ಉಳ್ಳಾಲ: ದೇರಳಕಟ್ಟೆಯ ಶಾಂತಿ ಭಾಗ್ ದಾರುಸಲಾಂ ಜುಮಾ ಮಸೀದಿಯ 2026-27 ನೇ ಸಾಲಿನ ಅಧ್ಯಕ್ಷರಾಗಿ ಹಾಜಿ ಮಹಮ್ಮದ್ ಪರಪ್ಪು ಸತತ 10 ನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಮಹಮ್ಮದ್ ಕಮಾಲ್ 14 ನೇ ಬಾರಿಗೆ ಮರು ಆಯ್ಕೆ ಯಾಗಿದ್ದು ಕೋಶಾಧಿಕಾರಿ ಮಹಮ್ಮದ್ ಬೈತಾರ್ ಕಳೆದ 8 ವರ್ಷ ದಿಂದ ಉಪಾಧ್ಯಕ್ಷರಾಗಿ ಮಹಮ್ಮದ್ ಶರೀಫ್ 4 ನೇ ಬಾರಿಗೆ ಮರು ಆಯ್ಕೆಯಾಗಿದ್ದರೆ ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್, ಸದಸ್ಯರಾಗಿ ಹಾಜಿ ಬಾವುಜಿ, ಹಾಜಿ ಅಬ್ದುಲ್ ಖಾದರ್, ಇಬ್ರಾಹಿಂ, ಸಲೀಮ್ ಸಾಹೇಬ್, ಸಯ್ಯದ್ ಹಮೀದ್ ,ಹಂಝ ಶಾಂತಿ ಭಾಗ್, ಅಬೂಬಕ್ಕರ್ , ಅಬ್ದುಲ್ ಲತೀಫ್ ,ಮೈದೀನ್ ಶರೀಫ್ , ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ.