Site icon Ullalavani

ಪಾವೂರು ಕಂಬ್ಲಪದವಿನಲ್ಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ;ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಉಳ್ಳಾಲ ತಾಲೂಕು ವ್ಯಾಪ್ತಿಯ ಪಾವೂರು ಕಂಬ್ಲಪದವಿನಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನ ನಿರ್ಮಾಣಕ್ಕೆ ಸಂಕಲ್ಪಿಸಲಾಗಿದ್ದು ಇದರ ಪೂರ್ವಭಾವಿಯಾಗಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ನ ಉದ್ಘಾಟನಾ ಸಮಾರಂಭ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭ ನಡೆಯಿತು.

ಗೌರವ ಡಾಕ್ಟರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ನ ಕಚೇರಿಯನ್ನು ರಿಬ್ಬನ್ ಅರಳಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸುಂದರಣ್ಣ ಮತ್ತು ತನಗೆ ಹಲವು ವರ್ಷಗಳ ಸಂಬ0ಧ, ಬಂಧುವ ಚಾರಿಟೇಬಲ್ ಟ್ರಸ್ಟ್ ಗೆ ಅವರ ಸಹಕಾರ ನಿರಂತರವಾಗಿದೆ, ಹಾಗಾಗಿ ಮೂಕಾಂಬಿಕ ಚಾರಿಟೇಬಲ್ ಟ್ರಸ್ಟ್ ನ ರಚನೆ ಹಾಗೂ ಕ್ಷೇತ್ರ ನಿರ್ಮಾಣದ ಯೋಜನೆಗಳಿಗೆ ನೆರವಾಗುವ ಅವಕಾಶ ತನಗೂ ಒದಗಿ ಬಂತು, ಇಲ್ಲಿ ಹಿಂದೂ, ಮುಸ್ಲೀಂ, ಕ್ರೆöÊಸ್ತರು ಎಲ್ಲರೂ ಇದ್ದಾರೆ, ಇದು ಸುಂದರಣ್ಣನ ಆತ್ಮೀಯತೆ, ಸೌಹಾರ್ದತೆಗೆ ಸಾಕ್ಷಿ, ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆಯಾಗಿದೆ, ಇದು ಎಲ್ಲರ ಸಹಕಾರದೊಂದಿಗೆ ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿ, ಆದಷ್ಟು ಬೇಗ ಮೂಕಾಂಬಿಕಾ ತಾಯಿಯ ಕ್ಷೇತ್ರ ನಿರ್ಮಾಣ ಆಗಲಿ ಎಂದು ಶಾಫಿ ಬಬ್ಬುಕಟ್ಟೆ ಹಾರೈಸಿದರು.

ಈ ಸಂದರ್ಭ ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಧಾರ್ಮಿಕ ಸೇವೆ ಮಾತ್ರವಲ್ಲದೆ ಸಾಮಾಜಿಕ ಸೇವೆಯನ್ನು ಮಾಡುತ್ತಿದೆ, ಆದಷ್ಟು ಶೀಘ್ರ ಇಲ್ಲಿ ಕ್ಷೇತ್ರ ನಿರ್ಮಾಣವಾಗಲಿ, ಅದಕ್ಕೆ ಎಲ್ಲರ ಸಹಕಾರ ಒದಗಿ ಬರಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಂದರ್, ಇಸ್ಮಾಯಿಲ್ ಶಾಪಿ ಬಬ್ಬುಕಟ್ಟೆ ಅವರ ಮಾರ್ಗದರ್ಶನದಲ್ಲಿ ತಮ್ಮ ಟ್ರಸ್ಟ್ ರಚನೆಯಾಗಿದೆ, ಇದಕ್ಕೆ ಎಲ್ಲರ ಸಹಕಾರ ಬೇಕು, ಆದಷ್ಟು ಬೇಗ ಕ್ಷೇತ್ರ ನಿರ್ಮಾಣದ ಕಾರ್ಯ ಆಗಲಿದೆ ಎಂದು ತಿಳಿಸಿದರು.

ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ್ ಪೂಂಜ, ಕಾರ್ಯಕಾರಿ ಸಮಿತಿ ಸದಸ್ಯ ರವಿ ರೈ ಪಜೀರ್, ಅಖಿಲ ಭಾರತ ಕ್ರೆöÊಸ್ತ ಒಕ್ಕೂಟದ ರಾಜ್ಯ ಅಧ್ಯಕ್ಷ ಆಲ್ವಿನ್ ಡ’ಸೋಜ,
ಪರಿಸರದ ಹಿರಿಯ ಧಾರ್ಮಿಕ ಮುಂದಾಳು ಶ್ರೀನಿವಾಸ್ ಆಳ್ವ ಮಂಜನಾಡಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಆದಷ್ಟು ಸಮಾಜ ಸೇವೆ ನಡೆಯಲಿ,ಧಾರ್ಮಿಕ ಕೆಲಸಗಳು ನಿರಂತರವಾಗಿ ನಡೆಯಲಿ, ಕ್ಷೇತ್ರ ನಿರ್ಮಾಣ ಬೇಗ ಆಗಲಿ ಎಂದು ಹಾರೈಸಿದರು,
ಈ ಸಂದರ್ಭದಲ್ಲಿ ಪರಿಸರದ ಅರ್ಹ ೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ಅತಿಥಿ ಗಣ್ಯರು ವಿತರಿಸಿದರು.

ಕುಮಾರಿ ಆಶಿಕಾ, ಕುಮಾರಿ ಅಭಿಜ್ಞಾ, ಮಾಸ್ಟರ್ ಅಭಿಷ್ ಪ್ರಾರ್ಥನೆಗೈದರು. ಕುಮಾರಿ ಅನನ್ಯ ಸ್ವಾಗತಿಸಿದರು. ಟ್ರಸ್ಟಿ ಕುಮಾರಿ ಪುಷ್ಪಲತಾ ನಿರೂಪಿಸಿದರು. ಕುಮಾರಿ ರೋಹಿಣಿ ವಂದಿಸಿದರು.

Exit mobile version