Site icon Ullalavani

ಉಳ್ಳಾಲವಾಣಿ ನಿರಂತರ ಶ್ರಮ ಕಡೆಗೂ ನಾಯಿಯಿಂದಲೇ ಹತ್ಯೆ ;ವರದಿ ಸಾಬೀತು

ಸೋಮೇಶ್ವರ: ಕುಂಪಲ ಬೈಪಾಸ್ ಸಮೀಪ 60ರ ಹರೆಯದ ದಯಾನಂದ ಗಟ್ಟಿ ಸಾವಿನ ಪ್ರಕರಣಕ್ಕೆ ಸಂಬoಧಿಸಿದ ಅಂತಿಮ ಎಫ್ ಎಸ್ ಎಲ್ ವರದಿ ಬಂದಿದ್ದು, ನಾಯಿಯೇ ಸಾವಿಗೆ ಕಾರಣ ಎಂಬುದಾಗಿ ಸಾಬೀತಾಗಿದೆ. ಈ ಕುರಿತು ಉಳ್ಳಾಲವಾಣಿ ಉಳ್ಳಾಲ ಪೊಲೀಸ್ ಠಾಣಾಧಿಕಾರಿ , ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಜೊತೆಗೆ ನಿರಂತರ ಸಂಭಾಷಣೆ ನಡೆಸಿ ತಡವಾಗಿರುವುದನ್ನು ಪ್ರಶ್ನಿಸುತ್ತಾ ಬಂದಿದ್ದು, ಫೆ.5 ರಂದು ಅಂತಿಮ ವರದಿ ಬಂದಿರುವ ಕುರಿತು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಗಟ್ಟಿ (60) ನ.14ರ ಬೆಳಿಗ್ಗೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕುಂಪಲ ಬೈಪಾಸ್ ಸಮೀಪದ ಮನೆ ಆವರಣದಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಹಲವು ಶಂಕೆಗಳು ವ್ಯಕ್ತವಾದರೂ, ಸ್ಥಳೀಯರ ಕಂಡ ಪ್ರಕಾರ ನಾಯಿ ಅವರ ಮೇಲಿರುವುದನ್ನು ಸ್ಪಷ್ಟಪಡಿಸಿ, ನಾಯಿಗಾಗಿ ಹುಡುಕಾಟ ನಡೆಸಿ ಅದರ ಮುಖದ ಮೇಲಿದ್ದ ರಕ್ತದ ಕುರುಹುಗಳನ್ನು ಪರಿಶೀಲಿಸಿ ಸ್ಥಳಕ್ಕಾಗಮಿಸಿದ್ದ ಫಾರೆನ್ಸಿಕ್ ತಂಡ ಪ್ರಾಣಿ ದಾಳಿಯಿಂದ ಸಾವನ್ನಪ್ಪಿರುವುದನ್ನು ಪ್ರಾಥಮಿಕ ಹಂತದಲ್ಲಿ ಸ್ಪಷ್ಟಪಡಿಸಿತ್ತು. ಮತ್ತೆ ಮೃತರ ಸಂಬAಧಿಕರು ಸಂಶಯ ವ್ಯಕ್ತಪಡಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಅಂದು ಘಟನೆ ನಡೆದ ಮೂರು ದಿನಗಳಲ್ಲಿ ಸಿಕ್ಕಂತಹ ಆರಂಭದ ಎಫ್ ಎಸ್ ಎಲ್ ವರದಿಯಲ್ಲಿ ನಾಯಿ ಹಾಗೂ ಮೃತರ ದೇಹದ ಮೇಲಿನ ವರದಿಗಳನ್ನು ಸಂಗ್ರಹಿಸಿದ ಆಧಾರದ ಮೇರೆಗೆ ನಾಯಿ ದಾಳಿಯ ವರದಿಯನ್ನು ನೀಡಿದ್ದರು. ಆದರೆ ಕಾನೂನು ರೀತ್ಯ ಸ್ಪಷ್ಟಪಡಿಸುವ ಸಲುವಾಗಿ ವರದಿಯನ್ನು ಮತ್ತೆ ಹೈದರಾಬಾದ್ ಎಫ್ ಎಸ್ ಎಲ್ ಮುಖ್ಯ ಸಂಸ್ಥೆಗೆ ಕಳುಹಿಸಲಾಗಿತ್ತು. ಆದರೆ ಹಲವು ದಿನ ಕಳದರೂ ವರದಿ ಬಾರದ ಹಿನ್ನೆಲೆಯಲ್ಲಿ ಉಳ್ಳಾಲವಾಣಿ ತಂಡ ಪೊಲೀಸ್ ಇಲಾಖೆ, ಸೋಮೇಶ್ವದ ಮುಖ್ಯಾಧಿಕಾರಿ ಅವರನ್ನು ನಿರಂತರ ಸಂಪರ್ಕಿಸುತ್ತಲೇ ಬಂದಿತ್ತು. ತಡವಾಗಿರುವ ಕುರಿತು ಪ್ರಶ್ನೆಯನ್ನು ಹಾಕುತ್ತಲೇ ಇತ್ತು. ಇದೀಗ ಘಟನೆ ನಡೆದು ಮೂರು ತಿಂಗಳುಗಳ ನಂತರ ಅಂತಿಮ ವರದಿ ಬಂದಿದ್ದು, ಅದನ್ನು ಜಿಲ್ಲೆಯ ಫಾರೆನ್ಸಿಕ್ ತಂಡ ಪರಿಶೀಲಿಸಿದ್ದು, ಮದ್ಯ ಸೇವನೆ ನಡೆಸಿರುವುದು ಕಂಡುಬAದಿದೆ. ಆದರೆ ಅದರಿಂದ ಸಾವನ್ನಪ್ಪಲು ಅಸಾಧ್ಯ. ನಾಯಿ ದಾಳಿ ಉಲ್ಲೇಖವನ್ನು ಖಚಿತಪಡಿಸಿ ಅಂತಿಮ ವರದಿಯನ್ನು ನೀಡಿದೆ. ಘಟನೆಗೆ ಕಾರಣವಾದ ಸ್ಥಳೀಯಾಡಳಿತ ವರದಿ ಪ್ರಕಟವಾದ ತಕ್ಷಣವೇ ರೂ. 5 ಲಕ್ಷ ಜೀವ ನಷ್ಟ ಪರಿಹಾರ ನೀಡಬೇಕು ಅನ್ನುವ ಸುಪ್ರೀಂ ಕೋರ್ಟಿನ ಆದೇಶವಿದ್ದು, ಅದರಂತೆ ನಷ್ಟ ಪರಿಹಾರ ವನ್ನು ದಯಾನಂದ ಗಟ್ಟಿ ಕುಟುಂಬಕ್ಕೆ ನೀಡಲು ಸೋಮೇಶ್ವರ ಪುರಸಭೆ ಸಿದ್ಧತೆ ನಡೆಸಿದೆ.

Exit mobile version