ಪಿಲಾರು: ಭಾರತೀಯ ಪರಂಪರೆಯ ಉಸಿರು ಭಕ್ತಿ. ಸರ್ವಧರ್ಮದವರು ಅವರವರ ಭಕ್ತಿಯನ್ನು ಆಚರಣೆ ಮಾಡುತ್ತಾರೆ. ದೇಶವೇ ಭಕ್ತಿ ಮೇಲೆ ನಿಂತಿದೆ. ಭಗವಂತನ ಇಚ್ಛೆ ಇಲ್ಲದಿದ್ದರೆ ಹುಲ್ಲು ಕಡ್ಡಿಯೂ ಅಲುಗಾಡದು ಎಂದು ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ಅಸ್ರಣ್ಣರು ಹೇಳಿದರು.
ಇವರು ಶ್ರೀ ನಾಗಬ್ರಹ್ಮ ಕ್ಷೇತ್ರ ಪಿಲಾರು ಲಕ್ಷಿö್ಮÃ ಗುಡ್ಡೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಕೀರ್ತಿಶೇಷ ಬ್ರಹ್ಮಶ್ರೀ ವೇದಮೂರ್ತಿ ಬಿ.ಕೇಶವ ಜೋಗಿತ್ತಾಯ ಬಂಗಳಾಯಿ ಆಶೀರ್ವಾದಗಳೊಂದಿಗೆ ನಡೆದ 17ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಈ ಮಣ್ಣಿನಲ್ಲಿ ಸರ್ವಧರ್ಮದ ಐಕ್ಯಮತಿಯನ್ನು ದೇವರಿಗೆ ಕಾಣುವ ಇಚ್ಛೆಯಿಂದ ಈ ಜಾಗ ಅಬ್ದುಲ್ ಕುಂಞ್ ಅವರ ಕೈ ಸೇರಿದೆ. ಆ ಮೂಲಕ ನಾವೆಲ್ಲರೂ ಒಂದಾಗಿ ಪುಣ್ಯಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಆಯಿತು. ಮುಂದೆ ನಡೆಯುವ ಪ್ರತೀ ವರ್ಧಂತ್ಯೋತ್ಸವದಲ್ಲಿ ಒಂದು ಗಿಡವನ್ನು ನೆಡುವಂತಹ ಕಾರ್ಯಕ್ರಮ ನಡೆಯಲಿ ಎಂದು ನುಡಿದರು.
ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ| ಫಾ.ಡೋನಾಲ್ಡ್ ನಿಲೇಶ್ ಕ್ರಾಸ್ತಾ ಮಾತನಾಡಿ, ಇದೊಂದು ಸೌಹಾರ್ದಮಯ ಕಾರ್ಯಕ್ರವಾಗಿದೆ. ನಾವೆಲ್ಲರೂ ಕಾರ್ಯಕ್ರಮದಲ್ಲಿ ಮಾನವೀಯತೆಯ ಏಕತೆಯಿಂದ ಪಾಲ್ಗೊಂಡಿದ್ದೇವೆ. ಧರ್ಮಗಳು ಮಾನವೀಯತೆ ಬೆಳೆಸಲು ಬಂದಿದೆಯೇ ಹೊರತೂ ವಿಭಜಿಸಲು ಅಲ್ಲ. ಸರ್ವಧರ್ಮವೂ ಪ್ರೀತಿಸು, ದ್ವೇಷ ಬಿಡು ಎಂಬುವುದನ್ನು ಹೇಳುತ್ತದೆ. ಬಿದ್ದವರನ್ನು ಮೇಲಕ್ಕೆತ್ತುವುದು ನಿಜವಾದ ಧರ್ಮ. ಇಂತಹ ಕಾರ್ಯಕ್ರಮದಲ್ಲಿ ನಾವು ಸಂದೇಶವನ್ನು ಸಾರಬೇಕಾಗುತ್ತದೆ. ಭೂಮಿಯಲ್ಲಿ ಪ್ರೀತಿ ಗೆಲ್ಲಬೇಕು, ದ್ವೇಷ ಸೋಲಬೇಕು. ಶಾಂತಿ ಗೆಲ್ಲಬೇಕು, ಹಿಂಸೆ ಸೋಲಬೇಕು. ಮಕ್ಕಳಿಗೆ ಭಯದ ಸಮಾಜವಲ್ಲ ಭರವಸೆಯ ಸಮಾಜವನ್ನು ಸೃಷ್ಠಿಸಬೇಕು. ಧರ್ಮ ಯಾವತ್ತೂ ಸಾಯಲು ಹೇಳುವುದಿಲ್ಲ. ಒಗ್ಗಟ್ಟಿನಿಂದ ಬದುಕಿ ಎಂದು ಹೇಳುತ್ತದೆ. ಮನುಷ್ಯತ್ವ ನಿಜವಾದ ಧರ್ಮ. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಮೂರು ಧರ್ಮಗಳು ಸಾರುವುದು ಒಂದೇ ಅದು ಬೆಳಕು. ಅಂತಹ ಬೆಳಕನ್ನು ನಾವೆಲ್ಲರೂ ಪ್ರಪಂಚಕ್ಕೆ ನೀಡೋಣ ಆ ಮೂಲಕ ಸಾಮರಸ್ಯದ ಬದುಕನ್ನು ಕಟ್ಟೋಣ ಎಂದು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಬುದ್ದಿವಂತರ ಜಿಲ್ಲೆ ಅನ್ನುವ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ನಾವುಗಳು ಶಾಂತಿಯಿAದ ಇರಲು ಇಬ್ಬರು ಪೊಲೀಸ್ ಅಧಿಕಾರಿಗಳು ಕಾರಣಕರ್ತರು. ತುಳುನಾಡಿನ ದೈವವು ಸೌಹಾರ್ದಮಯ ಜೀವನ ನಡೆಸಿ ಎಂಬುವುದನ್ನು ಸಾರುತ್ತದೆ. ಕೇವಲ ವೇದಿಕೆಯಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ ಇದ್ದರೆ ಸಾಲದು. ಅದನ್ನು ಪೋಷಕರು ಅಳವಡಿಸಿಕೊಳ್ಳುವ ಜೊತೆಗೆ ಮಕ್ಕಳಿಗೂ ಕಲಿಸಿಕೊಡುವಂತಾಗಬೇಕು. ತುಳುನಾಡಿನ ಪಾರಂಪರಿಕತೆಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಬದುಕಿ ಬಾಳಬೇಕು ಎಂಬ ಸಂದೇಶವನ್ನು ಸಾರಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೇನಪೋಯ ಆಸ್ಪತ್ರೆಯ ಡಾ.ಪುನೀತ್ ಅವರು, ಮಂಗಳೂರಿಗೆ ಬಂದು 3ವರ್ಷ ಕಳೆದಿದೆ. ಇಲ್ಲಿನ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಆದ ಕಾರಣ ಗಿಡವನ್ನು ನೆಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ವಾತವಾರಣವನ್ನು ಸರಿಪಡಿಸಿಕೊಳ್ಳುವುದರ ಜೊತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳುವುದು ಮುಖ್ಯ. ಭಗವಂತ ಪ್ರತೀ ಅಣುಅಣುವಿನಲ್ಲೂ ನೆಲೆಸಿರುತ್ತಾನೆ. ಆಗಿರುವಾಗ ಸರ್ವಧರ್ಮದವರಲ್ಲೂ ಆರೋಗ್ಯಯುತ ಸ್ನೇಹ ಬೆಳೆಸುವ ಮೂಲಕ ಸೌಹಾರ್ದತೆಯನ್ನು ಬೆಳೆಸಿಕೊಳ್ಳಬೇಕು. ದ್ವೇಷವನ್ನು ಬಿಟ್ಟರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಸೇವಾ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಜೀವ ಪಿಲಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 17ವರ್ಷದ ಹಿಂದೆ ಈ ಜಾಗವನ್ನು ಹಾಜಿ ಯೆನೆಪೋಯ ಅಬ್ದುಲ್ ಕುಂಞ ಅವರು ಖರೀದಿಸಿ, ಜೆಸಿಬಿ ಮೂಲಕ ಗುಡ್ಡ ಪ್ರದೇಶವನ್ನು ಸಮತಟ್ಟುಗೊಳಿಸಲಾಗಿತ್ತು. ಆ ಕಾಲದಲ್ಲಿ ನಾಗರಹಾವುಗಳು ಜೆಸಿಬಿಯಲ್ಲಿ ಕಂಡು ಬಂದ ಹಿನ್ನಲೆ ಇಲ್ಲಿ ನಾಗಬ್ರಹ್ಮನ ಕ್ಷೇತ್ರದ ವಿಚಾರ ಬಯಲಿಗೆ ಬಂತು. ನಾಗನ ಆರಾಧನೆಗಾಗಿ ದೊಡ್ಡ ಮಟ್ಟದ ಮೊತ್ತದಲ್ಲಿ ಖರೀದಿಸಿದ ಜಾಗವನ್ನು ಕುಂಞ್ ಅವರು ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷರಾದ ಸವಿತಾ ವೇಣುಗೋಪಾಲ್, ಕಾರ್ಯದರ್ಶಿ ಅರುಣ ದೇವರಾಜ್, ಕೋಶಾಧಿಕಾರಿ ಮಮತಾ ಉಪೇಂದ್ರ ದಾಸ್, ಸೇವಾ ಸಮಿತಿಯ ಅಧ್ಯಕ್ಷರಾದ ಈಶ್ವರ್ ಶೆಟ್ಟಿ, ಕಾರ್ಯದರ್ಶಿಯಾದ ಚಂದ್ರಹಾಸ್, ಕೋಶಾಧಿಕಾರಿಯಾದ ಲೋಕೇಶ್ ಶೆಟ್ಟಿ ಪಿಲಾರ್, ಸಮಿತಿ ಸರ್ವಸದಸ್ಯರು ಹಾಗು ಊರಿನವರು ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
ಇಬ್ಬರು ಸಾಧಕರಿಗೆ ಸನ್ಮಾನ
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರವೀಣ್ ಶೆಟ್ಟಿ ಮೇಗಿನಮನೆ ಅವರ ಪರವಾಗಿ ತಾಯಿ ಮೀನಾಕ್ಷಿ ಶೆಟ್ಟಿ ಮೇಗಿನಮನೆಯವರನ್ನು ಹಾಗು ಕ್ರೀಡಾ ಪ್ರತಿಭೆ ವಾಲಿಬಾಲ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಶಾಂತ್ ಪಿಲಾರ್ ಲಕ್ಷಿö್ಮÃಗುಡ್ಡೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
