Site icon Ullalavani

ಯುವಶಕ್ತಿ ಸೇವಾಪಥ ದ.ಕ. ವತಿಯಿಂದ “ಚತುರ್ಥ ಸೇವಾಹೆಜ್ಜೆ” ಕಾರ್ಯಕ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವಶಕ್ತಿ ಸೇವಾಪಥ ದ.ಕ. ಸಂಘಟನೆಯಿಂದ “ಚತುರ್ಥ ಸೇವಾಹೆಜ್ಜೆ” ಎಂಬ ಮಹತ್ವದ ಸೇವಾ ಕಾರ್ಯಕ್ರಮವನ್ನು ಮಂಗಳೂರಿನ ಉರ್ವದಲ್ಲಿರುವ ಶ್ರೀ ಮಾರಿಯಮ್ಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಮಂಗಳೂರು ಆಶ್ರಯದಲ್ಲಿ ಬೀಮ್ ಸನಾತನ್ ಹಾಗೂ ಟೀಮ್ ಸನಾತನ್ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸೇವಾನಿಧಿ ಹಸ್ತಾಂತರ, ಸೇವಾಸಾಧಕರಿಗೆ ಗೌರವ ಸಮರ್ಪಣೆ, ವಿವಿಧ ಸೇವಾಸಂಸ್ಥೆಗಳಿಗೆ ಅಭಿನಂದನೆ ಹಾಗೂ ಮಿತ್ರಸಂಸ್ಥೆಗಳಿಗೆ ಪುರಸ್ಕಾರ ಪ್ರದಾನ ನಡೆಯಲಿದೆ. ಸಮಾಜಸೇವೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಸೇವೆಯನ್ನು ಗುರುತಿಸಿ ಸನ್ಮಾನಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಇದರ ಜೊತೆಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನದ ಮೂಲಕ ಮಾನವೀಯತೆಯನ್ನು ಮೆರೆದರೆಂದು ಸಂಘಟಕರು ಮನವಿ ಮಾಡಿದ್ದಾರೆ. ಸಾಂಸ್ಕೃತಿಕ ವೈಭವದೊಂದಿಗೆ ಕಾರ್ಯಕ್ರಮ ಇನ್ನಷ್ಟು ಕಂಗೊಳಿಸಲಿದ್ದು, ಟೀಮ್ KFM ನಾಸಿಕ್ ಟ್ರೂಪ್ ಮೂಡಿಪು ತಂಡದ ಕಲಾ ಪ್ರದರ್ಶನವೂ ವಿಶೇಷ ಆಕರ್ಷಣೆಯಾಗಲಿದೆ.

ಸಂಘಟಕರು ಎಲ್ಲಾ ಸಮಾಜಬಂಧುಗಳನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 88610 90330 ಹಾಗೂ 88842 55199 ಸಂಖ್ಯೆಯನ್ನು ಸಂಪರ್ಕಿಸಬಹುದು.

Exit mobile version