Site icon Ullalavani

ಓಂ ಶ್ರೀಗಣೇಶ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಉಳ್ಳಾಲ; ಕಳೆದ 35 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಓಂ ಶ್ರೀ ಗಣೇಶ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಫೆ.27 ಮತ್ತು ಫೆ.28 ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿAದ ನಡೆಯಲಿದೆ ಎಂದು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ತಿಳಿಸಿದ್ದಾರೆ.

ತೊಕ್ಕೊಟ್ಟು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಸಂಘದ ಬೆಳವಣಿಗೆಯ ಬಗ್ಗೆ ವಿವರಿಸಿದರು.

ಆರಂಭದಲ್ಲಿ ಕೇವಲ 41 ಸದಸ್ಯರೊಂದಿಗೆ ಕಾರ್ಯಾರಂಭ ಮಾಡಿದ ಈ ಸಂಘದಲ್ಲಿ ಇದೀಗ 75 ಮಂದಿ ಸದಸ್ಯರಿದ್ದಾರೆ. ಬಡವ-ಶ್ರೀಮಂತ ಎಂಬ ಭೇದವಿಲ್ಲದೆ, ಜಾತಿ ಭಿನ್ನತೆ ಎಂಬ ಸಂಘರ್ಷವಿಲ್ಲದೆ ಭಾರತಾಂಬೆ ಅಡಿಯಲ್ಲೆಲ್ಲರೂ ಒಂದೇ ಎಂಬ ಧ್ಯೇಯವಾಕ್ಯದಡಿ ಸಂಘವು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಸಣ್ಣ ಕಟ್ಟಡ ನಿರ್ಮಿಸುವ ಕನಸಿನಿಂದ ಆರಂಭವಾದ ಪ್ರಯತ್ನ ದೇವರ ಆಶೀರ್ವಾದದಿಂದ ಇಂದು ಅದರ ಹತ್ತು ಪಟ್ಟು ದೊಡ್ಡ ಕಟ್ಟಡವಾಗಿ ರೂಪುಗೊಂಡಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಂದರ ಕಟ್ಟಡದ ಉದ್ಘಾಟನೆ ನಾಳೆ ಸಂಜೆ ಭಾರೀ ವಿಜೃಂಭಣೆಯಿAದ ನಡೆಯಲಿದ್ದು ಈ ಸಮಾರಂಭಕ್ಕೆ ಎಲ್ಲಾ ಧರ್ಮದ ಜನರು ಭಾಗವಹಿಸಲಿದ್ದಾರೆ ಎಂದರು.

ಅಧ್ಯಕ್ಷರಾದ ಜಗದೀಶ್ ಕೋಟ್ಯಾನ್ ಪಾಣೇಲ ಮಾತನಾಡಿ, ಫೆ. 27 ಶುಕ್ರವಾರ ಸಂಜೆ 4 ಗಂಟೆಗೆ ಪಡೀಲಿನಿಂದ ನೂತನ ಕಟ್ಟಡದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 6 ಗಂಟೆಗೆ ನೂತನ ಕಟ್ಟಡದಲ್ಲಿ ದೀಪ ಪ್ರಜ್ವಲನೆಯನ್ನು ಉದಯ ಗುರು ಸ್ವಾಮಿ ಮಂಜೇಶ್ವರ ನಡೆಸಲಿದ್ದಾರೆ, ಭಗವಧ್ವಜ ಅನಾವರಣವನ್ನು ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸೇಸಪ್ಪ ಟೈಲರ್ ಸುದರ್ಶನನಗರ ಪಜೀರು ನಡೆಸಲಿದ್ದಾರೆ. ಸಂಜೆ 6.30 ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಸಾಮೂಹಿಕ ಪ್ರಾರ್ಥನೆ, ಪ್ರಸಾದ, ರಾಕ್ಷೋಘ್ನ ಹೋಮ, ವಾಸ್ತು ಹೋಮ ನಡೆಯಲಿದೆ ರಾತ್ರಿ 8 ಗಂಟೆಗೆ ದೇವೆರ್ ಬರೆತಿನ ಹಣೆಬರಹ ಎಂಬ ತುಳು ಸಾಮಾಜಿಕ ನಾಟಕ ನಡೆಯಲಿದೆ.

ಸಂಜೆ ಕೀರ್ತಿಶೇಷ ಪದ್ಮಾವತಿ ಕೋಚಣ್ಣ ಆಳ್ವ ವೇದಿಕೆಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಓಂ ಶ್ರೀ ಗಣೇಶ ಯುವಕ ಮಂಡಲ ಅಧ್ಯಕ್ಷರಾದ ಜಗದೀಶ್ ಕೋಟ್ಯಾನ್ ಪಾಣೇಲ ಅಧ್ಯಕ್ಷತೆ ವಹಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮೈಸೂರು ಎಲೆಕ್ಟ್ರಿಕಲ್ ಇಂಡ್ರಸ್ಟ್ರೀಸ್ ಲಿ ಇದರ ನಿಕಟ ಪೂರ್ವ ಅಧ್ಯಕ್ಷರಾದ ಸಂತೋಷ್ ರೈ ಬೋಳಿಯರು ನಡೆಸಲಿದ್ದಾರೆ. ಪಜೀರ್ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಮ್ಮದ್ ರಫೀಕ್ ಪಜೀರ್, ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನ ಇನೋಳಿ ದೇವಂದಬೆಟ್ಟು ಇದರ ಆಡಳಿತ ಮೋಕೇಸರಾದ ಚಂದ್ರ ಹಾಸ್ ಪೂಂಜ ಕಿಲ್ಲೂರುಗುತ್ತು, ಭೀಮ ಲಕ್ಷ್ಮೀ ಚಿಟ್ಸ್ ಪ್ರೈ.ಲಿ. ಆಡಳಿತ ನಿರ್ದೇಶಕ ಜಿತೇಂದ್ರ ಶೆಟ್ಟಿ. ತಲಪಾಡಿಗುತ್ತು ಅರಸು ಮುಂಡಿತ್ತಾಯ ದೈವಸ್ಥಾನ ಪಜೀರು ಭಂಡಾರಮನೆ ದೈವದ ಪಾತಿ ಸುಬ್ರಾಯ ಪೂಜಾರಿ ಮತ್ತಿತರರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಫೆ .28 ಶನಿವಾರ ಬೆಳಿಗ್ಗೆ 8ಗಂಟೆಗೆ ಗಣಪತಿ ಹೋಮ, ದೀಪ ಪ್ರಜ್ವಲನೆ ನಂತರ ವಿವಿಧ ಭಜನಾ ಮಂಡಳಿಗಳಿAದ ಭಜನೆ ಪ್ರಾರಂಭ, ಬೆಳಿಗ್ಗೆ ಗಂಟೆ 11.33 ಗಂಟೆಗೆ ನೂತನ ಕಟ್ಟಡ ಪ್ರವೇಶ ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ,ಮಧ್ಯಾಹ್ನ 3 ಗಂಟೆಗೆ ಸತ್ಯನಾರಾಯಣ ಪೂಜೆ ಪ್ರಾರಂಭ 4.30 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಮಿತಿ ಓಂ ಶ್ರೀ ಗಣೇಶ ಯುವಕ ಮಂಡಲ (ರಿ.) ಕಟ್ಟಡ ನಿರ್ಮಾಣ ಹಾಗೂ ಮಹಿಳಾ ಮಂಡಳಿ ಅಧ್ಯಕ್ಷರು ಸಂತೋಷ್ ಕುಮಾರ್ ರೈ ಬೋಳಿಯಾರ್ ವಹಿಸಲಿದ್ದಾರೆ. ಸಭಾಭವನ ಉದ್ಘಾಟನೆಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ನೆರವೇರಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾಡಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಶ್ರೀ ಶಾರದಾ ಗಣಪತಿ ವಿದ್ಯಾಸಂಸ್ಥೆ ಸಂಚಾಲಕರಾದ ಟಿ.ಜಿ. ರಾಜಾರಾಮ್ ಭಟ್, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಪದ್ಮ ಸರ್ವಿಸಸ್ ಬಿ.ಸಿ.ರೋಡು ಐತ್ತಪ್ಪ ಅಳ್ವ ಸುಜೀರುಗುತ್ತು, ಲಂಚುಲಾಲ್ ಕೆ.ಎಸ್, ಪ್ರಶಾಂತ್ ಕಾಜವ ಮಿತ್ತಕೋಡಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ವಿವಿಧ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ನಿತಿನ್ ಪೂಂಜ ಪಾಣೇಲ ಬರಿಕೆ ಉಪಸ್ಥಿತರಿದ್ದರು.

Exit mobile version