ತೊಕ್ಕೊಟ್ಟು, ಚಂದ್ರಶೇಖರ ಕೊಲ್ಯ, ವಿಶ್ವನಾಥ ಏಲ್ಯಾರ್ ಪದವು, ಸತೀಶ್ ಪೂಜಾರಿ, ಸತ್ಯಪ್ರಸಾದ್ ಕುಂಪಲ, ಬೃಜೇಶ್ ನಾಯರ್, ಸೂರಜ್ ಮಡ್ಯಾರ್ ಹಾಗೂ ದಿವಿತ್ ಜೆ. ಪೂಜಾರಿ ಉಪಸ್ಥಿತರಿದ್ದರು.

Exit mobile version