Site icon Ullalavani

ಕುಂಬಳೆ ಜಾತ್ರೆ: ಬೆಡಿ ಸಮಿತಿ ಪದಾಧಿಕಾರಿಗಳ ವಿರುದ್ಧ ಕೇಸ್ ದಾಖಲು

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನಡೆದ ಬೆಡಿ ಮಹೋತ್ಸವದ ಹಿನ್ನೆಲೆಯಲ್ಲಿ ಸರಿಯಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದ ಕಾರಣ ಬೆಡಿ ಉತ್ಸವ ಸಮಿತಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಸಮಿತಿ ಅಧ್ಯಕ್ಷ ಸದಾನಂದ ಕಾಮತ್ ಕೆ, ಸದಸ್ಯರುಗಳಾದ ಲಕ್ಷö್ಮಣ ಪ್ರಭು ಕುಂಬ್ಳೆ, ಸುಧಾಕರ ಕಾಮತ್, ದಯಾರಾಜ್ ಎಂಬವರ ವಿರುದ್ಧ ಕೇಸು ದಾಖಲಾಗಿದೆ. ಜಾತ್ರೋತ್ಸವಕ್ಕೆ ಬಂದ ಜನರಿಗೆ ಅಪಾಯಗಳುಂಟಾಗುವoತೆ ನಿರ್ಲಕ್ಷ್ಯ ವಹಿಸಿ, ಅಜಾಗರೂಕತನದಿಂದ ಸಿಡಿಮದ್ದು ಸಿಡಿಸಲಾಗಿದೆ ಎಂದು ಉಲ್ಲೇಖಿಸಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿದ್ದಾರೆ.

ಕುಂಬಳೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ದೇವರ ಬೆಡಿಕಟ್ಟೆ ಸಮೀಪ ಸಿಡಿಮದ್ದು ಪ್ರದರ್ಶನ ನಡೆದಿತ್ತು. ಭಾರೀ ಸಂಖ್ಯೆಯ ಜನರು ನೆರೆದಿದ್ದರು. ಪ್ರಸಿದ್ಧವಾದ ಕುಂಬಳೆ ಬೆಡಿ ಉತ್ಸವಕ್ಕೆ ಸರಿಯಾದ ಮುನ್ನೆಚ್ಚರಿಕಾ ಮಾನದಂಡ ಪಾಲಿಸಲಿಲ್ಲವೆಂದು ಇವರ ವಿರುದ್ಧ ಕೇಸು ದಾಖಲಿಸಲಾಗಿದೆ.

Exit mobile version