Site icon Ullalavani

ತಲಪಾಡಿ:ತಾಯಿ-ಮಗಳಿಗೆ ಹಲ್ಲೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತಲಪಾಡಿ: ತಾಯಿ ಮತ್ತು ಮಗಳಿಗೆ ತೆಂಗಿನಕಾಯಿ ಕೀಳುವ ಯುವಕನೋರ್ವ ಹಲ್ಲೆ ನಡೆಸಿರುವ ಘಟನೆ ಸೋಮವಾರ ಸಂಜೆ ನಾರ್ಲ ಪಡೀಲು ಎಂಬಲ್ಲಿ ನಡೆದಿದೆ.

ತಲಪಾಡಿ ನಾರ್ಲ ಪಡೀಲ್ ನಿವಾಸಿ ಮೈಕಲ್ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಆತನ ನೆರೆಮನೆಯ ನಿವಾಸಿಗಳಾದ ನೆಬಿಸಾ(62) ಮತ್ತು ಆಕೆಯ ಪುತ್ರಿ ಆಸ್ಮಾ(38) ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು.

ಘಟನೆಯ ವಿವರ :

ಮೈಕಲ್ ತನ್ನ ನೆರೆಮನೆಯೊಬ್ಬರ ತೆಂಗಿನ ಮರದಿಂದ ತೆಂಗಿನ ಕಾಯಿ ಕೀಳುತ್ತಿದ್ದಾಗ ತೆಂಗಿನ ಗರಿ ತಾಗಿ ಕೇಬಲ್ ವಯರ್ ಕೆಳಗೆ ಬಿದ್ದಿತ್ತು. ಈ ವಿಚಾರದಲ್ಲಿ ಪಕ್ಕದ ಮನೆಯ ನೆಬಿಸಾ ಅವರು ಕೇಬಲನ್ನು ಮೇಲಕ್ಕೆ ಕಟ್ಟಿಕೊಡುವಂತೆ ಕೇಳಿದಾಗ ಅವ್ಯಾಚ ಶಬ್ದಗಳಿಂದ ನೆಬಿಸಾರನ್ನು ನಿಂದಿಸಿದ್ದು, ಈ ಸಂದರ್ಭದಲ್ಲಿ ನೆಬಿಸಾ ಅವರ ಮಗಳು ಆಸ್ಮಾ ಬಂದು ಯಾಕೆ ತಾಯಿಯನ್ನು ನಿಂದಿಸುತ್ತಿಯಾ ಎಂದು ಕೇಳಿದಾಗ ಕೈಯಲ್ಲಿದ್ದ ತೆಂಗಿನ ಕಾಯಿಯಿಂದ ಅಸ್ಮಾಳ ತಲೆಗೆ ಹೊಡೆದಿದ್ದು, ಪ್ರಜ್ಞÉ ತಪ್ಪಿ ಬಿದ್ದ ಆಸ್ಮಾಳ ಬಳಿ ನೆಬಿಸಾ ಬಂದಾಗ ಮೈಕಲ್ ಕಲ್ಲಿನಿಂದ ನೆಬಿಸಾ ಅವರ ತಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಎನ್ನಲಾಗಿದೆ. ಸ್ಥಳೀಯರು ಈ ಸಂದರ್ಭದಲ್ಲಿ ಇಬ್ಬರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಾರಾಯಿ ದಂಧೆ ನಿತ್ಯ ಕಿರುಕುಳ :

ಮೈಕಲ್ ಸ್ಥಳೀಯವಾಗಿ ಸಾರಾಯಿ ದಂಧೆ ನಡೆಸುತ್ತಿದ್ದು, ನೆಬಿಸಾ ಅವರ ಕುಟುಂಬಕ್ಕೆ ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ. ಮೂಲತ: ತಮಿಳುನಾಡಿನವನಾದ ಈತ ಕಳೆದ 18 ವರ್ಷದಿಂದ ನಾರ್ಲ ಪಡೀಲ್‍ನಲ್ಲಿ ವಾಸಿಸುತ್ತಿದ್ದು, ಸಣ್ಣಪುಟ್ಟ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ವೈಯಕ್ತಿಕ ದ್ವೇಷದಿಂದ ಈ ಹಲ್ಲೆ ನಡೆಸಿದ್ದು, ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version