Site icon Ullalavani

ಅಡ್ಕರೆ ಪಡ್ಪು: ಮೇ 3ರಂದು ಸುಖನ್ಯಾ ಸಮೃದ್ಧಿ ಹಾಗೂ ಆಧಾರ್ ಶಿಬಿರ

ಅಡ್ಕರೆ ಪಡ್ಪು, ಏಪ್ರಿಲ್ 30: ಅಡ್ಕರೆ ಪಡ್ಪಿನಲ್ಲಿ ಸುಖನ್ಯಾ ಸಮೃದ್ಧಿ ಯೋಜನೆ ಹಾಗೂ ಆಧಾರ್ ಸೇವೆಗಳಿಗಾಗಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ಅಲ್ ಇನ್ಸಾನ್ ಯೂತ್ ಅಸೋಸಿಯೇಶನ್ (ರಿ), ಅಡ್ಕರೆ ಪಡ್ಪು ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಸಹಯೋಗದಲ್ಲಿ ಈ ಶಿಬಿರ ಮೇ 3, 2026ರಂದು ನಡೆಯಲಿದೆ.

ಅಡ್ಕರೆ ಪಡ್ಪಿನ ಅಲ್ ಇಹ್ಲಾನ್ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಸಂಘಟನೆ ಮನವಿ ಮಾಡಿದೆ.

ಶಿಬಿರದಲ್ಲಿ ಸುಖನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಖಾತೆ ತೆರೆಯುವ ವ್ಯವಸ್ಥೆ ಇರಲಿದೆ. ವರ್ಷಕ್ಕೆ ಕನಿಷ್ಠ ರೂ.250 ಠೇವಣಿ ಮಾಡಬಹುದಾಗಿದ್ದು, ಗರಿಷ್ಠ ರೂ.1.50 ಲಕ್ಷವರೆಗೆ ಹಣ ಜಮಾ ಮಾಡಲು ಅವಕಾಶವಿದೆ. ಈ ಯೋಜನೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ.

ಇದಲ್ಲದೆ, 18 ವರ್ಷ ಅಥವಾ 10ನೇ ತರಗತಿ ನಂತರ ಖಾತೆಯ 50% ವರೆಗೆ ಹಣ ಹಿಂಪಡೆಯಲು ಅವಕಾಶವಿದ್ದು, ಮದುವೆಯ ಸಮಯದಲ್ಲಿ ಖಾತೆ ಮುಕ್ತಾಯಗೊಳಿಸಬಹುದಾಗಿದೆ.

ಖಾತೆ ತೆರೆಯಲು ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ ವಿಳಾಸದ ದಾಖಲೆ, ಫೋಟೋ ಹಾಗೂ ರೂ.250 ಆರಂಭಿಕ ಠೇವಣಿ ಅಗತ್ಯವಿದೆ.

ಇದೇ ವೇಳೆ ಶಿಬಿರದಲ್ಲಿ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ, 10 ವರ್ಷ ಹಳೆಯ ಆಧಾರ್ ನವೀಕರಣ, ಹೆಸರು, ವಿಳಾಸ, ಜನ್ಮ ದಿನಾಂಕ ಬದಲಾವಣೆ ಹಾಗೂ ಮೊಬೈಲ್ ಸಂಖ್ಯೆ ಜೋಡಣೆ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿರುತ್ತವೆ. 5 ಮತ್ತು 15 ವರ್ಷದ ಮಕ್ಕಳಿಗೆ ಬಯೋಮೆಟ್ರಿಕ್ ಅಪ್‌ಡೇಟ್ ಸೌಲಭ್ಯವೂ ಒದಗಿಸಲಾಗುತ್ತದೆ. ಹೊಸ ಆಧಾರ್ ನೋಂದಣಿ 0ರಿಂದ 18 ವರ್ಷದವರಿಗೆ ಮಾತ್ರ ಸೀಮಿತವಾಗಿದೆ.

ಸೇವೆಗಳನ್ನು ಪಡೆಯಲು ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾಸ್‌ಪೋರ್ಟ್, ಪಾನ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ ಸೇರಿದಂತೆ ಮಾನ್ಯ ದಾಖಲೆಗಳನ್ನು ತರಬೇಕು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಘದ ಅಧ್ಯಕ್ಷ ಎಂ. ಸಿರಾಜ್ (9535652714) ಹಾಗೂ ಪ್ರಧಾನ ಕಾರ್ಯದರ್ಶಿ ನಜೀರ್ ಅಬ್ದುಲ್ (ಮೊ. 7619177887) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Exit mobile version